Todays Horoscope: ಧನು-ಕುಂಭ ರಾಶಿಯ ಜಾತಕದವರಿಗೆ ಶಶಿಯೋಗದ ಲಾಭ, ಇಲ್ಲಿದೆ ಇಂದಿನ ದಿನಭವಿಷ್ಯ!

Dhanu-Kumbha Rashi Shashi Yog benefits: ಹಣಕಾಸು ಮತ್ತು ವೃತ್ತಿಗೆ ಸಂಬಂಧಿಸಿದ ವಿಷಯಗಳಲ್ಲಿ ಇಂದು, ಧನು ರಾಶಿ ಮತ್ತು ಕುಂಭ ರಾಶಿ ಸೇರಿದಂತೆ ಅನೇಕ ರಾಶಿಗಳ ಜನರಿಗೆ ಅನೇಕ ವಿಷಯದಲ್ಲಿ ಮಂಗಳಕರವಾಗಿರುತ್ತದೆ. ಶಶಿ ಯೋಗದ ಶುಭ ಪ್ರಭಾವದಿಂದ, ಈ ರಾಶಿಗಳ ಜನರು ತಮ್ಮ ವೃತ್ತಿಜೀವನದಲ್ಲಿ ಪ್ರಗತಿಗೆ ಸಾಕಷ್ಟು ಅವಕಾಶಗಳನ್ನು ಪಡೆಯಲಿದ್ದಾರೆ. ಇದಲ್ಲದೆ, ಧನು ರಾಶಿ ಮತ್ತು ಕುಂಭ ಸೇರಿದಂತೆ ಅನೇಕ ರಾಶಿಗಳಿಗೆ ಚಂದ್ರನ ಮಂಗಳಕರ ಸಂಚಾರದಿಂದ ಪ್ರಯೋಜನ ಸಿಗಲಿದೆ. ಇಂದು ನಿಮ್ಮ ವ್ಯಾಪಾರ, ಉದ್ಯೋಗ, ವೃತ್ತಿ, ಗಳಿಕೆ ಮತ್ತು ವೆಚ್ಚಗಳ ವಿಷಯದಲ್ಲಿ ಹೇಗಿರಲಿದೆ ತಿಳಿದುಕೊಳ್ಳೋಣ ಬನ್ನಿ (Spiritual News In Kannada)

Written by - Nitin Tabib | Last Updated : Feb 3, 2024, 11:28 AM IST
  • ಇಂದು ಗುರು ಮಧ್ಯಾಹ್ನ ಭರಣಿ ನಕ್ಷತ್ರಕ್ಕೆ ಪ್ರವೇಶಿಸುತ್ತಾನೆ ಮತ್ತು ದಿನವಿಡೀ ಚಂದ್ರನು ತುಲಾ ರಾಶಿಯಲ್ಲಿ ಸಂಚರಿಸುವುದರೊಂದಿಗೆ
  • ಸಮಸಪ್ತಕ ಯೋಗ ರಚನೆಯಾಗುತ್ತದೆ. ಚಂದ್ರನ ಈ ಸಂಚಾರ ಮತ್ತು ಶಶ ಯೋಗದ ಪ್ರಭಾವದಿಂದಾಗಿ
  • ಧನು ರಾಶಿ ಮತ್ತು ಕುಂಭ ರಾಶಿಯವರಿಗೆ ಲಾಭ ಮತ್ತು ಉನ್ನತಿಯ ಅವಕಾಶ ಸಿಗಲಿದೆ.
Todays Horoscope: ಧನು-ಕುಂಭ ರಾಶಿಯ ಜಾತಕದವರಿಗೆ ಶಶಿಯೋಗದ ಲಾಭ, ಇಲ್ಲಿದೆ ಇಂದಿನ ದಿನಭವಿಷ್ಯ! title=

Shashi Yog effects on horoscope: ಇಂದು  ಗುರು ಮಧ್ಯಾಹ್ನ ಭರಣಿ ನಕ್ಷತ್ರಕ್ಕೆ ಪ್ರವೇಶಿಸುತ್ತಾನೆ ಮತ್ತು ದಿನವಿಡೀ ಚಂದ್ರನು ತುಲಾ ರಾಶಿಯಲ್ಲಿ ಸಂಚರಿಸುವುದರೊಂದಿಗೆ ಸಮಸಪ್ತಕ ಯೋಗ ರಚನೆಯಾಗುತ್ತದೆ. ಚಂದ್ರನ ಈ ಸಂಚಾರ ಮತ್ತು ಶಶ ಯೋಗದ ಪ್ರಭಾವದಿಂದಾಗಿ ಧನು ರಾಶಿ ಮತ್ತು ಕುಂಭ ರಾಶಿಯವರಿಗೆ ಲಾಭ ಮತ್ತು ಉನ್ನತಿಯ  ಅವಕಾಶ ಸಿಗಲಿದೆ. ಈ  ರಾಶಿಗಳ ಜನರಿಗೆ ಹಣಕಾಸಿನ ವಿಷಯಗಳಲ್ಲಿ ಅಪಾರ ಲಾಭ ಸಿಗಲಿದೆ. ಯಾವ ರಾಶಿಯ ಜನರಿಗೆ ಇಂದಿನ ದಿನ ಹೇಗಿರಲಿದೆ ತಿಳಿದುಕೊಳ್ಳೋಣ ಬನ್ನಿ,  (Spiritual News In Kannada)

ಮೇಷ ರಾಶಿ
ಮೇಷ ರಾಶಿಯವರಿಗೆ ದಿನ ತುಂಬಾ ಉತ್ತಮವಾಗಿದೆ.  ಆರ್ಥಿಕ ವಿಷಯಗಳಲ್ಲಿ ಪ್ರಗತಿ ಕಾಣಲು ಸಿಗಲಿದೆ. ನೀವು ಕೆಲವು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಆದರೆ ಧೈರ್ಯ ಮತ್ತು ತಾಳ್ಮೆಯಿಂದ ಎಲ್ಲಾ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳುವಲ್ಲಿ ನೀವು ಯಶಸ್ವಿಯಾಗುವಿರಿ. ಅದೃಷ್ಟ ಕೂಡ ಇಂದು ನಿಮ್ಮ ಪಾಲಿಗೆ ಅನುಕೂಲಕರವಾಗಿರುತ್ತದೆ. ಕಾರಣಾಂತರಗಳಿಂದ ಪ್ರಯಾಣದ ಕಾಕತಾಳೀಯ ಇರಬಹುದು. ಆದರೆ ನಿಮ್ಮ ಯಾವುದೇ ಆಸೆಗಳು ಮತ್ತು ಮಹತ್ವಾಕಾಂಕ್ಷೆಗಳು ಈಡೇರಲಿವೆ.

ವೃಷಭ ರಾಶಿ
ವೃಷಭ ರಾಶಿಯವರಿಗೆ ಕೆಲಸ ಕಾರ್ಯಗಳು ಸುಗಮವಾಗಿ ಸಾಗಳಿವೆ. ವ್ಯಾಪಾರದಲ್ಲಿ ಗಳಿಕೆ ಮುಂದುವರೆಯಲಿದೆ. ಆದರೆ ಎಲ್ಲೋ ಸಿಲುಕಿಕೊಂಡ ಹಣವನ್ನು  ವಸೂಲಿ ಮಾಡಲು ಅಡಚಣೆ ಎದುರಾಗಲಿದೆ. ಕುಟುಂಬದಲ್ಲಿ ಕೆಲವು ಶುಭ ಕಾರ್ಯಕ್ರಮಗಳಿಗೆ ಹಣವನ್ನು ಖರ್ಚು ಮಾಡುವ ಸಾಧ್ಯತೆಯಿದೆ. ನಿಮ್ಮ ಜೀವನ ಮಟ್ಟವನ್ನು ಸುಧಾರಿಸಲು ನೀವು ವಸ್ತು ಸಂಪನ್ಮೂಲಗಳನ್ನು ಖರೀದಿಸುವ ಸಾಧ್ಯತೆ ಇದೆ. 

ಮಿಥುನ ರಾಶಿ
ನಿಮ್ಮ ಪಾಲಿಗೆ ಇದು ತ್ವರಿತ ಗತಿಯಲ್ಲಿ ಮುಂದುವರೆಯುವ ಸಮಯ. ನಿಮ್ಮ ಅನಿರೀಕ್ಷಿತ ಪ್ರಗತಿ ಎಲ್ಲರ ಆಶ್ಚರ್ಯಕ್ಕೆ ಕಾರಣವಾಗಲಿದೆ. ನಿಮ್ಮ ಸಂಪೂರ್ಣ ಗಮನ ನಿಮ್ಮ ಸಾಧನೆಗಳ ಮೇಲೆ ಕೇಂದ್ರೀಕೃತವಾಗಿರಬಹುದು, ಆದ್ದರಿಂದ ನಿಮ್ಮ ಮನಸ್ಸನ್ನು ನಿಯಂತ್ರಣದಲ್ಲಿಟ್ಟುಕೊಂಡು ಕೆಲಸ ಮಾಡಿ. ನಿಮ್ಮ ಪ್ರಗತಿಯ ವೇಗವನ್ನು ಕಾಪಾಡಿಕೊಳ್ಳುವುದು ಮತ್ತು ಶಾಂತ ಚಿತ್ತದಿಂದ ಕೆಲಸ ಮಾಡುವುದು ನಿಮ್ಮ ಪಾಲಿಗೆ ಲಾಭದಾಯಕವಾಗಿರಲಿದೆ. ಹಣಕಾಸಿನ ವಿಷಯದಲ್ಲಿ ಈ ದಿನ ಸಾಮಾನ್ಯವಾಗಿರುತ್ತದೆ. ಕುಟುಂಬದ ಸಂತೋಷಕ್ಕಾಗಿ ನೀವು ಸ್ವಲ್ಪ ಹಣವನ್ನು ವೆಚ್ಚ ಮಾಡುವ ಸಾಧ್ಯತೆ ಇದೆ. 

ಕರ್ಕ ರಾಶಿ
ಕೆಲಸದ ಸ್ಥಳದಲ್ಲಿ ಇರುವ ತೊಡಕುಗಳು ಮತ್ತು ತಾಂತ್ರಿಕ ಸಮಸ್ಯೆಗಳನ್ನು ನೀವು ಪರಿಹರಿಸಬೇಕಾಗಬಹುದು. ಯಾರೊಂದಿಗಾದರೂ ಜಗಳವಾಗಬಹುದು. ಆದಾಗ್ಯೂ, ಪಾರ್ಟ್ನರ್ಶಿಪ್ ಕೆಲಸದಲ್ಲಿ ನಿಮ್ಮ ಪಾರ್ಟ್ನರ್ ಸಹಕಾರ ಮತ್ತು ಬೆಂಬಲವನ್ನು ನೀವು ಪಡೆಯುವಿರಿ. ವ್ಯವಹಾರದಲ್ಲಿನ ಲಾಭದಿಂದ ನಿಮ್ಮ ಮನಸ್ಸು ಆಹ್ಲಾದಕರವಾಗಿರಲಿದೆ.  ಪ್ರಯಾಣಕ್ಕೆ ಯೋಜನೆ ರೂಪಿಸುವಿರಿ ಮತ್ತು ಔತಣಕೂಟವನ್ನು ನೀವು ಆಯೋಜಿಸುವಿರಿ.

ಸಿಂಹ ರಾಶಿ
ವ್ಯಾಪಾರದ ಚಿಂತೆಗಳು ವಿಶೇಷವಾಗಿ ನಿಮ್ಮನ್ನು ಕಾಡಲಿವೆ. ನಿಮ್ಮ ವ್ಯವಹಾರವನ್ನು ಹೊಸ ಆವೇಗ ಮತ್ತು ಪ್ರಗತಿಯತ್ತ ಕೊಂಡೊಯ್ಯಲು ನೀವು ಪ್ರಯತ್ನಿಸುವಿರಿ. ಹಿಂದೆ ವ್ಯಾಪಾರದಲ್ಲಿ ಲಾಭ ಕಡಿಮೆಯಾಗಿದ್ದರೆ, ಅವುಗಳನ್ನು ಸರಿದೂಗಿಸಲು ನೀವು ಪ್ರಯತ್ನಿಸುವಿರಿ. ನಿಮ್ಮ ಕೆಲಸದಲ್ಲಿ ನಿಮ್ಮ ಮೇಲೆ ಕೆಲಸದ ಒತ್ತಡವಿರಲಿದೆ. ಆದರೆ ನೀವು ಸುಲಭವಾಗಿ ಅದನ್ನು ನಿಭಾಯಿಸುವಿರಿ ಮತ್ತು ಕೆಲಸದ ಜೊತೆಗೆ ಸ್ನೇಹಿತರೊಂದಿಗೆ ಮನರಂಜನೆಯ ಕ್ಷಣಗಳನ್ನು ಕಳೆಯುವಿರಿ. 

ಕನ್ಯಾ ರಾಶಿ
ನಿಮ್ಮ ರಾಶಿಯ ಅಧಿಪತಿ ಬುಧ ಐದನೇ ಮನೆಯಲ್ಲಿ ಸಂಚರಿಸುತ್ತಿದ್ದಾನೆ. ಇಂತಹ ಪರಿಸ್ಥಿತಿಯಲ್ಲಿ, ನೀವು ಲಾಭ ಮತ್ತು ಪ್ರಗತಿಗೆ ಅವಕಾಶವನ್ನು ಪಡೆಯುವಿರಿ. ಆದರೆ ನೀವು ನಿಮ್ಮ ಓಟವನ್ನು ಮುಂದುವರೆಸಬೇಕು. ಸದ್ಯಕ್ಕೆ ನಿಮ್ಮ ಕೆಲಸವನ್ನು ಉತ್ಸಾಹದಿಂದ ಪೂರ್ಣಗೊಳಿಸಿ. ಸ್ವಲ್ಪ ಸಮಯದ ನಂತರ ನೀವು ಇನ್ನೂ ಉತ್ತಮ ಅವಕಾಶವನ್ನು ಪಡೆಯುವಿರಿ. ಪ್ರಯಾಣ ಮತ್ತು ಕೌಟುಂಬಿಕ ಕಾರಣಗಳಿಂದಾಗಿ ವೆಚ್ಚಗಳ ಸಂಯೋಜನೆ ಸಮತೋಲನದಲ್ಲಿಡಿ. ಕೆಲವು ಉತ್ತಮ ಡೀಲ್ ಗಳು ನಿಮ್ಮದಾಗಲಿವೆ. 

ತುಲಾ ರಾಶಿ
ಕಾರಣವಿಲ್ಲದೆ ಅಸಮಾಧಾನಗೊಳ್ಳುವಿರಿ. ನೀವು ನಿಮ್ಮ ನಿರ್ಧಾರಗಳನ್ನು ಗಂಭೀರವಾಗಿ ತೆಗೆದುಕೊಳ್ಳದಿದ್ದರೆ, ನೀವು ನಷ್ಟವನ್ನು ಅನುಭವಿಸಬಹುದು. ವರ್ತಮಾನದತ್ತ ಮಾತ್ರ ಗಮನಹರಿಸದೆ, ಭವಿಷ್ಯದಲ್ಲಿ ಉತ್ತಮ ಸ್ಥಾನಮಾನ ಪಡೆಯಲು ದೂರದೃಷ್ಟಿಯ ಚಿಂತನೆ ಅಳವಡಿಸಿಕೊಳ್ಳಿ. ನಿಮ್ಮ ವೃತ್ತಿ ಮತ್ತು ವ್ಯವಹಾರದಲ್ಲಿ ನೀವು ಕುಟುಂಬದ ಬೆಂಬಲವನ್ನು ಪಡೆಯುವಿರಿ. ರಾಜಕೀಯ ಕ್ಷೇತ್ರದಲ್ಲಿ ನಿಮ್ಮ ಪ್ರಭಾವ ಮತ್ತು ಗೌರವ ಹೆಚ್ಚಾಗಲಿದೆ. ನಿಮ್ಮ ಧೈರ್ಯ ಮತ್ತು ಬುದ್ಧಿವಂತಿಕೆಯಿಂದ ನಿಮ್ಮ ಎದುರಾಳಿಗಳ ಮೇಲೆ ಜಯ ಸಾಧಿಸುವಿರಿ. 

ವೃಶ್ಚಿಕ ರಾಶಿ
ಇಂದು ಆಕಸ್ಮಿಕ ವಾಗಿ ಸಂತಸದ ಸುದ್ದಿ ಸಿಗಲಿದೆ.  ಕೆಲಸ-ವ್ಯವಹಾರದ ಒತ್ತಡಕ್ಕೆ ನಿಮ್ಮ ಮೇಲೆ ಪಾರುಪತ್ಯ ಸಾಧಿಸಲು ಬಿಡಬೇಡಿ. ಬದಲಾಗುತ್ತಿರುವ ವಾತಾವರಣದಲ್ಲಿ ಹೊಸ ಯೋಜನೆ ಯಶಸ್ವಿಯಾಗಲಿದೆ. ಹಳೆಯ ತೊಡಕುಗಳು ಮತ್ತು ಸಮಸ್ಯೆಗಳಿಂದ ನೀವು ಪರಿಹಾರವನ್ನು ಪಡೆಯುವಿರಿ.  ಅಧಿಕಾರಿ ವರ್ಗದಲ್ಲಿ ಸಾಮರಸ್ಯ ಹೆಚ್ಚಾಗಲಿದೆ. ಖಿನ್ನತೆಯ ಆಲೋಚನೆಗಳಿಗೆ ಮನಸ್ಸಿನಲ್ಲಿ ಜಾಗ ಕೊಡಬೇಡಿ, ಸಮಯವು ತುಂಬಾ ಅನುಕೂಲಕರವಾಗಿದೆ.

ಧನು ರಾಶಿ 
ಹೊಸ ಸಂಪರ್ಕಗಳಿಂದ ಇಂದು ನೀವು ಪ್ರಯೋಜನ ಪಡೆಯುತ್ತೀರಿ. ಈ ಹಿಂದೆ ನೀವು ಮಾಡಿದ ಸಂಶೋಧನೆ ಮತ್ತು ಪ್ರಯೋಗದ ಪ್ರಯೋಜನೆ ನಿಮಗೆ ಸಿಗಲಿದೆ.  ಸಿಕ್ಕಿಬಿದ್ದ ಹಣವನ್ನು ಕಷ್ಟಪಟ್ಟು ವಾಪಸ್ ಪಡೆಯುವಿರಿ. ದೈನಂದಿನ ಕೆಲಸಗಳಲ್ಲಿ ನಿರ್ಲಕ್ಷ್ಯ ಬೇಡ. ವೃತ್ತಿಪರ ಪ್ರಗತಿಯು ಆತ್ಮ ವಿಶ್ವಾಸ ಹೆಚ್ಚಿಸಲಿದೆ. ರಾತ್ರಿ ಶುಭ ಸಮಾರಂಭದಲ್ಲಿ ಭಾಗವಹಿಸಲು ನಿಮಗೆ ಅವಕಾಶ ಸಿಗಲಿದೆ..

ಮಕರ ರಾಶಿ
ಸಾಮಾಜಿಕ ಮತ್ತು ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುವುದರಿಂದ ನಿಮ್ಮ ಗೌರವ ಹೆಚ್ಚಾಗುತ್ತದೆ. ಗ್ರಹಗಳ ಚಲನೆ ನಿಮ್ಮ ಪಾಲಿಗೆ ಅದೃಷ್ಟಕರವಾಗಿರಲಿದೆ. ಖರೀದಿ ಮತ್ತು ಮಾರಾಟ ವ್ಯವಹಾರದಲ್ಲಿ ಲಾಭ ಇರಲಿದೆ. ದಿನವಿಡೀ ಒಳ್ಳೆಯ ಸುದ್ದಿ ಸಿಗಲಿದೆ. ಸ್ನೇಹಿತರ ಮಧ್ಯೆ ಹಾಸ್ಯಮಯ ವಾತಾವರಣ ಇರಲಿದೆ. ಅನಗತ್ಯ ವ್ಯಾಜ್ಯಗಳಿಂದ ದೂರವಿರಿ. ಧಾರ್ಮಿಕ ಸ್ಥಳಗಳಿಗೆ ಪ್ರಯಾಣ ಸಂಭವಿಸುವ ಸಾಧ್ಯತೆ ಇದೆ. ನಿಮ್ಮ ತಾಯಿಯ ಬೆಂಬಲ ನಿಮಗೆ ಸಿಗಲಿದೆ. ದೀರ್ಘಾವಧಿ ಹೂಡಿಕೆ ಮಾಡುವುದು ನಿಮಗೆ ಲಾಭದಾಯಕವಾಗಿರುತ್ತದೆ.

ಕುಂಭ ರಾಶಿ
ಉನ್ನತ ಅಧಿಕಾರಿಗಳ ಸಹಕಾರ ಮತ್ತು ಸಲಹೆಯ ಲಾಭ ನಿಮಗೆ ಸಿಗಲಿದೆ. ಆಮದು-ರಫ್ತು ವ್ಯವಹಾರವನ್ನು ಪ್ರಾರಂಭಿಸುವ ನಿರ್ಧಾರ ನೀವು ಕೈಗೊಳ್ಳುವ ಸಾಧ್ಯತೆ ಇದೆ. ಆಧ್ಯಾತ್ಮಿಕತೆ ಮತ್ತು ಧಾರ್ಮಿಕ ಚಟುವಟಿಕೆಗಳಲ್ಲಿ ನಿಮ್ಮ ಆಸಕ್ತಿ ಹೆಚ್ಚಾಗಲಿದೆ ಮತ್ತು ನೀವು ದತ್ತಿ ಕಾರ್ಯಗಳಲ್ಲಿ ಹಣವನ್ನು ಖರ್ಚು ಮಾಡುವಿರಿ. ಪ್ರಯಾಣ ಮತ್ತು ಮಂಗಲೋತ್ಸವಗಳ ಕಾಕತಾಳೀಯದ ಸಾಧ್ಯತೆ ಇದೆ, ಸಮಯದ ಸದುಪಯೋಗದಿಂದ ಭಾಗ್ಯ ಹೊಳೆಯಲಿದೆ. 

ಇದನ್ನೂ ಓದಿ-Rahu-Surya Yuti 2024: ಹದಿನೆಂಟು ವರ್ಷಗಳ ಬಳಿಕ ರಾಹುವಿನ ಹಿಡಿತಕ್ಕೆ ಸಿಕ್ಕ ಸೂರ್ಯ, ಈ ಜನರ ಮೇಲೆ ಅಪಾರ ಕನಕವೃಷ್ಟಿ!

ಮೀನ  ರಾಶಿ
ನಿಮ್ಮ ರಾಶಿಯ ಅಧಿಪತಿ ಗುರು, ಇಂದು ನಿಮಗೆ ಬೌದ್ಧಿಕ ಕೌಶಲ್ಯಗಳ ಲಾಭವನ್ನು ನೀಡುವ ಜ್ಞಾನ ಮತ್ತು ವಿಜ್ಞಾನದ ಮೂಲವಾಗಿದ್ದಾನೆ. ಅಧ್ಯಯನ ಮತ್ತು ಆಧ್ಯಾತ್ಮಿಕತೆಯಲ್ಲಿ ಆಸಕ್ತಿ ಹೆಚ್ಚಾಗಲಿದೆ. ವಿವಾದಾತ್ಮಕ ವಿಷಯಗಳು ಬಗೆಹರಿಯಲಿವೆ. ರಹಸ್ಯ ಶತ್ರುಗಳು ಮತ್ತು ಅಸೂಯೆ ಪಡುವ ಸ್ನೇಹಿತರ ಬಗ್ಗೆ ಎಚ್ಚರದಿಂದಿರಿ. ಇಂದು ಯಾರಿಗೂ ಸಾಲ ಕೊಡಬೇಡಿ, ಏಕೆಂದರೆ ಅದನ್ನು ಮರಳಿ ಪಡೆಯುವುದು ನಿಮ್ಮ ಪಾಲಿಗೆ ಕಷ್ಟಕರ ಸಾಬೀತಾಗಬಹುದು.

ಇದನ್ನೂ ಓದಿ-Kedar Rajyog 2024: ಬುಧ-ಶುಕ್ರರ ಕೃಪೆಯಿಂದ ಕೇದಾರ ರಾಜಯೋಗ ರಚನೆ, ಐಶ್ವರ್ಯ ಲಕ್ಷ್ಮಿಯ ಕೃಪೆಯಿಂದ ಈ ಜನರು ಮುಟ್ಟಿದೆಲ್ಲಾ ಚಿನ್ನವಾಗಲಿದೆ!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News