ಪಂಜಾಬ್‌ನಲ್ಲಿ ‘ಕೈ’ಪಕ್ಷ ಪಾರುಪತ್ಯ ಸಾಧಿಸಲು ಮೊದಲು ಆಶ್ರಯಿಸಿದ್ದೇ ಖಲಿಸ್ಥಾನಿಗಳನ್ನು: ಬಿಜೆಪಿ ಆರೋಪ

Khalistan movement: ಭಿಂದ್ರನ್‌ವಾಲೆಯಂಥ ಉಗ್ರರನ್ನು ಪೋಷಿಸುತ್ತಾ, ಅವರಿಗೆ ಆರ್ಥಿಕ ಸಹಾಯವನ್ನು ಸಹ ಕಾಂಗ್ರೆಸ್‌ ನೀಡುತ್ತಿತ್ತು. ಸಂಜಯ್‌ ಗಾಂಧಿ ತಂಡದಲ್ಲಿದ್ದ ಕಮಲ್‌ ನಾಥ್‌ ಖುದ್ದು ಖಲಿಸ್ಥಾನಿಗಳಿಗೆ ಆರ್ಥಿಕ ಸಂಪನ್ಮೂಲ ಒದಗಿಸಿದ್ದಕ್ಕೆ ಅನೇಕ ಸಾಕ್ಷಿ, ಪುರಾವೆಗಳಿವೆ ಎಂದು ಬಿಜೆಪಿ ಕಿಡಿಕಾರಿದೆ.

Written by - Puttaraj K Alur | Last Updated : Sep 21, 2023, 06:48 PM IST
  • ತನ್ನ ಸ್ವಾರ್ಥ ಸಾಧನೆಗಾಗಿ ಕಾಂಗ್ರೆಸ್‌ ಎಂತಹವರ ಜೊತೆ ಬೇಕಾದರೂ “ಕೈ” ಜೋಡಿಸಲು ಸದಾ ಸಿದ್ಧವಾಗಿರುತ್ತದೆ
  • ಪಂಜಾಬ್‌ನಲ್ಲಿ “ಕೈ” ಪಕ್ಷ ತನ್ನ ಪಾರುಪತ್ಯ ಸಾಧಿಸಲು ಮೊದಲು ಆಶ್ರಯಿಸಿದ್ದೇ ಈ ಖಲಿಸ್ಥಾನಿಗಳನ್ನು
  • ಭಿಂದ್ರನ್‌ವಾಲೆಯಂಥ ಉಗ್ರರನ್ನು ಪೋಷಿಸುತ್ತಾ, ಅವರಿಗೆ ಆರ್ಥಿಕ ಸಹಾಯವನ್ನು ಸಹ ಕಾಂಗ್ರೆಸ್‌ ನೀಡುತ್ತಿತ್ತು
ಪಂಜಾಬ್‌ನಲ್ಲಿ ‘ಕೈ’ಪಕ್ಷ ಪಾರುಪತ್ಯ ಸಾಧಿಸಲು ಮೊದಲು ಆಶ್ರಯಿಸಿದ್ದೇ ಖಲಿಸ್ಥಾನಿಗಳನ್ನು: ಬಿಜೆಪಿ ಆರೋಪ title=
ಕಾಂಗ್ರೆಸ್ ವಿರುದ್ಧ ಬಿಜೆಪಿ ಆಕ್ರೋಶ!

ಬೆಂಗಳೂರು: ತನ್ನ ಸ್ವಾರ್ಥ ಸಾಧನೆಗಾಗಿ ಕಾಂಗ್ರೆಸ್‌ ಎಂತಹವರ ಜೊತೆ ಬೇಕಾದರೂ “ಕೈ” ಜೋಡಿಸಲು ಸದಾ ಸಿದ್ಧವಾಗಿರುತ್ತದೆ ಎಂಬುದಕ್ಕೆ ಪಂಜಾಬಿನಲ್ಲಿ ಉಗಮಿಸಿದ ಖಲಿಸ್ಥಾನಿಗಳೇ ಸಾಕ್ಷಿ. ಪಂಜಾಬ್‌ನಲ್ಲಿ “ಕೈ” ಪಕ್ಷ ತನ್ನ ಪಾರುಪತ್ಯ ಸಾಧಿಸಲು ಮೊದಲು ಆಶ್ರಯಿಸಿದ್ದೇ ಈ ಖಲಿಸ್ಥಾನಿಗಳನ್ನು ಎಂದು ಬಿಜೆಪಿ ಆರೋಪಿಸಿದೆ.

ಭಿಂದ್ರನ್‌ವಾಲೆಯಂಥ ಉಗ್ರರನ್ನು ಪೋಷಿಸುತ್ತಾ, ಅವರಿಗೆ ಆರ್ಥಿಕ ಸಹಾಯವನ್ನು ಸಹ ಕಾಂಗ್ರೆಸ್‌ ನೀಡುತ್ತಿತ್ತು. ಸಂಜಯ್‌ ಗಾಂಧಿ ತಂಡದಲ್ಲಿದ್ದ ಕಮಲ್‌ ನಾಥ್‌ ಖುದ್ದು ಖಲಿಸ್ಥಾನಿಗಳಿಗೆ ಆರ್ಥಿಕ ಸಂಪನ್ಮೂಲ ಒದಗಿಸಿದ್ದಕ್ಕೆ ಅನೇಕ ಸಾಕ್ಷಿ, ಪುರಾವೆಗಳಿವೆ. ಆದರೆ ಕೊನೆಗೆ ಅದೇ ಖಲಿಸ್ಥಾನಿಗಳೇ ಕಾಂಗ್ರೆಸ್‌ನ ಬುಡಕ್ಕೆ ಬಿಸಿ ನೀರು ಕಾಯಿಸಿದ್ದು ಈಗ ಇತಿಹಾಸ ಎಂದು ಬಿಜೆಪಿ ಟೀಕಿಸಿದೆ.

ಕಾಂಗ್ರೆಸ್‌ನ ದತ್ತುಪುತ್ರರಾದ ಖಲಿಸ್ಥಾನಿಗಳು ಭಾರತಕ್ಕೆ ನೀಡಿದ ಉಪಟಳ ಅಷ್ಟಿಷ್ಟಲ್ಲ. ಭಾರತವನ್ನು ಬಿಟ್ಟು ತೊಲಗಿದರೂ, ಭಾರತವನ್ನು ಸದಾ ದ್ವೇಷಿಸುತ್ತಾ, ಭಾರತದ ವಿರುದ್ಧ ಸದಾ ಷಡ್ಯಂತ್ರ ರೂಪಿಸುವುದರಲ್ಲೆ ನಿರತರಾಗಿದ್ದರು. ಪಾಕಿಸ್ಥಾನದ ಪ್ರೇರಣೆ ಹಾಗೂ ಕೆನಡಾದ ಕೆಲವು ಉಪದ್ಯ್ವಾಪಿಗಳ ಸಹಕಾರದೊಂದಿಗೆ ಭಾರತದ ವಿರುದ್ಧ ಉಗ್ರ ಚಟುವಟಿಕೆಗಳನ್ನು ನಡೆಸಲು ಖಲಿಸ್ಥಾನಿಗಳಿಗೆ ಬೆಂಬಲವಾಗಿ ಕೆನಡಾ ಸರ್ಕಾರ ನಿಂತಿತ್ತು ಎಂದು ಬಿಜೆಪಿ ಕಿಡಿಕಾರಿದೆ.

ಇದನ್ನೂ ಓದಿ: ಮಹಿಳಾ ಮೀಸಲಾತಿ ಮಸೂದೆಗೆ ಕೇಂದ್ರದ ಒಪ್ಪಿಗೆ

ಕೆನಡಾ ಸರ್ಕಾರದ ಈ ನಿರ್ಧಾರವನ್ನು ಕಟು ಶಬ್ದಗಳಲ್ಲಿ ಟೀಕಿಸಿದ್ದ ಪ್ರಧಾನಿ ನರೇಂದ್ರ ಮೋದಿಯವರು, “ನಾವು ಈ ಹಿಂದೆಯೇ ಕೆನಡಾಕ್ಕೆ ಎಲ್ಲಾ ಪುರಾವೆಗಳನ್ನು ನೀಡಿದ್ದೇವೆ, ಆದರೆ ಖಲಿಸ್ಥಾನ್‌ ಮೇಲಿನ ಅವರ ಪ್ರೀತಿಯು ಭಯೋತ್ಪಾದಕ ಗುಂಪುಗಳನ್ನು ಪ್ರಾಯೋಜಿಸುತ್ತಿದೆ’ ಎಂದು ತಮ್ಮದೇ ಶೈಲಿಯಲ್ಲಿ ಕುಟುಕಿದ್ದರು ಎಂದು ಬಿಜೆಪಿ ಟ್ವೀಟ್ ಮಾಡಿದೆ.

ಭಾರತ ಸದಾ ಭಯೋತ್ಪಾದನೆ ಹಾಗೂ ಭಯೋತ್ಪಾದಕರ ಮತ್ತು ಭಯೋತ್ಪಾದಕರ ಬೆಂಬಲಿಗರ ವಿರೋಧಿ ಎಂಬ ಸ್ಪಷ್ಟ ಸಂದೇಶವನ್ನು ಜಗತ್ತಿಗೆ ನೀಡಿದ್ದು ಸಹ ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರ. ಇದರ ಜೊತೆಜೊತೆಗೆ ಖಲಿಸ್ಥಾನಿ ಭಯೋತ್ಪಾದಕ ಚಳುವಳಿಗೆ ಯಾವುದೇ ಸಂಭಾವಿತ ದೇಶದ ಬೆಂಬಲ ಸಹ ದೊರೆಯಂತೆ ಒತ್ತಡ ಹೇರುವಲ್ಲಿ ಸಹ ಪ್ರಧಾನಿ ಮೋದಿಯವರ ಸರ್ಕಾರ ಸಂಪೂರ್ಣ ಯಶಸ್ವಿಯಾಗಿದೆ ಎಂದು ಬಿಜೆಪಿ ಹೇಳಿದೆ.

ಅಂದು ಕಾಂಗ್ರೆಸ್‌ ಬಿತ್ತಿದ ಬೀಜ, ಇಂದು ಹೆಮ್ಮರವಾಗಿ ಭಾರತ ಹಾಗೂ ಭಾರತೀಯರಿಗೆ ಕಿರುಕುಳ ನೀಡುತ್ತಿದೆ. ಆದರೆ ಇದಾವುದಕ್ಕೂ ಜಗ್ಗುವ, ಬಗ್ಗುವ ದೇಶ ನಮ್ಮದಲ್ಲ. ಪಾಕಿಸ್ಥಾನ, ಚೀನಾ ದೇಶಗಳನ್ನೇ ಹಿಮ್ಮೆಟ್ಟಿಸಿದ ಸಮರ್ಥ ಹಾಗೂ ಸದೃಢ ನಾಯಕತ್ವ ಇದೀಗ ಭಾರತದ್ದಾಗಿದೆ ಎಂದು ಬಿಜೆಪಿ ಟ್ವೀಟ್ ಮಾಡಿದೆ.

ಇದನ್ನೂ ಓದಿ: ರಾಜ್ಯ ಕಾಂಗ್ರೆಸ್ ಸರಕಾರ ವಜಾಕ್ಕೆ ಹೆಚ್.ಡಿ.ಕುಮಾರಸ್ವಾಮಿ ಆಗ್ರಹ

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News