Chanakya Niti: ಚಾಣಕ್ಯನ ಈ 5 ಮಾತುಗಳನ್ನು ನೆನಪಿನಲ್ಲಿಡಿ, ನಿಮ್ಮ ಜೇಬು ಎಂದಿಗೂ ಖಾಲಿ ಉಳಿಯುವುದಿಲ್ಲ!

Chanakya Niti Lessons: ಪ್ರತಿಯೊಬ್ಬ ವ್ಯಕ್ತಿ ತಾಯಿ ಲಕ್ಷ್ಮಿಯ ಆಶೀರ್ವಾದ ಸದಾ ತನ್ನ ಮೇಲೆಯೇ ಇರಬೇಕು ಎಂದು ಬಯಸುತ್ತಾನೆ ಮತ್ತು ಅದಕ್ಕಾಗಿ  ಹಗಲಿರುಳು ಶ್ರಮಿಸುತ್ತಾನೆ (chanakya niti on personal finance rules). ಆದರೆ ಅನೇಕ ಬಾರಿ ಅದೃಷ್ಟದ ಕೊರತೆಯಿಂದ ವ್ಯಕ್ತಿ ಬಳಿ ಬಂದ ಬಂದ ಹಣ ಉಳಿಯುವುದಿಲ್ಲ. ತಾಯಿ ಲಕ್ಷ್ಮಿಯನ್ನು ಪ್ರಸನ್ನಗೊಳಿಸಲು ಏನು ಮಾಡಬೇತು ತಿಳಿದುಕೊಳ್ಳೋಣ ಬನ್ನಿ (Spiritual News In Kannada).  

Written by - Nitin Tabib | Last Updated : Mar 27, 2024, 11:04 PM IST
  • ಕಲೆಯನ್ನು ಗೌರವಿಸುವ ಮನೆಗಳಲ್ಲಿ ಸಂಪತ್ತಿನ ಅಧಿದೇವತೆ ಆಗಮಿಸುತ್ತಾಳೆ ಎಂದು ಚಾಣಕ್ಯರು ಹೇಳುತ್ತಾರೆ.
  • ಹೀಗಿರುವಾಗ ನಿಮ್ಮ ಕುಟುಂಬದ ಯಾವುದೇ ಸದಸ್ಯರು ಸಂಗೀತ, ನೃತ್ಯ ಅಥವಾ ಯಾವುದೇ ಸೃಜನಶೀಲ ಕೆಲಸದಲ್ಲಿ ಆಸಕ್ತಿ ಹೊಂದಿದ್ದರೆ,
  • ನಂತರ ಅವರ ಕೆಲಸಕ್ಕೆ ಅವರನ್ನು ಪ್ರೋತ್ಸಾಹಿಸಿ. ತಾಯಿ ಲಕ್ಷ್ಮಿಯ ಕೃಪೆಯಿಂದ, ಕುಟುಂಬದ ಸದಸ್ಯರಿಗೆ ಎಂದಿಗೂ ಹಣದ ಕೊರತೆ ಎದುರಾಗುವುದಿಲ್ಲ
Chanakya Niti: ಚಾಣಕ್ಯನ ಈ 5 ಮಾತುಗಳನ್ನು ನೆನಪಿನಲ್ಲಿಡಿ, ನಿಮ್ಮ ಜೇಬು ಎಂದಿಗೂ ಖಾಲಿ ಉಳಿಯುವುದಿಲ್ಲ! title=

Chanakya Niti For Financial Prosperity: ಜೀವನದಲ್ಲಿ ಯಶಸ್ಸನ್ನು ಸಾಧಿಸಲು ಮತ್ತು ಜನರನ್ನು ಸರಿಯಾದ ಮಾರ್ಗದಲ್ಲಿ ನಡೆಸಲು ಆಚಾರ್ಯ ಚಾಣಕ್ಯಋ ತನ್ನ ನೀತಿ ಶಾಸ್ತ್ರದಲ್ಲಿ ಹಲವು ಸಂಗತಿಗಳನ್ನು ಉಲ್ಲೇಖಿಸಿದ್ದಾರೆ (remember 5 rules of chanakye for financial prosperity).  ಮಾನವನ ಸರ್ವತೋಮುಖ ಏಳಿಗೆಗಾಗಿ ಚಾಣಕ್ಯ ನೀತಿ ಶಾಸ್ತ್ರವನ್ನು ರಚಿಸಿದ್ದಾರೆ. ತನ್ನ ನೀತಿ ಶಾಸ್ತ್ರದಲ್ಲಿ, ಅವರು ಜೀವನಕ್ಕೆ ಸಂಬಂಧಿಸಿದ ಪ್ರತಿಯೊಂದು ಸಣ್ಣ ಮತ್ತು ದೊಡ್ಡ ಸಮಸ್ಯೆಗಳ ಬಗ್ಗೆ ಪರಿಹಾರಗಳನ್ನು ಸೂಚಿಸಿದ್ದಾರೆ. ಚಾಣಕ್ಯರ ಈ ನೀತಿಗಳನ್ನು ಅನುಸರಿಸಿದರೆ ಜೀವನದಲ್ಲಿ ಯಶಸ್ಸನ್ನು ಸಾಧಿಸಬಹುದು ಎಂದು ಹೇಳಲಾಗುತ್ತದೆ (Spiritual News In Kannada).

ಆಚಾರ್ಯ ಚಾಣಕ್ಯರು ತನ್ನ ನೀತಿಗಳಲ್ಲಿ ಓರ್ವ ಸದ್ಗುಣಿ ವ್ಯಕ್ತಿ ಮತ್ತು ಆತ ತನ್ನ ಜೀವನದಲ್ಲಿ  ಅಳವಡಿಸಿಕೊಂಡ ಅಭ್ಯಾಸಗಳ ಬಗ್ಗೆ ವಿವರವಾಗಿ ಹೇಳಿದ್ದಾರೆ. ಒಬ್ಬ ವ್ಯಕ್ತಿಯು ಕೆಲವು ಗುಣಗಳನ್ನು ಹೊಂದಿದ್ದರೆ, ಅವನು ಯಶಸ್ಸನ್ನು ಪಡೆಯುತ್ತಾನೆ ಮತ್ತು ಜೀವನದ ಪ್ರತಿಯೊಂದು ಮೈಲಿಗಲ್ಲನ್ನು ಸಾಧಿಸಲು ಅದು ಅವನಿಗೆ ಸಹಾಯ ಮಾಉತ್ತದೆ ಎಂದು ಚಾಣಕ್ಯ ಹೇಳುತ್ತಾರೆ. ಆದರೆ ಇಂದಿಗೂ ಈ ವಿಷಯಗಳ ಬಗ್ಗೆ ಬಹುತೇಕ ಜನರಿಗೆ ತಿಳಿದಿಲ್ಲ ಮತ್ತು ಈ ತಪ್ಪುಗಳು ತಿಳಿಯದೆ ಲಕ್ಷ್ಮಿ ದೇವಿಗೆ ಪ್ರಕೋಪಕ್ಕೆ ವ್ಯಕ್ತಿ ಗುರಿಯಾಗುತ್ತಾನೆ. (chanakya on investment)
 

ತಾಯಿ ಲಕ್ಷ್ಮಿಯ ಕೃಪೆ ಸದಾ ನಿಮ್ಮ ಮೇಲೆ ಇರಲು ಈ ಕೆಲಸ ಮಾಡಿ (chanakya on money)
ಆಹಾರವನ್ನು ಗೌರವಿಸಿ

ಆಚಾರ್ಯ ಚಾಣಕರು ಹೇಳುವ ಪ್ರಕಾರ, ಯಾವ ಮನೆಗಳಲ್ಲಿ ಆಹಾರವನ್ನು ಗೌರವಿಸಲಾಗುತ್ತದೆ, ಲಕ್ಷ್ಮಿ ಆ ಮನೆಯವರ ಮೇಲೆ ಎಂದಿಗೂ ಕೋಪಗೊಳ್ಳುವುದಿಲ್ಲ ಮತ್ತು ಆ ಮನೆಯಲ್ಲಿ ಎಂದಿಗೂ ಹಣದ ಕೊರತೆ ಎದುರಾಗುವುದಿಲ್ಲ ಎನ್ನಲಾಗುತ್ತದೆ.

ಬುದ್ಧಿವಂತರನ್ನು ಯಾವಾಗಲೂ ಗೌರವಿಸಿ.
ಆಚಾರ್ಯ ಚಾಣಕ್ಯರು, ಜ್ಞಾನವುಳ್ಳವರನ್ನು ಗೌರವಿಸುವ ಮನೆಗಳಲ್ಲಿ ತಾಯಿ ಲಕ್ಷ್ಮಿ ಯಾವಾಗಲೂ ನೆಲೆಸುತ್ತಾಳೆ ಎಂದು ಹೇಳುತ್ತಾರೆ. ಆದ್ದರಿಂದ ಪ್ರತಿಯೊಬ್ಬರೂ ಯಾವಾಗಲೂ ಜ್ಞಾನ ಹೊಂದಿರುವ ವ್ಯಕ್ತಿಯನ್ನು ಗೌರವಿಸಬೇಕು. ಜ್ಞಾನವುಳ್ಳ ವ್ಯಕ್ತಿಯು ಯಾವಾಗಲೂ ಸರಿಯಾದ ಮಾರ್ಗವನ್ನು ಅನುಸರಿಸಲು ಇತರರನ್ನು ಪ್ರೇರೇಪಿಸುತ್ತಾನೆ ಎಂದು ಅವರು ಹೇಳುತ್ತಾರೆ.

ಸಂಬಂಧಗಳನ್ನು ಗೌರವಿಸಿ
ಚಾಣಕ್ಯ ನೀತಿ ಶಾಸ್ತ್ರದಲ್ಲಿ ಪತಿ ಪತ್ನಿಯರು ಕಷ್ಟದ ಸಂದರ್ಭದಲ್ಲೂ ಪರಸ್ಪರ ಪ್ರೀತಿಯಿಂದ ಗೌರವದಿಂದ ಬಾಳಬೇಕು ಎಂದು ಹೇಳುತ್ತಾರೆ. ಅಂತಹ ಮನೆಗಳಲ್ಲಿ ಯಾವಾಗಲೂ ಸಂತೋಷ, ಶಾಂತಿ ಮತ್ತು ಸಮೃದ್ಧಿ ಇರುತ್ತದೆ. ಅಂತಹ ಮನೆಗಳಿಗೆ ತಾಯಿ ಲಕ್ಷ್ಮಿಯೇ ಆಗಮಿಸುತ್ತಾಳೆ. ಯಾವ ಮನೆಗಳಲ್ಲಿ ಯಾವಾಗಲೂ ಪರಸ್ಪರ ಜಗಳ ಇರುತ್ತದೆಯೋ ಅಥವಾ ಕುಟುಂಬದ ಸದಸ್ಯರು ಪ್ರತಿಯೊಂದು ವಿಷಯಕ್ಕೂ ಜಗಳವಾಡುತ್ತಾರೋ, ಅಂತಹ ಮನೆಗಳಲ್ಲಿ ಸಂಪತ್ತಿನ ದೇವತೆ ಎಂದಿಗೂ ನೆಲೆಸುವುದಿಲ್ಲ ಚಾಣಕ್ಯರು ಹೇಳುತ್ತಾರೆ

ಕಲೆಯನ್ನು ಗೌರವಿಸಿ
ಕಲೆಯನ್ನು ಗೌರವಿಸುವ ಮನೆಗಳಲ್ಲಿ ಸಂಪತ್ತಿನ ಅಧಿದೇವತೆ ಆಗಮಿಸುತ್ತಾಳೆ ಎಂದು ಚಾಣಕ್ಯರು ಹೇಳುತ್ತಾರೆ. ಹೀಗಿರುವಾಗ ನಿಮ್ಮ ಕುಟುಂಬದ ಯಾವುದೇ ಸದಸ್ಯರು ಸಂಗೀತ, ನೃತ್ಯ ಅಥವಾ ಯಾವುದೇ ಸೃಜನಶೀಲ ಕೆಲಸದಲ್ಲಿ ಆಸಕ್ತಿ ಹೊಂದಿದ್ದರೆ, ನಂತರ ಅವರ ಕೆಲಸಕ್ಕೆ ಅವರನ್ನು ಪ್ರೋತ್ಸಾಹಿಸಿ. ತಾಯಿ ಲಕ್ಷ್ಮಿಯ ಕೃಪೆಯಿಂದ, ಕುಟುಂಬದ ಸದಸ್ಯರಿಗೆ ಎಂದಿಗೂ ಹಣದ ಕೊರತೆ ಎದುರಾಗುವುದಿಲ್ಲ ಮತ್ತು ತಾಯಿ ಲಕ್ಷ್ಮಿಯ ಆಶೀರ್ವಾದವು ನಿರಂತರವಾಗಿ ಆ ಮನೆಯ ಮೇಲಿರುತ್ತದೆ.

ಇದನ್ನೂ ಓದಿ-

ಹಿರಿಯರನ್ನು ಗೌರವಿಸಿ
ಹಿರಿಯರನ್ನು ಗೌರವಿಸುವ ಮನೆಗಳಲ್ಲಿ ಸಂಪತ್ತಿನ ದೇವತೆಯೇ ಆಗಮಿಸುತ್ತಾಳೆ ಎಂದು ಆಚಾರ್ಯ ಚಾಣಕ್ಯ ಹೇಳುತ್ತಾರೆ. ಅವರ ಕುಟುಂಬದಲ್ಲಿ ಎಂದಿಗೂ ಹಣದ ಕೊರತೆ ಎದುರಾಗುವುದಿಲ್ಲ ಎಂಬುದು ಅವರ ಅಭಿಮತ.

ಇದನ್ನೂ ಓದಿ-

(Disclaimer- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News