ಆಸ್ಟ್ರೇಲಿಯ ವಿರುದ್ಧ 4ನೇ ಪಂದ್ಯ ಗೆಲ್ಲುವ ಉತ್ಸಾಹದಲ್ಲಿ ಕೊಹ್ಲಿ ತಂಡ

ಭಾರತದ ಗೆಲುವಿನ ಓಟಕ್ಕೆ ವರುಣನ ತಡೆ ಭೀತಿ

Last Updated : Sep 27, 2017, 06:04 PM IST
ಆಸ್ಟ್ರೇಲಿಯ ವಿರುದ್ಧ 4ನೇ ಪಂದ್ಯ ಗೆಲ್ಲುವ ಉತ್ಸಾಹದಲ್ಲಿ ಕೊಹ್ಲಿ ತಂಡ title=

ಬೆಂಗಳೂರು: ಈಗಾಗಲೇ ಹ್ಯಾಟ್ರಿಕ್ ಗೆಲುವು ಸಾಧಿಸಿರುವ ಟೀಂ ಇಂಡಿಯಾ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಾಳೆ ನಡೆಯುವ ಆಸ್ಟ್ರೇಲಿಯ ವಿರುದ್ಧದ 4ನೇ ಪಂದ್ಯದಲ್ಲೂ ಗೆಲುವು ಸಾಧಿಸುವ ವಿಶ್ವಾಸದಲ್ಲಿದೆ.

ಆಸಿಸ್ ವಿರುದ್ಧದ  ಐದು ಅಂತರಾಷ್ಟ್ರೀಯ ಏಕದಿನ  ಪಂದ್ಯಗಳಲ್ಲಿ ಈಗಾಗಲೇ 3-0 ಮುನ್ನಡೆ ಸಾಧಿಸಿರುವ ಭಾರತ ತಂಡದ ಮುಂದಿನ ಗುರಿ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡುವುದು. ಆದರೆ ಭಾರತದ ಗೆಲುವಿನ ಓಟಕ್ಕೆ ಸಿಲಿಕಾನ್ ನಗರಿಯ ವರುಣನ ಆರ್ಭಟದಿಂದ ತಡೆ ಬೀಳುವ ಆತಂಕ ಎದುರಾಗಿದೆ.

Trending News