NIA Raid: ಈ ಕುರಿತು ಮಾಹಿತಿ ನೀಡಿರುವ ಎನ್ಐಎ ವಕ್ತಾರರೊಬ್ಬರು, ತೆಲಂಗಾಣದಲ್ಲಿರುವ 38 ಸ್ಥಳಗಳಲ್ಲಿ ಹಾಗೂ ಆಂಧ್ರಪ್ರದೇಶದ ಎರಡು ಸ್ಥಳಗಳಲ್ಲಿ ಶೋಧ ನಡೆಸಲಾಗಿದ್ದು, ಈ ಸಂದರ್ಭದಲ್ಲಿ ಒಟ್ಟು ನಾಲ್ವರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಈ ಕಾರ್ಯಾಚರಣೆಯ ವೇಳೆ, ಡಿಜಿಟಲ್ ಉಪಕರಣಗಳು, ದಾಖಲೆಗಳು, ಎರಡು ಕಠಾರಿಗಳು ಮತ್ತು 8.31 ಲಕ್ಷ ರೂಪಾಯಿ ಮೌಲ್ಯದ ನಗದು ಸೇರಿದಂತೆ ಇತರ ದೋಷಾರೋಪಣೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಇದರಲ್ಲಿ ದಾವೂದ್ ಇಬ್ರಾಹಿಂ, ಛೋಟಾ ಶಕೀಲ್, ಅನೀಸ್ ಇಬ್ರಾಹಿಂ, ಜಾವೇದ್ ಚಿಕ್ನಾ ಮತ್ತು ಟೈಗರ್ ಮೆಮನ್ ವಿರುದ್ಧ ಶಸ್ತ್ರಾಸ್ತ್ರ ಕಳ್ಳಸಾಗಣೆ, ನಾರ್ಕೋ ಭಯೋತ್ಪಾದನೆ, ಭೂಗತ ಪಾತಕಿ ಸಿಂಡಿಕೇಟ್, ಅಕ್ರಮ ಭೂಕಬಳಿಕೆ ಜೊತೆಗೆ ಅಕ್ರಮ ಹಣ ವರ್ಗಾವಣೆ ಆರೋಪಗಳಿವೆ.
ಬೆಳ್ಳಾರೆಯಲ್ಲಿ ಎಡಿಜಿಪಿ ಅಲೋಕ್ ಕುಮಾರ್ ಅವರು ಆರು ಜಿಲ್ಲೆಯ ಎಸ್ಪಿ, ಎನ್ ಐಎ ಅಧಿಕಾರಿಗಳೊಂದಿಗೆ ಎಡಿಜಿಪಿ ಸಭೆ ನಡೆಸಿದರು. ಇಂದು ಎಡಿಜಿಪಿ ಅಲೋಕ್ ಕುಮಾರ್ ಅವರು ಸಭೆಯ ಹಿನ್ನಲೆಯಲ್ಲಿ ಮಂಗಳೂರಿಗೆ ಆಗಮಿಸಿದ್ದರು.
ಹೆಚ್ಚಿನ ಭದ್ರತೆಯ ನಡುವೆ ಯಾಸಿನ್ ಮಲಿಕ್ ಅವರನ್ನು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಪರ್ವೀನ್ ಸಿಂಗ್ ಅವರ ಮುಂದೆ ಹಾಜರುಪಡಿಸಲಾಯಿತು. 10 ಲಕ್ಷ ರೂಪಾಯಿ ದಂಡದ ಹೊರತಾಗಿ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಲಾಯಿತು.
ಐಸಿಎಸ್ ಗೆ ಉಗ್ರರ ನೇಮಕಾತಿ ಮತ್ತು ತರಬೇತಿ ವಿಚಾರವಾಗಿ ಮೂವರ ಮೇಲೆ ಎನ್ಐಎ ಚಾರ್ಜಶೀಟ್ ಸಲ್ಲಿಸಿದೆ.ಮೂವರು ಆರೋಪಿಗಳನ್ನು ಬೆಂಗಳೂರಿನ ತಿಲಕ ನಗರದ ಮುಹಮ್ಮದ್ ತೌಕಿರ್ ಮಹಮೂದ್,ಹಾಗೂ ಕಾಮನಹಳ್ಳಿಯ ಜೊಹೈಬ್ ಮನ್ನಾ, ಹಾಗೂ ಭಟ್ಕಳದ ಮೊಹಮ್ಮದ್ ಶಿಹಾಬ್ ಎಂದು ಗುರುತಿಸಲಾಗಿದೆ.
ಕಾಶ್ಮೀರ ಕಣಿವೆಯ ಅನಂತ್ನಾಗ್ನ ಹೊರತಾಗಿ, ಶ್ರೀನಗರ, ಅವಂತಿಪೋರಾ ಮತ್ತು ಬಾರಾಮುಲ್ಲಾದಲ್ಲೂ ಎನ್ಐಎ ದಾಳಿ ನಡೆಸುತ್ತಿದೆ. ISISನ ಭಯೋತ್ಪಾದಕ ಸಂಘಟನೆಯ ಮಾಡ್ಯೂಲ್ಗೆ ಸಂಬಂಧಿಸಿದ ಹತ್ತು ವರ್ಷದ ಹಿಂದಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ದಾಳಿ ನಡೆಸಲಾಗುತ್ತಿದೆ.
ಸೇನಾ ಮೂಲಗಳ ಪ್ರಕಾರ ಕಾಲು ಚಕ್ ಪ್ರದೇಶದ ಗೋಸ್ವಾಮಿ ಎನ್ ಕ್ಲೇವ್ ಬಳಿ ಒಂದು ಶಂಖಿತ ವಸ್ತು ಆಕಾಶದಲ್ಲಿ ಹಾರುತ್ತಿರುವುದು ಗೋಚರಿಸಿದೆ. ಇದೇ ವೇಳೆ ಕುಂಜಾವನಿ ಬಳಿ ಇನ್ನೊಂದು ಡ್ರೋನ್ ಕಾಣಸಿಕ್ಕಿದೆ.
ಮುಂಬಯಿ ಪೊಲೀಸ್ ನ ವಿವಾದಾತ್ಮಕ ಅಧಿಕಾರಿ ಸಚಿನ್ ವಾಝೆಯನ್ನು NIA ಕಳೆದ ಮಧ್ಯರಾತ್ರಿ ಬಂಧಿಸಿದೆ. ಅಂಬಾನಿ ನಿವಾಸ ಅಂಟಿಲಿಯಾ ಬಳಿ ಪತ್ತೆಯಾದ ಸ್ಫೋಟಕ ತುಂಬಿದ್ದ ಸ್ಕಾರ್ಪಿಯೋ ಪ್ರಕರಣದಲ್ಲಿ ಸಚಿನ್ ವಾಝೆಯನ್ನು ಬಂಧಿಸಲಾಗಿದೆ.
ಛತ್ತೀಸ್ಗಡ ಶಾಸಕ ಭೀಮಾ ಮಂಡವಿ ಅವರ ಕೊಲೆ ಪ್ರಕರಣದಲ್ಲಿ 33 ಸಿಪಿಐ (ಮಾವೋವಾದಿ) ಕಾರ್ಯಕರ್ತರ ವಿರುದ್ಧ ಎನ್ಐಎ ಗುರುವಾರ ಚಾರ್ಜ್ಶೀಟ್ ಸಲ್ಲಿಸಿದೆ.ಐಪಿಸಿಯ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಜಗದಾಲ್ಪುರದ ವಿಶೇಷ ಎನ್ಐಎ ನ್ಯಾಯಾಲಯದಲ್ಲಿ ಚಾರ್ಜ್ಶೀಟ್ ಸಲ್ಲಿಸಲಾಗಿದೆ.
ಆಗಸ್ಟ್ 11, 2020 ರ ರಾತ್ರಿ ಬೆಂಗಳೂರಿನ ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಪ್ರದೇಶಗಳಲ್ಲಿ ನಡೆದ ಹಿಂಸಾಚಾರ ಪ್ರಕರಣಗಳ ತನಿಖೆಯನ್ನು ವಹಿಸಿಕೊಂಡಿದೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಮಂಗಳವಾರ ತಿಳಿಸಿದೆ.
ಮುಸ್ಲಿಂ ಯುವಕರನ್ನು ಭಯೋತ್ಪಾದನೆಯ ಹಾದಿಗೆ ತಳ್ಳುತ್ತಿರುವ ಲಷ್ಕರ್-ಎ-ತೊಯ್ಬಾದ ಮಹಿಳಾ ಭಯೋತ್ಪಾದಕಿ ವಿರುದ್ಧ ಎನ್ಐಎ ಕೋಲ್ಕತ್ತಾದ ಎನ್ಐಎ ನ್ಯಾಯಾಲಯದಲ್ಲಿ ಚಾರ್ಜ್ಶೀಟ್ ಸಲ್ಲಿಸಿದೆ.
ಈ ಪ್ರಕರಣ ಉತ್ತರ ಪ್ರದೇಶದ ಚಂಡೌಲಿ ಜಿಲ್ಲೆಯ ನಿವಾಸಿ ಮೊಹಮ್ಮದ್ ರಶೀದ್ ಬಂಧನಕ್ಕೆ ಸಂಬಂಧಿಸಿದೆ. ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ಅಧಿಕಾರಿಗಳೊಂದಿಗೆ ರಶೀದ್ ಸಂಪರ್ಕದಲ್ಲಿದ್ದರು ಮತ್ತು ಅವರು ಎರಡು ಬಾರಿ ಪಾಕಿಸ್ತಾನಕ್ಕೂ ಭೇಟಿ ನೀಡಿದ್ದರು ಎನ್ನಲಾಗಿದೆ.
ಪುಲ್ವಾಮಾ ದಾಳಿಯ ತನಿಖೆಯಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) 5000 ಪುಟಗಳ ಚಾರ್ಜ್ಶೀಟ್ ಸಿದ್ಧಪಡಿಸಿದೆ. ಚಾರ್ಜ್ಶೀಟ್ನಲ್ಲಿ ಒಟ್ಟು 20 ಭಯೋತ್ಪಾದಕರ ಹೆಸರುಗಳಿವೆ. ಜೈಶ್ ದರೋಡೆಕೋರ ಮಸೂದ್ ಅಜರ್ ಮತ್ತು ರೌಫ್ ಅಸ್ಗರ್ ಮಸೂದ್ ಅವರ ಹೆಸರನ್ನು ಚಾರ್ಜ್ಶೀಟ್ನಲ್ಲಿ ಸೇರಿಸಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.