ಶಾಲೆಯ ನೀರಿನ ಟ್ಯಾಂಕ್‌‌ಗೆ ವಿಷ ಬೆರೆಸಿದ ದುಷ್ಕರ್ಮಿಗಳು, 11 ಮಕ್ಕಳು ಅಸ್ವಸ್ಥ

ದುಷ್ಕರ್ಮಿಗಳು ಶಾಲೆಯ ಕುಡಿಯುವ ನೀರಿನ ಟ್ಯಾಂಕಿಗೆ ಕ್ರಿಮಿನಾಶಕ ಬೆರೆಸಿದ ನೀರು ಕುಡಿದು ಅಸ್ವಸ್ಥರಾದ 11 ಮಕ್ಕಳಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದ್ದು, ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

Last Updated : Jul 15, 2019, 03:31 PM IST
ಶಾಲೆಯ ನೀರಿನ ಟ್ಯಾಂಕ್‌‌ಗೆ ವಿಷ ಬೆರೆಸಿದ ದುಷ್ಕರ್ಮಿಗಳು, 11 ಮಕ್ಕಳು ಅಸ್ವಸ್ಥ title=
ಸಾಂದರ್ಭಿಕ ಚಿತ್ರ

ಮಂಡ್ಯ: ಶಾಲೆಯ ನೀರಿನ ಟ್ಯಾಂಕಿಗೆ ದುಷ್ಕರ್ಮಿಗಳು ವಿಷ ಬೆರೆಸಿದ ಪರಿಣಾಮ ಆ ನೀರನ್ನು ಕುಡಿದ 11 ಮಕ್ಕಳು ಅಸ್ವಸ್ಥರಾಗಿ ಆಸ್ಪತ್ರೆ ಸೇರಿರುವ ಘಟನೆ ಮಂಡ್ಯ ತಾಲೂಕಿನ ಎ.ಹುಲ್ಕೆರೆ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಸೋಮವಾರ ನಡೆದಿದೆ. 

ದುಷ್ಕರ್ಮಿಗಳು ಶಾಲೆಯ ಕುಡಿಯುವ ನೀರಿನ ಟ್ಯಾಂಕಿಗೆ ಕ್ರಿಮಿನಾಶಕ ಬೆರೆಸಿದ ನೀರು ಕುಡಿದು ಅಸ್ವಸ್ಥರಾದ 11 ಮಕ್ಕಳಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದ್ದು, ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಸ್ವಸ್ಥ ವಿದ್ಯಾರ್ಥಿಗಳನ್ನು ದರ್ಶನ್, ಧನುಶ್, ಶಿವಲಿಂಗ, ಪ್ರಜ್ವಲ್, ತೇಜು, ಶಿವಲಿಂಗ, ಯಶವಂತ್, ಮಯೂರ್, ಚಂದ್ರು ಎಂದು ಗುರುತಿಸಲಾಗಿದೆ. ಘಟನೆ ಕುರಿತಂತೆ ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 

Trending News