Kedarnath Dham: ಭಕ್ತಾಧಿಗಳಿಲ್ಲದೆ ತೆರೆದ ಕೇದಾರನಾಥ ಧಾಮ್, ಭಕ್ತರಿಗೆ ಆನ್‌ಲೈನ್‌ನಲ್ಲಿ 'ದರ್ಶನ'

ಕರೋನಾ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಸತತ ಎರಡನೇ ಬಾರಿಗೆ ಭಕ್ತಾಧಿಗಳಿಲ್ಲದೆ ಕೇದಾರನಾಥ ದೇವಾಲಯದ ಬಾಗಿಲುಗಳನ್ನು ತೆರೆಯಲಾಗಿದೆ. ಭಕ್ತಾಧಿಗಳಿಗಾಗಿ ಆನ್‌ಲೈನ್ 'ದರ್ಶನ' ನೀಡುವ ವ್ಯವಸ್ಥೆ ಮಾಡಲಾಗಿತ್ತು.  

Written by - Yashaswini V | Last Updated : May 17, 2021, 08:00 AM IST
  • ಕರೋನಾ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಸತತ ಎರಡನೇ ಬಾರಿಗೆ ಭಕ್ತಾಧಿಗಳಿಲ್ಲದೆ ಕೇದಾರನಾಥ ದೇವಾಲಯದ ಬಾಗಿಲುಗಳನ್ನು ತೆರೆಯಲಾಗಿದೆ.
  • ಸಾಂಕ್ರಾಮಿಕ ಉಲ್ಬಣಗೊಂಡ ಹಿನ್ನೆಲೆಯಲ್ಲಿ, ಪ್ರಸಿದ್ಧ 'ಚಾರ್ ಧಾಮ್' ಯಾತ್ರೆಯನ್ನು ಅಮಾನತುಗೊಳಿಸಲು ಚಾರ್ ಧಾಮ್ ದೇವಸ್ಥಾನಂ ಮಂಡಳಿ ನಿರ್ಧರಿಸಿದೆ
  • ಬದ್ರಿನಾಥ್, ಕೇದಾರನಾಥ, ಯಮುನೋತ್ರಿ, ಮತ್ತು ಗಂಗೋತ್ರಿ ಧಮ್ಸ್ ದೇವಾಲಯಗಳ 'ದರ್ಶನ' ಪಡೆಯಲು ಲಕ್ಷಾಂತರ ಭಕ್ತರಿಗೆ ಅನುಕೂಲವಾಗುವಂತೆ ಮಂಡಳಿಯು ಆನ್‌ಲೈನ್‌ 'ದರ್ಶನ'ಕ್ಕೆ ಅಗತ್ಯವಾದ ಸಿದ್ಧತೆಗಳನ್ನು ಮಾಡಿದೆ
Kedarnath Dham: ಭಕ್ತಾಧಿಗಳಿಲ್ಲದೆ ತೆರೆದ ಕೇದಾರನಾಥ ಧಾಮ್, ಭಕ್ತರಿಗೆ ಆನ್‌ಲೈನ್‌ನಲ್ಲಿ 'ದರ್ಶನ' title=
Kedarnath Dham doors opened today (Image courtesy: ANI)

ನವದೆಹಲಿ: ಸಾಂಪ್ರದಾಯಿಕ ವಿಧಿ-ವಿಧಾನಗಳೊಂದಿಗೆ ವಿಶ್ವಪ್ರಸಿದ್ಧ ಭಗವಾನ್ ಕೇದಾರನಾಥ ಧಾಮ್ (Kedarnath Dham) ಬಾಗಿಲುಗಳನ್ನು ಇಂದು ಬೆಳಿಗ್ಗೆ 5 ಗಂಟೆಗೆ ತೆರೆಯಲಾಯಿತು. ಕವಾಟವನ್ನು ತೆರೆಯುವ ಸಂದರ್ಭದಲ್ಲಿ ಯಾತ್ರಿಕರು ಮತ್ತು ಸ್ಥಳೀಯ ಜನರ ಕೊರತೆ ಇಲ್ಲಿ ಎದ್ದು ಕಾಣುತ್ತಿತ್ತು. ಕರೋನಾ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಸತತ ಎರಡನೇ ಬಾರಿಗೆ ಭಕ್ತಾಧಿಗಳಿಲ್ಲದೆ ಕೇದಾರನಾಥ ಧಾಮ್ ದೇವಾಲಯದ ಬಾಗಿಲುಗಳನ್ನು ತೆರೆಯಲಾಗಿದೆ. ಇದೇ ವೇಳೆ ಭಕ್ತಾಧಿಗಳಿಗಾಗಿ ಆನ್‌ಲೈನ್ 'ದರ್ಶನ' ವ್ಯವಸ್ಥೆಯನ್ನು ಮಾಡಲಾಗಿತ್ತು.

ಕೇದಾರನಾಥ ದೇವಾಲಯದ ತೆರೆದಿರುವ ಬಗ್ಗೆ ಟ್ವೀಟ್ ಮಾಡಿರುವ ಉತ್ತರಾಖಂಡ ಸಿಎಂ ತಿರತ್ ಸಿಂಗ್ ರಾವತ್, "ಕೇದಾರನಾಥ ದೇವಾಲಯವನ್ನು ಇಂದು ಬೆಳಿಗ್ಗೆ 5 ಗಂಟೆಗೆ ಎಲ್ಲಾ ಆಚರಣೆಗಳೊಂದಿಗೆ ಪುನಃ ತೆರೆಯಲಾಯಿತು. ಎಲ್ಲರೂ ಆರೋಗ್ಯವಾಗಿರಲಿ ಎಂದು ನಾನು ಬಾಬಾ ಕೇದಾರನಾಥ ಅವರನ್ನು ಪ್ರಾರ್ಥಿಸುತ್ತೇನೆ" ಎಂದು ಬರೆದಿದ್ದಾರೆ.

ಇದನ್ನೂ ಓದಿ -  Char Dham Yatra: ಕರೋನಾ ಹಿನ್ನಲೆಯಲ್ಲಿ ಉತ್ತರಾಖಂಡ ಸರ್ಕಾರದ ಮಹತ್ವದ ನಿರ್ಧಾರ

ಕೇದಾರನಾಥ ಧಾಮದ (Kedarnath Dham) ಬಾಗಿಲು ತೆರೆಯುವ ಮೊದಲು ಎಲ್ಲಾ ಸಿದ್ಧತೆಗಳನ್ನು ಮಾಡಲಾಗಿತ್ತು. ಇಡೀ ದೇವಾಲಯವನ್ನು 11 ಕ್ವಿಂಟಾಲ್ ಹೂವುಗಳಿಂದ ಅಲಂಕರಿಸಲಾಗಿದೆ. ಕೇದಾರಪುರಿಯಲ್ಲಿನ ವಾತಾವರಣವು ಭಗವಾನ್ ಶಂಕರನ ಮಂತ್ರಮುಗ್ಧಗೊಳಿಸುವ ಮಧುರ ಗೀತೆಗಳಿಂದ ಮುಳುಗಿತ್ತು. ಇಂದು ಬೆಳಿಗ್ಗೆ ಕೇದಾರನಾಥ ಧಾಮ್ ಬಾಗಿಲು ತೆರೆಯುವ ಸಮಯದಲ್ಲಿ ಕೇದಾರನಾಥ ರಾವಲ್ ಭೀಮಾಶಂಕರ್ ಲಿಂಗ, ಮುಖ್ಯ ಅರ್ಚಕ ಬಾಗೇಶ್ ಲಿಂಗ, ಜಿಲ್ಲಾ ಮ್ಯಾಜಿಸ್ಟ್ರೇಟ್ ಮನುಜ್ ಗೋಯಲ್, 21 ತೀರ್ಥಪುರೋಹಿತರು, ದೇವಸ್ಥಾನಂ ಮಂಡಳಿಯ 14 ನೌಕರರು, ಸಿಒ ಗುಪ್ತಕಾಶಿ ಅನಿಲ್ ಮನ್ರಾಜ್, ಚೌಕಿ ಇಂಜಾರ್ ಮಂಜುಲ್ ರಾವತ್, ಕ್ಯಾಸ್ಟಬಲ್, 4 ದೇವಾಲಯಗಳ ಭದ್ರತಾ ಸಿಬ್ಬಂದಿ ಸಿಬ್ಬಂದಿ ಉಪಸ್ಥಿತರಿದ್ದರು.

ಸರ್ಕಾರ ಮತ್ತು ದೇವಸ್ತಾನಂ ಮಂಡಳಿಯ ಕೋವಿಡ್ ಮಾರ್ಗಸೂಚಿಗಳನ್ನು ಅನುಸರಿಸಿ ಇಂದು ಬೆಳಿಗ್ಗೆ ಕೇದಾರನಾಥದ ಬಾಗಿಲುಗಳನ್ನು ತೆರೆಯಲಾಗಿದೆ. ಪ್ರಸ್ತುತ, ದೇವಾಲಯದ ಗರ್ಭಗುಡಿಗೆ ಭೇಟಿ ನೀಡಲು ಯಾರಿಗೂ ಅವಕಾಶವಿಲ್ಲ.

ಇದನ್ನೂ ಓದಿ - Sun Transit: ಸೂರ್ಯನ ರಾಶಿ ಪರಿವರ್ತನೆಯಿಂದ ಈ ರಾಶಿಯವರಿಗೆ ಅದೃಷ್ಟ

ಕರೋನಾವೈರಸ್ ಸಾಂಕ್ರಾಮಿಕ ಉಲ್ಬಣಗೊಂಡ ಹಿನ್ನೆಲೆಯಲ್ಲಿ, ಚಾರ್ ಧಾಮ್ ದೇವಸ್ಥಾನಂ ಮಂಡಳಿಯು ಪ್ರಸಿದ್ಧ 'ಚಾರ್ ಧಾಮ್' (Char Dham) ಯಾತ್ರೆಯನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ. ಆದರೆ ಮಂಡಳಿಯು ವಾಸ್ತವಿಕ 'ಭೇಟಿ'ಗೆ ಅಗತ್ಯವಾದ ಸಿದ್ಧತೆಗಳನ್ನು ಮಾಡಿದೆ. ಇದು ದೇಶಾದ್ಯಂತ ಲಕ್ಷಾಂತರ ಭಕ್ತರಿಗೆ ವರ್ಚುವಲ್ ಆಗಿ ಬದ್ರಿನಾಥ್, ಕೇದಾರನಾಥ, ಯಮುನೋತ್ರಿ ಮತ್ತು ಗಂಗೋತ್ರಿ ಧಾಮಗಳ 'ದರ್ಶನ' ಪಡೆಯಲು ಅನುಕೂಲವಾಗಲಿದೆ.

ಗರ್ವಾಲ್ ಆಯುಕ್ತ ಮತ್ತು ಉತ್ತರಾಖಂಡ ಚಾರ್ಧಂ ದೇವಸ್ತಾನಂ ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರವಿನಾಥ್ ರಾಮನ್ ಮಾತನಾಡಿ, ಭಕ್ತರಿಗೆ ವರ್ಚುವಲ್ ಆಗಿ ದೇವಾಲಯದ ದರ್ಶನ ಪಡೆಯಲು ಅವಕಾಶ ನೀಡುವಂತೆ ವೆಬ್‌ಸೈಟ್ ಮತ್ತು ಇತರ ಮಾಧ್ಯಮಗಳನ್ನು ನವೀಕರಿಸಲಾಗುತ್ತಿದೆ. ಆದಾಗ್ಯೂ, ದೇವಾಲಯಕ್ಕೆ ಸಂಬಂಧಿಸಿದ ಜನರಿಗೆ ಎಲ್ಲಾ COVID-19 ಪ್ರೋಟೋಕಾಲ್‌ಗಳೊಂದಿಗೆ ಪ್ರವೇಶವನ್ನು ಅನುಮತಿಸಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News