T20 ವಿಶ್ವಕಪ್ ತಂಡದಿಂದ ಹೊರಬಿದ್ದ ಭಾರತದ ಐವರು ಸ್ಟಾರ್ ಆಟಗಾರರು ಇವರೇ! ಚಾನ್ಸ್ ಮಿಸ್ ಆಗಲು ಕಾರಣವಾಗಿದ್ದೇನು?

Team India Squad: ಕಾರು ಅಪಘಾತದ ನಂತರ ಟೀಂ ಇಂಡಿಯಾದ ಯುವ ಬ್ಯಾಟ್ಸ್‌’ಮನ್ ರಿಷಬ್ ಪಂತ್ ಒಂದು ವರ್ಷಕ್ಕೂ ಹೆಚ್ಚು ಕಾಲ ಕ್ರಿಕೆಟ್‌ನಿಂದ ದೂರವಿದ್ದರು. ಆದರೆ ಪಂತ್ ಐಪಿಎಲ್ 2024 ರಲ್ಲಿ ತಮ್ಮ ಪುನರಾಗಮನದ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿದ್ದರು.

Written by - Bhavishya Shetty | Last Updated : Apr 30, 2024, 09:23 PM IST
    • ಭಾರತ ತಂಡವು 2024 ರ ಟಿ 20 ವಿಶ್ವಕಪ್‌ಗೆ ಸಜ್ಜಾಗುತ್ತಿದೆ
    • ಈ ತಂಡದಲ್ಲಿ ಕೆಲವು ಪ್ರಮುಖ ಹೆಸರುಗಳನ್ನೇ ಕೈಬಿಡಲಾಗಿದೆ
    • ಐಪಿಎಲ್ 2024ರಲ್ಲಿ ರಿಂಕು ಸಿಂಗ್ ಕಳೆದ ವರ್ಷದಂತೆ ಮಿಂಚಿಲ್ಲ
T20 ವಿಶ್ವಕಪ್ ತಂಡದಿಂದ ಹೊರಬಿದ್ದ ಭಾರತದ ಐವರು ಸ್ಟಾರ್ ಆಟಗಾರರು ಇವರೇ! ಚಾನ್ಸ್ ಮಿಸ್ ಆಗಲು ಕಾರಣವಾಗಿದ್ದೇನು? title=
T20 World Cup India Team

Team India Squad: ಭಾರತ ತಂಡವು 2024 ರ ಟಿ 20 ವಿಶ್ವಕಪ್‌ಗೆ ಸಜ್ಜಾಗುತ್ತಿದೆ. ಏಪ್ರಿಲ್ 30 ರಂದು ಬಿಸಿಸಿಐ ಮೆಗಾ ಈವೆಂಟ್‌’ಗಾಗಿ 15 ಸದಸ್ಯರ ತಂಡವನ್ನು ಪ್ರಕಟಿಸಿದೆ. ಆದರೆ ಈ ತಂಡದಲ್ಲಿ ಕೆಲವು ಪ್ರಮುಖ ಹೆಸರುಗಳನ್ನೇ ಕೈಬಿಟ್ಟಿದ್ದು, ಈ ಮೂಲಕ ಕ್ರಿಕೆಟ್ ಅಭಿಮಾನಿಗಳನ್ನು ಅಚ್ಚರಿಗೊಳಿಸಿದ್ದಾರೆ.

ಇದನ್ನೂ ಓದಿ: ಟೀಂ ಇಂಡಿಯಾದ ನಾಯಕ ರೋಹಿತ್ ಶರ್ಮಾ ಎಷ್ಟು ಕೋಟಿ ಒಡೆಯ ಗೊತ್ತಾ? ವಿರಾಟ್ ಆದಾಯಕ್ಕಿಂತ ಹೆಚ್ಚೇ ಇದೆ ಹಿಟ್ ಮ್ಯಾನ್ INCOME!

ಕಾರು ಅಪಘಾತದ ನಂತರ ಟೀಂ ಇಂಡಿಯಾದ ಯುವ ಬ್ಯಾಟ್ಸ್‌’ಮನ್ ರಿಷಬ್ ಪಂತ್ ಒಂದು ವರ್ಷಕ್ಕೂ ಹೆಚ್ಚು ಕಾಲ ಕ್ರಿಕೆಟ್‌ನಿಂದ ದೂರವಿದ್ದರು. ಆದರೆ ಪಂತ್ ಐಪಿಎಲ್ 2024 ರಲ್ಲಿ ತಮ್ಮ ಪುನರಾಗಮನದ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿದ್ದರು. ವಿಕೆಟ್ ಕೀಪರ್ ಆಗಿ ಪಂತ್ ಪುನರಾಗಮನ, ಕೆಎಲ್ ರಾಹುಲ್’ಗೆ ಸಂಕಷ್ಟವನ್ನು ತಂದೊಡ್ಡಿತ್ತು. ಇದಲ್ಲದೇ ಸಂಜು ಸ್ಯಾಮ್ಸನ್ ಫಾರ್ಮ್ ಕೂಡ ರಾಹುಲ್’ಗೆ ಅಡ್ಡ ಗೋಡೆಯಂತೆ ನಿರ್ಮಾಣವಾಯಿತು. ಈ ಕಾರಣದಿಂದಾಗಿ ಕೆಎಲ್ ರಾಹುಲ್ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯದೆ ಹೊರಗುಳಿಯುವಂತಾಗಿದೆ.

ಇನ್ನು ಐಪಿಎಲ್ 2024ರಲ್ಲಿ ರಿಂಕು ಸಿಂಗ್ ಕಳೆದ ವರ್ಷದಂತೆ ಮಿಂಚಿಲ್ಲ. ಇದೀಗ ಟಿ20 ವಿಶ್ವಕಪ್‌ನ ಅಗ್ರ-15 ಆಟಗಾರರ ಪಟ್ಟಿಯಿಂದ ರಿಂಕು ಸಿಂಗ್ ಅವರನ್ನು ಹೊರಗಿಡಲಾಗಿದೆ. ಬದಲಾಗಿ ಆಟಗಾರರ ಪಟ್ಟಿಯಲ್ಲಿ ಸೇರ್ಪಡೆಯಾಗಿದ್ದಾರೆ. ರಿಂಕು ಬದಲಿಗೆ ಟಾಪ್-15ರಲ್ಲಿ ಶಿವಂ ದುಬೆಗೆ ಆದ್ಯತೆ ನೀಡಲಾಗಿದೆ. ಇದಲ್ಲದೇ ಕಳೆದ ಕೆಲವು ವರ್ಷಗಳಿಂದ ಆರಂಭಿಕರಾಗಿ ತಮ್ಮ ಸ್ಥಾನವನ್ನು ಕಾಯ್ದುಕೊಂಡಿರುವ ಶುಭಮನ್ ಗಿಲ್ ಅವರನ್ನೂ ಮೀಸಲು ಆಟಗಾರರ ಪಟ್ಟಿಯಲ್ಲಿ ಸೇರಿಸಲಾಗಿದೆ. ಯುವ ಎಡಗೈ ಬ್ಯಾಟ್ಸ್‌ಮನ್ ಯಶಸ್ವಿ ಜೈಸ್ವಾಲ್ ಸ್ಫೋಟಕ ಬ್ಯಾಟಿಂಗ್ ಆಧಾರದ ಮೇಲೆ ಶುಭಮನ್ ಗಿಲ್ ಅವರ ಸ್ಥಾನವನ್ನು ಪಡೆದಿದ್ದಾರೆ.

ಟಿ20 ವಿಶ್ವಕಪ್‌’ಗೆ ಟೀಂ ಇಂಡಿಯಾ ತಂಡ

ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಬ್ ಪಂತ್, ಸಂಜು ಸ್ಯಾಮ್ಸನ್, ಹಾರ್ದಿಕ್ ಪಾಂಡ್ಯ (ಉಪನಾಯಕ), ಶಿವಂ ದುಬೆ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಯುಜ್ವೇಂದ್ರ ಚಾಹಲ್, ಅರ್ಷ್‌ದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ ಮೊಹಮ್ಮದ್ ಸಿರಾಜ್.

ಇದನ್ನೂ ಓದಿ: KKR ಆಟಗಾರನ ವಿರುದ್ಧ ಬಿಸಿಸಿಐ ಕಠಿಣ ಕ್ರಮ: ಒಂದೇ ಒಂದು ರೂ,ಸಂಭಾವನೆ ನೀಡದೆ ನಿಷೇಧ! ಮಾಡಿದ ತಪ್ಪೇನು?

ಭಾರತದ T20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯದ ಆಟಗಾರರ ಪಟ್ಟಿ

  • ಕೆಎಲ್ ರಾಹುಲ್
  • ಇಶಾನ್ ಕಿಶನ್
  • ರುತುರಾಜ್ ಗಾಯಕ್ವಾಡ್
  • ಅಶುತೋಷ್
  • ಸಂದೀಪ್ ಶರ್ಮಾ

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News