ಬೆಂಗಳೂರಿನಲ್ಲಿ ದುಷ್ಕರ್ಮಿಗಳಿಂದ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಸ್ಮಾರಕ ಫಲಕ ನಾಶ

ಗ್ರ್ಯಾನೈಟ್ ಶಿಲೆಯಲ್ಲಿದ್ದ ಸಂದೀಪ್ ಉನ್ನಿಕೃಷ್ಣನ್ ಅವರ ಸ್ಮಾರಕ ಫಲಕವನ್ನು ಭಾನುವಾರದಂದು ದುಷ್ಕ್ರಮಿಗಳು ನಾಶಪಡಿಸಿದ್ದಾರೆ.

Last Updated : Sep 17, 2018, 06:26 PM IST
ಬೆಂಗಳೂರಿನಲ್ಲಿ ದುಷ್ಕರ್ಮಿಗಳಿಂದ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಸ್ಮಾರಕ ಫಲಕ ನಾಶ title=
Photo:twitter

ಬೆಂಗಳೂರು: ಗ್ರ್ಯಾನೈಟ್ ಶಿಲೆಯಲ್ಲಿದ್ದ ಸಂದೀಪ್ ಉನ್ನಿಕೃಷ್ಣನ್ ಅವರ ಸ್ಮಾರಕ ಫಲಕವನ್ನು ಭಾನುವಾರದಂದು ದುಷ್ಕ್ರಮಿಗಳು ನಾಶಪಡಿಸಿದ್ದಾರೆ.

ಬೆಂಗಳೂರಿನ ಯಲಹಂಕದಲ್ಲಿ ಅಳವಡಿಸಿದ್ದ ಗ್ರ್ಯಾನೆಟ್ ಶಿಲೆಯ ಫಲಕವನ್ನು ನಾಶಪಡಿಸಿದ್ದಾರೆ.ಈಗ ಈ ನಾಶಪಡಿಸಿರುವ ಫಲಕದ ವಿಚಾರವಾಗಿ Soldiering ಎನ್ನುವ ಟ್ವಿಟ್ಟರ್ ಖಾತೆಯಿಂದ ಟ್ವೀಟ್ ಮಾಡಲಾಗಿದೆ.ಅಲ್ಲದೆ ನಾಶವಾಗಿರುವ ಫಲಕವನ್ನು ಪುನಃ ನಿರ್ಮಿಸಲು ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ಈಗ ಈ ದುಷ್ಕರ್ಮಿಗಳ ಕ್ರಮಕ್ಕೆ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಖಂಡಿಸಿವೆ.ಆಲ್ಲದೇ ಆರೋಪಿಗಳನ್ನು ಬಂಧಿಸಿ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿವೆ. ಈ ಘಟನೆಗೆ  ಪ್ರತಿಕ್ರಿಯೆ ನೀಡಿರುವ   ಕರ್ನಾಟಕ ಉಪಮುಖ್ಯಮಂತ್ರಿ ಜಿ ಮುಖ್ಯಮಂತ್ರಿ ಜಿ  ಪರಮೇಶ್ವರ ಅವರು ಟ್ವೀಟ್ ಮಾಡಿ ಅಚ್ಚರಿ ವ್ಯಕ್ತಪಡಿಸಿರುವುದಲ್ಲದೆ ಬಿಬಿಎಂಪಿ ತಕ್ಷಣ ಇದನು ಮರು ಸ್ಥಾಪಿಸಲು ತುರ್ತುಕ್ರಮವನ್ನು ತೆಗೆದುಕೊಳ್ಳಬೇಕೆಂದು ಅವರು ಆದೇಶಿಸಿದ್ದಾರೆ. 

ಇನ್ನೊಂದೆಡೆಗೆ  ಬಿಜೆಪಿ ಸಂಸದ  ರಾಜೀವ್ ಚಂದ್ರಶೇಖರ್ ಕೂಡ ಈ ಘಟನೆಯನ್ನು ಖಂಡಿಸಿದ್ದಾರೆ.

Trending News