Team India: ಟೆಸ್ಟ್ ಜೊತೆ ಏಕದಿನ ಪಂದ್ಯಕ್ಕೂ ಈ ಆಟಗಾರನೇ ಟೀಂ ಇಂಡಿಯಾದ ಉಪನಾಯಕ!

Harbhajan Singh Comment on Vice Captain: ಆಸ್ಟ್ರೇಲಿಯಾ ವಿರುದ್ಧದ ಈ ಟೆಸ್ಟ್ ಸರಣಿಯ ಮೊದಲ 2 ಪಂದ್ಯಗಳಿಗೆ ಭಾರತ ತಂಡವನ್ನು ಪ್ರಕಟಿಸಿದಾಗ, ಕೆಎಲ್ ರಾಹುಲ್ ಅವರಿಗೆ ಉಪನಾಯಕತ್ವವನ್ನು ನೀಡಲಾಯಿತು. ನಂತರದ 2 ಪಂದ್ಯಗಳ ತಂಡವನ್ನು ಆಯ್ಕೆ ಮಾಡಿದಾಗ, ಅವರ ಹೆಸರಿನಿಂದ ಉಪನಾಯಕತ್ವವನ್ನು ತೆಗೆದುಹಾಕಲಾಯಿತು.

Written by - Bhavishya Shetty | Last Updated : Feb 25, 2023, 06:29 PM IST
    • ಭಾರತ ಕ್ರಿಕೆಟ್ ತಂಡ ಪ್ರಸ್ತುತ ಆಸ್ಟ್ರೇಲಿಯಾ ವಿರುದ್ಧ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯನ್ನು ಆಡುತ್ತಿದೆ.
    • ರೋಹಿತ್ ಶರ್ಮಾ ನಾಯಕತ್ವದ ತಂಡ ಈ 4 ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ.
    • ಟೀಂ ಇಂಡಿಯಾದ ಉಪನಾಯಕನ ಬಗ್ಗೆ ಭಾರತದ ಹಿರಿಯ ಆಟಗಾರರೊಬ್ಬರು ಹೇಳಿಕೆ ನೀಡಿದ್ದಾರೆ.
Team India: ಟೆಸ್ಟ್ ಜೊತೆ ಏಕದಿನ ಪಂದ್ಯಕ್ಕೂ ಈ ಆಟಗಾರನೇ ಟೀಂ ಇಂಡಿಯಾದ ಉಪನಾಯಕ!  title=
Ravindra jadeja

Harbhajan Singh Comment on Vice Captain: ಭಾರತ ಕ್ರಿಕೆಟ್ ತಂಡ ಪ್ರಸ್ತುತ ಆಸ್ಟ್ರೇಲಿಯಾ ವಿರುದ್ಧ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯನ್ನು ಆಡುತ್ತಿದೆ. ರೋಹಿತ್ ಶರ್ಮಾ ನಾಯಕತ್ವದ ತಂಡ ಈ 4 ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ. ಇದೀಗ ಸರಣಿಯ ಮೂರನೇ ಟೆಸ್ಟ್ ಪಂದ್ಯ ಇಂದೋರ್‌ನಲ್ಲಿ ಮಾರ್ಚ್ 1 ರಿಂದ ನಡೆಯಲಿದ್ದು, ಸಿದ್ಧತೆಗಳು ಭರದಿಂದ ಸಾಗುತ್ತಿವೆ. ಈ ನಡುವೆ ಟೀಂ ಇಂಡಿಯಾದ ಉಪನಾಯಕನ ಬಗ್ಗೆ ಭಾರತದ ಹಿರಿಯ ಆಟಗಾರರೊಬ್ಬರು ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: IND vs AUS: ಮೂರನೇ ಟೆಸ್ಟ್’ಗೆ ಸೂರ್ಯಕುಮಾರ್ ಯಾದವ್ ಎಂಟ್ರಿ ಪಕ್ಕಾ! ಸಾಕ್ಷಿ ಬೇಕೇ? ಈ ಫೋಟೋ ನೋಡಿ

ಆಸ್ಟ್ರೇಲಿಯಾ ವಿರುದ್ಧದ ಈ ಟೆಸ್ಟ್ ಸರಣಿಯ ಮೊದಲ 2 ಪಂದ್ಯಗಳಿಗೆ ಭಾರತ ತಂಡವನ್ನು ಪ್ರಕಟಿಸಿದಾಗ, ಕೆಎಲ್ ರಾಹುಲ್ ಅವರಿಗೆ ಉಪನಾಯಕತ್ವವನ್ನು ನೀಡಲಾಯಿತು. ನಂತರದ 2 ಪಂದ್ಯಗಳ ತಂಡವನ್ನು ಆಯ್ಕೆ ಮಾಡಿದಾಗ, ಅವರ ಹೆಸರಿನಿಂದ ಉಪನಾಯಕತ್ವವನ್ನು ತೆಗೆದುಹಾಕಲಾಯಿತು. ಈ ಟೆಸ್ಟ್ ಸರಣಿಯಲ್ಲಿ ಅವರು ಫ್ಲಾಪ್ ಎಂಬುದನ್ನು ಸಾಬೀತುಪಡಿಸಿದ್ದಾರೆ. ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಮೂರು ಇನ್ನಿಂಗ್ಸ್‌ಗಳಲ್ಲಿ ಇದುವರೆಗೆ ರಾಹುಲ್ ಕೇವಲ 38 ರನ್ ಗಳಿಸಿದ್ದಾರೆ.

ಈ ಮಧ್ಯೆ, ನಡೆಯುತ್ತಿರುವ ಬಾರ್ಡರ್-ಗವಾಸ್ಕರ್ ಟ್ರೋಫಿಯ ಮೂರನೇ ಟೆಸ್ಟ್‌ ಪಂದ್ಯಕ್ಕೂ ಮೊದಲು ಟೀಮ್ ಇಂಡಿಯಾ ಆಲ್‌ರೌಂಡರ್ ರವೀಂದ್ರ ಜಡೇಜಾ ಅವರನ್ನು ರೋಹಿತ್ ಶರ್ಮಾ ಅವರು ಉಪನಾಯಕ ಆಗಿ ನೇಮಿಸಬೇಕು ಎಂದು ಮಾಜಿ ಅನುಭವಿ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ ಹೇಳಿದ್ದಾರೆ. ಪ್ಲೇಯಿಂಗ್-11 ರಲ್ಲಿ ರಾಹುಲ್ ಸ್ಥಾನದ ಬಗ್ಗೆ ಹೆಚ್ಚುತ್ತಿರುವ ಚರ್ಚೆಗಳ ನಡುವೆ, ಜಡೇಜಾ ಅವರು ಸನ್ನಿವೇಶವನ್ನು ಲೆಕ್ಕಿಸದೆ ಖಂಡಿತವಾಗಿಯೂ ಆಡುತ್ತಾರೆ ಎಂದು ಭಜ್ಜಿ ಹೇಳಿದರು.

“ಅದು ಭಾರತವಾಗಲಿ ಅಥವಾ ವಿದೇಶವಾಗಲಿ. ತವರಿನಲ್ಲಿ ನಡೆಯಲಿರುವ 2023ರ ODI ವಿಶ್ವಕಪ್‌ಗೆ ಮುಂಚಿತವಾಗಿ 50-ಓವರ್‌ಗಳ ಮಾದರಿಯಲ್ಲಿ ಉಪನಾಯಕನ ಪಾತ್ರಕ್ಕೆ ಜಡೇಜಾ ಸೂಕ್ತವಾಗಿ ಹೊಂದಿಕೊಳ್ಳುತ್ತಾರೆ” ಎಂದು ಅನುಭವಿ ಆಟಗಾರ ಹೇಳಿದ್ದಾರೆ.

ಇದನ್ನೂ ಓದಿ: “ಜಸ್ಪ್ರೀತ್ ಬುಮ್ರಾ ಐಪಿಎಲ್ ನ ಏಳು ಪಂದ್ಯಗಳನ್ನು ಆಡದಿದ್ದಲ್ಲಿ ಜಗತ್ತು ಮುಳುಗುವುದಿಲ್ಲ”

ಹರ್ಭಜನ್ ಸಿಂಗ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ, “ನೀವು ಜಡೇಜಾ ಪ್ರದರ್ಶನವನ್ನು ನೋಡಿದರೆ, ಅವರ ಬ್ಯಾಟಿಂಗ್ ಸರಣಿಯಲ್ಲಿ ಉತ್ತಮವಾಗಿದೆ. ಟೆಸ್ಟ್ ಮಾತ್ರವಲ್ಲದೆ ಏಕದಿನ ಪಂದ್ಯದಲ್ಲೂ ಉಪನಾಯಕತ್ವ ನೀಡಬೇಕು. ಅದಕ್ಕಿಂತ ಉತ್ತಮವಾದ ಆಯ್ಕೆ ಇದೆ ಎಂದು ನಾನು ಭಾವಿಸುವುದಿಲ್ಲ. ಭಾರತ ಅಥವಾ ವಿದೇಶಿ ಪರಿಸ್ಥಿತಿಗಳನ್ನು ಲೆಕ್ಕಿಸದೆ ಅವರು ತಂಡದಲ್ಲಿ ಇರಬೇಕು. ನನ್ನ ಪ್ರಕಾರ ರವೀಂದ್ರ ಜಡೇಜಾ  ಒಬ್ಬ ಉತ್ತಮ ಆಟಗಾರ. ಅವರು ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ ಮತ್ತು ಹಿರಿಯ ಆಟಗಾರರಾಗಿ ತಂಡದ ಭಾಗವಾಗಿದ್ದಾರೆ” ಎಂದು ಹೇಳಿದ್ದಾರೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News