ಪ್ರತಿಸ್ಪರ್ಧಿಗೆ ಹೊಡೆದು ಬಿಗ್ ಬಾಸ್’ನಿಂದ ಹೊರ ಹೋಗಿದ್ದ ಖ್ಯಾತ ನಟ ರಿ-ಎಂಟ್ರಿ! ದೊಡ್ಮನೆ ಇತಿಹಾಸದಲ್ಲಿ ಇದೇ ಮೊದಲು…

Bigg Boss 17 Elimination: ಬಿಗ್ ಬಾಸ್ ಕನ್ನಡ ಮಾತ್ರವಲ್ಲ, ಹಿಂದಿ ಸೀಸನ್’ನಲ್ಲೂ ಪ್ರತೀದಿನ ಗಲಾಟೆ, ಗದ್ದಲ ನಡೆಯುತ್ತಲೇ ಇದೆ. ಇನ್ನು ಈ ಮಧ್ಯೆ, ಬಿಗ್ ಬಾಸ್ ಮನೆಯಲ್ಲಿ ಇನ್ನೊಬ್ಬ ಸ್ಪರ್ಧಿಯ ಪ್ರಯಾಣವು ಕೊನೆಗೊಂಡಿದೆ ಎಂಬ ವರದಿಗಳು ಬರುತ್ತಿವೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /5

ಬಿಗ್ ಬಾಸ್ ಹಿಂದಿ ಸೀಸನ್’ನಲ್ಲಿ ಕಳೆದ ವಾರ ಸಮರ್ಥ್ ಜುರೆಲ್ ಕೆನ್ನೆಗೆ ಬಾರಿಸಿದ ಅಭಿಷೇಕ್ ಕುಮಾರ್, ಮನೆಯಿಂದ ಹೊರ ನಡೆದಿದ್ದರು. ಆದರೆ ಆ ಬಳಿಕ ನಿರೂಪಕ ಸಲ್ಮಾನ್ ಖಾನ್ ಅವರನ್ನು ಮತ್ತೆ ಕಾರ್ಯಕ್ರಮಕ್ಕೆ ಕರೆದಿದ್ದಾರೆ ಎಂದು ಹೇಳಲಾಗುತ್ತಿದೆ.

2 /5

ಇನ್ನೊಂದೆಡೆ ಓಟ್’ಗಳ ಕೊರತೆಯಿಂದ ಕೊರಿಯನ್ ಗಾಯಕ ಔರಾ ಕೂಡ ಔಟ್ ಆಗಿದ್ದಾರೆ ಎಂದು ಹೇಳಲಾಗುತ್ತಿದೆ. ಕಾರ್ಯಕ್ರಮದ ಮಧ್ಯೆ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಮನೆ ಪ್ರವೇಶಿಸಿದ ಔರಾ, ಮನೆಯೊಳಗೆ ಎಲ್ಲರೊಂದಿಗೆ ತುಂಬಾ ಮೋಜು ಮಸ್ತಿ ಮಾಡುತ್ತಿದ್ದರು.

3 /5

ಆದರೆ, ಇತ್ತೀಚೆಗೆ ವೈಲ್ಡ್ ಕಾರ್ಡ್ ಸ್ಪರ್ಧಿ ಆಯೇಷಾ ಖಾನ್ ಜೊತೆ ಜಗಳವಾಡಿದ್ದರು. ಆ ನಂತರ ಔರಾ ಆಯೇಷಾಗೆ ಕ್ಷಮೆಯಾಚಿಸಿ, ನನಗೆ ತಪ್ಪಿನ ಅರಿವಾಗಿದೆ ಎಂದು ಹೇಳಿದ್ಧಾರೆ.

4 /5

ಇನ್ನು ಅಭಿಷೇಕ್ ಮನೆಗೆ ಮತ್ತೆ ಎಂಟ್ರಿಕೊಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಒಂದು ಬಾರಿ ಬಿಗ್ ಬಾಸ್ ಮನೆಯಿಂದ ಹೊರಕಳುಹಿಸಲ್ಪಟ್ಟರೆ, ಅದರಲ್ಲೂ ಪ್ರತಿಸ್ಪರ್ಧಿ ಮೇಲೆ ದಾಳಿ ಮಾಡಿ ಸ್ವತಃ ಬಿಗ್ ಬಾಸ್ ಮನೆಯಿಂದ ಆಚೆ ಹಾಕಲ್ಪಟ್ಟರೆ ಅವರನ್ನು ಮನೆಯೊಳಗೆ ಮತ್ತೆ ಸೇರಿಸಿಕೊಳ್ಳುವುದು ಅಸಾಧ್ಯದ ಮಾತು. ಒಂದು ವೇಳೆ ಮತ್ತೆ ಮನೆಗೆ ಎಂಟ್ರಿಕೊಟ್ಟರೆ ಅದು ಇತಿಹಾಸವೇ ಆಗಲಿದೆ.

5 /5

ಇನ್ನು ಕನ್ನಡ ಬಿಗ್ ಬಾಸ್’ನಲ್ಲೂ ಈ ಹಿಂದೆ ಇಂತಹದ್ದೇ ಒಂದು ಘಟನೆ ನಡೆದಿತ್ತು. ಹುಚ್ಚ ವೆಂಕಟ್ ಬಿಗ್ ಬಾಸ್ ಮನೆಯಲ್ಲಿ ಪ್ರತಿಸ್ಪರ್ಧಿ ಮೇಲೆ ದಾಳಿ ನಡೆಸಿದ್ದರು. ಅದು ಕೂಡ ಕಿಚ್ಚ ಸುದೀಪ್ ಮುಂದೆಯೇ… ಆ ಸಂದರ್ಭದಲ್ಲಿ ಉರಿದು ಕೆಂಡವಾಗಿದ್ದ ಸುದೀಪ್, ತಕ್ಷಣವೇ ಅವರನ್ನು ಮನೆಯಿಂದ ಹೊರ ಕಳುಹಿಸಲು ಆದೇಶ ನೀಡಿದ್ರು.