ಸಾಲು ರಜೆಯಲ್ಲಿ ಕೊಡಗಿಗೆ ಹರಿದುಬಂದ ಪ್ರವಾಸಿಗರು..! ಪ್ರಕೃತಿ ಸೌಂದರ್ಯದ ನಡುವೆ ಎಂಜಾಯ್

Kodagu : ಪ್ರವಾಸೋದ್ಯಮ ಡಿಸೆಂಬರ್‌ ಮಾಸಾಂತ್ಯದ ವೇಳೆಗೆ ಚೇತರಿಕೆ ಕಂಡು ಬರುತ್ತಿದೆ. ಕ್ರಿಸ್‌ಮಸ್‌ ರಜೆ ಆರಂಭ ಆಗುತ್ತಿದಂತೆಯೇ ಜಿಲ್ಲೆಯ ಕಡೆಗೆ ಪ್ರವಾಸಿಗರು ದೊಡ್ಡ ಸಂಖ್ಯೆಯಲ್ಲಿ ಬರುತ್ತಿದ್ದಾರೆ.   

Written by - Savita M B | Last Updated : Dec 25, 2023, 05:22 PM IST
  • ಕೊಡಗು ಪ್ರಕೃತಿ ಸೌಂದರ್ಯದಲ್ಲಿ ಕರ್ನಾಟಕದ ಕಾಶ್ಮೀರದಂತಿದೆ.
  • ಇತ್ತೀಚಿಗೆ ಕೊಡಗಿನತ್ತ ಆಗಮಿಸುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ.
  • ಜಂಜಾಟದಲ್ಲಿದ್ದವರು ಇಲ್ಲಿನ ನಿಸರ್ಗ ರಮಣೀಯ ಸ್ಥಳಗಳಲ್ಲಿ ಒಂದಷ್ಟು ಸಮಯವನ್ನು ಕಳೆಯಲೆಂದೇ ಜನ ಇತ್ತ ಮುಖ ಮಾಡುತ್ತಿದ್ದಾರೆ.
ಸಾಲು ರಜೆಯಲ್ಲಿ ಕೊಡಗಿಗೆ ಹರಿದುಬಂದ ಪ್ರವಾಸಿಗರು..! ಪ್ರಕೃತಿ ಸೌಂದರ್ಯದ ನಡುವೆ ಎಂಜಾಯ್ title=

ಸಾಕಾನೆ ಶಿಬಿರಕ್ಕೆ ಹೆಸರಾದ ದುಬಾರೆ, ಕಾವೇರಿ ನಿಸರ್ಗಧಾಮ, ಹಾರಂಗಿ ಜಲಾಶಯ, ಜಿಲ್ಲೆಯ ಗಡಿಯಲ್ಲಿರುವ ಟಿಬೆಟಿಯನ್‌ ಗೋಲ್ಡನ್‌ ಟೆಂಪಲ್‌, ಮಡಿಕೇರಿ ರಾಜಾಸೀಟ್‌, ತಲಕಾವೇರಿ, ಭಾಗಮಂಡಲ ಸೇರಿ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಲ್ಲಿ ಶನಿವಾರದಿಂದಲೇ ಪ್ರವಾಸಿಗರ ದಟ್ಟಣೆ ಹೆಚ್ಚಾಗಿ ಕಂಡುಬರುತ್ತಿದ್ದು, ಪ್ರವಾಸೋದ್ಯಮಿಗಳ ಮುಖದಲ್ಲಿ ಮತ್ತೆ ನಗು ಕಾಣಿಸಿಕೊಂಡಿದೆ.

ಕೊಡಗು ಪ್ರಕೃತಿ ಸೌಂದರ್ಯದಲ್ಲಿ ಕರ್ನಾಟಕದ ಕಾಶ್ಮೀರದಂತಿದೆ. ಇತ್ತೀಚಿಗೆ ಕೊಡಗಿನತ್ತ ಆಗಮಿಸುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ. ಜಂಜಾಟದಲ್ಲಿದ್ದವರು ಇಲ್ಲಿನ ನಿಸರ್ಗ ರಮಣೀಯ ಸ್ಥಳಗಳಲ್ಲಿ ಒಂದಷ್ಟು ಸಮಯವನ್ನು ಕಳೆಯಲೆಂದೇ ಜನ ಇತ್ತ ಮುಖ ಮಾಡುತ್ತಿದ್ದಾರೆ. 

ಇದನ್ನೂ ಓದಿ-ಕೊಪ್ಪಳ: ಹೊಸ ಇತಿಹಾಸ ಬರೆದ ಹನುಮಮಾಲಾ ವಿಸರ್ಜನೆ ಕಾರ್ಯಕ್ರಮ

ಇಲ್ಲಿರುವ ಬಹುತೇಕ ಪ್ರವಾಸಿ ತಾಣಗಳು ನಿಸರ್ಗ ನಿರ್ಮಿತವಾಗಿರುವುದರಿಂದ ಸದಾ ಪ್ರಶಾಂತತೆ ನೆಲೆಸಿರುತ್ತದೆ. ಹೀಗಾಗಿಯೇ ಬಹುತೇಕ ಪ್ರವಾಸಿಗರಿಗೆ ಕೊಡಗು ಇಷ್ಟವಾಗುತ್ತಿದೆ. ಬೆಟ್ಟ-ಗುಡ್ಡಗಳು, ಜಲಪಾತಗಳು, ಕಾಫಿ ತೋಟಗಳು ಪ್ರವಾಸಿಗರನ್ನು ಕೊಡಗಿನತ್ತ ಸೆಳೆಯುತ್ತದೆಕ್ರಿಸ್‌ಮಸ್‌ ಮತ್ತು ಹೊಸ ವರ್ಷದ ಹಿನ್ನೆಲೆ ಶಾಲಾ-ಕಾಲೇಜು, ಸಾಫ್ಟ್‌ವೇರ್‌ ಉದ್ಯಮ ಸೇರಿದಂತೆ ಬಹುರಾಷ್ಟ್ರೀಯ ಕಂಪನಿಗಳಿಗೆ ಸರಣಿ ರಜೆ ಆರಂಭವಾಗಲಿದೆ. 

ಹೀಗಾಗಿ ಅತಿ ಹೆಚ್ಚು ಮಂದಿ ಕೊಡಗು ಪ್ರವಾಸಕ್ಕೆ ಸಿದ್ಧತೆ ನಡೆಸಿದ್ದಾರೆ. ಇದರಿಂದ ಡಿ.24ರಿಂದ ಜ.10ರ ವರೆಗೆ ಜಿಲ್ಲೆಯ ಬಹುತೇಕ ಹೋಂಸ್ಟೇ, ರೆಸಾರ್ಟ್‌ ಮತ್ತು ಹೋಟೆಲ್‌ಗಳು ಈಗಾಗಲೇ ಬುಕ್ಕಿಂಗ್‌ ಭರ್ತಿಯಾಗಿದೆ. ಕ್ರಿಸ್‌ಮಸ್‌ ಮತ್ತು ನ್ಯೂ ಇಯರ್‌ ಆಸುಪಾಸಿನ ದಿನಗಳಂತೂ ಬೇರೆ ಯಾವುದೋ ಕೆಲಸಕ್ಕಾಗಿ ಜಿಲ್ಲೆಗೆ ಬರುವವರಿಗೂ ರೂಂಗಳು ಸಿಗದಂತಹ ವಾತಾವರಣ ನಿರ್ಮಾಣವಾಗಲಿದೆ.

ಇದನ್ನೂ ಓದಿ-ಹನುಮಮಾಲಾ ಕಾರ್ಯಕ್ರಮಕ್ಕೆ ತೆರೆ

ವರ್ಷಾಂತ್ಯದ ದಿನಗಳಲ್ಲಿ ಐಶಾರಾಮಿ ಹೋಟೆಲ್‌ ಮತ್ತು ರೆಸಾರ್ಟ್‌ಗಳಲ್ಲಿನ ಎಲ್ಲಾ ರೂಂಗಳನ್ನೂ ಈಗಾಗಲೇ ಕಾಯ್ದಿರಿಸಲ್ಪಟ್ಟಿದ್ದು, ಮಧ್ಯಮ ಮತ್ತು ಸಾಧಾರಣ ಹೊಂ ಸ್ಟೇ, ಲಾಡ್ಜ್‌, ಹೋಟೆಲ್‌ಗಳಲ್ಲಿ ಮಾತ್ರ ಕೊಠಡಿಗಳು ಲಭ್ಯವಿದೆ. ಆನ್‌ಲೈನ್‌ ಮತ್ತು ಟೆಲಿಫೋನ್‌ ಮೂಲಕ ಸಾಕಷ್ಟು ವಿಚಾರಣೆಗಳು ಬರುತ್ತಿದ್ದು, ತಮ್ಮ ದರಕ್ಕೆ ಹೊಂದಾಣಿಕೆಯಾಗುವವರ ಬುಕ್ಕಿಂಗ್‌ ಸ್ವೀಕರಿಸುವಲ್ಲಿ ಹೋಟೆಲ್‌, ಲಾಡ್ಜ್‌ ಸಿಬ್ಬಂದಿ ನಿರತರಾಗಿದ್ದಾರೆ.

ಶಾಲಾ ಕಾಲೇಜುಗಳಿಗೆ ರಜೆಯಿರುವುದರಿಂದ ಪ್ರವಾಸಿಗರು ಕೊಡಗಿನತ್ತ ಮುಖ ಮಾಡಿದ್ದು, ಹೀಗೆ ಬರುವ ಪ್ರವಾಸಿಗರು ಮಡಿಕೇರಿಯಲ್ಲಿರುವ ರಾಜಾಸೀಟ್‌ಗೆ ಲಗ್ಗೆಯಿಡುತ್ತಿದ್ದು, ಪ್ರಶಾಂತ ಸ್ಥಳದಲ್ಲಿ ನಿಸರ್ಗ ಸೌಂದರ್ಯವನ್ನು ಸವಿದು ತಮ್ಮೂರ ಹಾದಿಯನ್ನು ಹಿಡಿಯುತ್ತಿದ್ದರು. ಆದರೆ ಇನ್ಮುಂದೆ ಪ್ರವಾಸಿಗರು ಇಲ್ಲಿ ಒಂದಷ್ಟು ಕಸರತ್ತು ಮಾಡಿ ಹೊಸ ಅನುಭವ ಪಡೆಯುತ್ತಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News