ನವದೆಹಲಿ: ಹಿಂದುಸ್ತಾನ್ ಟೈಮ್ಸ್ ನ ಶೃಂಗಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಕುಮಾರಸ್ವಾಮಿ ನಮ್ಮ ಸರ್ಕಾರದಲ್ಲಿ ಯಾವುದೇ ಸೂಪರ್ ಸಿಎಂ ಇಲ್ಲ,ನಾನೇ ಐದು ವರ್ಷ ಸಿಎಂ ಆಗಿ ಮುಂದುವರೆಯುತ್ತೇನೆ ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷದಿಂದ ನಮಗೆ ಸಂಪೂರ್ಣ ಸಹಕಾರವಿದ್ದು ಆದ್ದರಿಂದ ಐದೂ ವರ್ಷಗಳ ಕಾಲ ನಾನೇ ಸಿಎಂ ಆಗಿ ಸ್ಥಿರ ಅಧಿಕಾರವನ್ನು ನೀಡುತ್ತೇನೆ ಎಂದು ಕುಮಾರಸ್ವಾಮಿ ತಿಳಿಸಿದರು.ಇನ್ನು ಮುಂದುವರೆದು ಐದು ಕರ್ನಾಟಕದಲ್ಲಿ ಜನರೇ ಸೂಪರ್ ಸಿಎಂ, ಆದ್ದರಿಂದ ಜನರು ಹೇಳಿದಂತೆ ನಾನು ಕಾರ್ಯ ನಿರ್ವಹಿಸುತ್ತೇನೆ ನಮ್ಮಲ್ಲಿ ಯಾವುದೇ ರೀತಿಯ ಸೂಪರ್ ಸಿಎಂ ಇಲ್ಲವೆಂದು ಸ್ಪಷ್ಟಪಡಿಸಿದರು.
ಇದೇ ವೇಳೆ ಪೆಟ್ರೋಲ್ ಮತ್ತು ಡಿಸೈಲ್ ನ್ನು ಜಿಎಸ್ಟಿ ವ್ಯಾಪ್ತಿಗೆ ತರುವ ವಿಚಾರದ ಬಗ್ಗೆ ಮಾತನಾಡುತ್ತಾ ಕುಮಾರಸ್ವಾಮಿ" ಬೆಲೆ ಏರಿಕೆ ಸಮಸ್ಯೆಗೆ ಇವುಗಳನ್ನು ಜಿಎಸ್ಟಿ ವ್ಯಾಪ್ತಿಗೆ ತರುವುದು ಸೂಕ್ತ ಪರಿಹಾರವಲ್ಲ ಬದಲಾಗಿ ಕೇಂದ್ರ ಸರ್ಕಾರವು ಇದಕ್ಕೆ ಪರ್ಯಾಯವಾದ ಪರಿಹಾರ ಮಾರ್ಗವನ್ನು ಕಂಡುಕೊಳ್ಳಬೇಕು.ಇಲ್ಲದಿದ್ದರೆ ಇದರಿಂದ ರಾಜ್ಯದ ಆದಾಯಕ್ಕೆ ಇದು ಭಾರಿ ಪೆಟ್ಟು ಬೀಳಲಿದೆ" ಎಂದು ತಿಳಿಸಿದರು