ಬಾದಾಮಿಗೂ ಕಂಬಳಿ ಹಾಕಿರುವ ಸಿದ್ದರಾಮಯ್ಯ!

   

Last Updated : Apr 18, 2018, 12:03 PM IST
ಬಾದಾಮಿಗೂ ಕಂಬಳಿ ಹಾಕಿರುವ ಸಿದ್ದರಾಮಯ್ಯ! title=

ಬೆಂಗಳೂರು:  ಈಗಾಲೇ ಬಾದಾಮಿ ಕ್ಷೇತ್ರದ ಟಿಕೆಟ್‌ ಘೋಷಣೆಯಾಗಿದ್ದರೂ,ಸಹಿತ ಸಿಎಂ ಸಿದ್ದರಾಮಯ್ಯ ಅವರ ಎರಡು ಕ್ಷೇತ್ರಗಳ ಸ್ಪರ್ಧೆ ಆಸೆ ಇನ್ನೂ ಜೀವಂತವಾಗಿ ಇಟ್ಟಿದ್ದಾರೆ. ಅದಕ್ಕೆ ಪೂರಕವಾಗಿ ಬಾದಾಮಿ ಕ್ಷೇತ್ರದ ಬಿ. ಫಾರಂ ತಡೆ ಹಿಡಿಲಾಗಿದೆ.

ಈ ಹಿಂದೆ ಬಾದಾಮಿ ಕ್ಷೇತ್ರದಲ್ಲಿ ಸಿಎಂ ಸಿದ್ದರಾಮಯ್ಯ ಸ್ಪರ್ಧಿಸುತ್ತಾರೆ ಎನ್ನುವ ಕಾರಣಕ್ಕಾಗಿ ಹಾಲಿಶಾಸಕ ಬಿ.ಬಿ. ಚಿಮ್ಮನಕಟ್ಟಿ ತಾವು ಕ್ಷೇತ್ರ ಬಿಟ್ಟು ಕೊಡಲು ತೀರ್ಮಾನಿಸಿದ್ದರು. ಆದರೆ, ನಂತರ ನಡೆದ ಕಾಂಗ್ರೆಸ್‌ ಸಭೆಯಲ್ಲಿ  ಇದಕ್ಕೆ  ವಿರೋಧ ವ್ಯಕ್ತವಾಗಿತ್ತು , ಆದ್ದರಿಂದ ಸಿದ್ದರಾಮಯ್ಯನವರು  ಚಾಮುಂಡೇಶ್ವರಿಯಲ್ಲಿ ಮಾತ್ರ ಸ್ಪರ್ಧೆ ಮಾಡಲು ನಿರ್ಧರಿಸಿದ್ದರು.ಇದರಿಂದ ಸಿದ್ದರಾಮಯ್ಯ ನವರು ನಂತರ ತಮ್ಮ ಆಪ್ತರಾದ  ದೇವರಾಜ್‌ ಪಾಟೀಲ್‌ಗೆ ಟಿಕೆಟ್‌ ಕೊಡಿಸಿದ್ದರು. ಆದರೆ ಇದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿತ್ತು.  ಚಿಮ್ಮನಕಟ್ಟಿ ಕೂಡಾ ಬಾದಾಮಿ ಕ್ಷೇತ್ರದಲ್ಲಿ ಸಿದ್ದರಾಮಯ್ಯನವರು  ಸ್ಪರ್ಧೆ ಮಾಡುವುದಿಲ್ಲ ಎನ್ನುವುದಾದರೆ , ತಮಗೇ ಟಿಕೆಟ್‌ ನೀಡುವಂತೆ ಪಟ್ಟು ಬಿದ್ದಿದ್ದಾರೆ ಎನ್ನಲಾಗಿದೆ. 

ಇತ್ತ ಸಿದ್ದರಾಮಯ್ಯನವರು ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್‌ಗೆ ಬಾದಾಮಿಯ ಬಿ ಫಾರ್ಮ್ ನ್ನು ದೇವರಾಜ್ ಪಾಟೀಲ್ ಗೆ ನೀಡದಂತೆ ಸೂಚಿಸಿದ್ದಾರೆ. ಆ ಮೂಲಕ ಸಿದ್ದರಾಮಯ್ಯನವರು  ಚಾಮುಂಡೇಶ್ವರಿ ಜೊತೆಗೆ ಬಾದಾಮಿಗೂ ಕಂಬಳಿ ಹೊದಿಸುವ ಯತ್ನವನ್ನು ಜೀವಂತವಾಗಿರಿಸಿಕೊಂಡಿದ್ದಾರೆ ಎನ್ನುತ್ತಿವೆ ಕಾಂಗ್ರೆಸ್ ಮೂಲಗಳು.

 

Trending News