ಪ್ರಯಾಣಿಕರಿಂದ ಆಟೋ ಚಾಲಕರ ಬೇಕಾಬಿಟ್ಟಿ ಸುಲಿಗೆ ಕಡಿವಾಣ ಹಾಕಲು ಸಂಚಾರಿ ಪೊಲೀಸರು ಹಾಗೂ BMRCL ಯೋಜನೆ ರೂಪಿಸಿದೆ. ಪ್ರಯಾಣಿಕರಿಗೆ ಅನುಕೂಲವಾಗುವಂತೆ ಮೆಟ್ರೋ ನಿಲ್ದಾಣದ ಎದುರು ಪ್ರೀಪೇಯ್ಡ್ ಆಟೋ ನಿಲ್ದಾಣವನ್ನು ಆರಂಭಿಸಲು ಪ್ಲಾನ್ ಮಾಡಲಾಗುತ್ತಿದೆ.
ಬೋರ್ಡ್ ನಲ್ಲಿ ಕಾಗೆಯೊಂದು ಸಿಲುಕಿರುವುದನ್ನು ಕಂಡ ಟ್ರಾಫಿಕ್ ಪೊಲೀಸ್ ಸುರೇಶ್ ತನ್ನ ಜೀವದ ಹಂಗನ್ನು ತೊರೆದು ಅದರ ರಕ್ಷಣೆಗೆ ಮುಂದಾಗಿದ್ದಾರೆ. ಸುರಕ್ಷತಾ ಸಿಬ್ಬಂದಿ ಇಲ್ಲದೆ ಎತ್ತರದ ಹೋಲ್ಡಿಂಗ್ ಬೋರ್ಡ್ ಮೇಲೆ ಹತ್ತಿ ಆ ಕಾಗೆಯನ್ನು ರಕ್ಷಿಸಿದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿದೆ.
ಟ್ರಾಫಿಕ್ ಜಂಜಾಟವಿಲ್ಲದೆ ಓಡಾಡುತ್ತಿದ್ದಾರೆ ಬೆಂಗಳೂರು ಮಂದಿ. ಸಾಮನ್ಯ ದಿನದಲ್ಲೇ ವೀಕೆಂಡ್ ಫೀಲ್ ಮಾಡುತ್ತಿದೆ ಸಿಲಿಕಾನ್ ಸಿಟಿ. ಸಂಚಾರ ವಿಭಾಗಕ್ಕೆ ಸ್ಪೆಷಲ್ ಕಮೀಷನರ್ ಆಯ್ಕೆ.. ಟ್ರಾಫಿಕ್ ಚಿತ್ರಣ ಬದಲು. ದಿನದ ಸಮಯದಲ್ಲಿ ಹೆವಿ ವೆಹಿಕಲ್ ಮೂಮೆಂಟ್ ಬಂದ್ ಆದೇಶ. ಈ ಬಗ್ಗೆ ಟ್ವಿಟರ್ ಮೂಲಕ ಸಂಚಾರ ಪೊಲೀಸರಿಂದ ಮಾಹಿತಿ.
ರಾಜ್ಯ ರಾಜಧಾನಿ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸ್ಪೆಷಲ್ ಕಮೀಷನರ್ ಆದೇಶದಂತೆ ನಗರದಲ್ಲಿ ದಿನದ ಸಮಯದಲ್ಲಿ ಹೆವಿ ವೆಹಿಕಲ್ ಮೂಮೆಂಟ್ ಸ್ಟಾಪ್ ಆದ ಮೇಲೆ ಸವಾರರು ರಸ್ತೆಯಲ್ಲಿ ಟ್ರಾಫಿಕ್ ಜಂಜಾಟವಿಲ್ಲದೆ ಓಡಾಡುತ್ತಿದ್ದಾರೆ.
Traffic Constable Saves Life: ಟ್ರಾಫಿಕ್ ಪೇದೆಯ ಪ್ರಯತ್ನದಿಂದ ವಿದ್ಯುತ್ ಶಾಕ್ ತಗುಲಿದ್ದ ವ್ಯಕ್ತಿಗೆ ಪ್ರಜ್ಞೆ ಬಂದಿದೆ. ತಕ್ಷಣವೇ ಅವರನ್ನು 108 ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಮಂಗಳವಾರ ಸಂಜೆ 6 ಗಂಟೆ ಸುಮಾರಿಗೆ ಬಂಜಾರ ಹಿಲ್ಸ್ ರಸ್ತೆ ನಂ.1 ಒಳವರ್ತುಲ ರಸ್ತೆಯಲ್ಲಿ ಈ ಘಟನೆ ನಡೆದಿದೆ.
Traffic Rules: ವಾಹನ ಚಾಲನೆ ಮಾಡುವವರು ಮಾತ್ರವಲ್ಲ ಪ್ರತಿಯೊಬ್ಬರೂ ಸಹ ಟ್ರಾಫಿಕ್ ನಿಯಮಗಳನ್ನು ತಿಳಿದಿರುವುದು ಬಹಳ ಮುಖ್ಯ. ಸಂಚಾರ ನಿಯಮಕ್ಕೆ ಸಂಬಂಧಿಸಿದಂತೆ ನಮ್ಮ ಹಕ್ಕುಗಳನ್ನು ತಿಳಿದುಕೊಳ್ಳುವುದು ಸಹ ಅತ್ಯಗತ್ಯ. ಅಂತಹದರಲ್ಲೇ ಒಂದು ನಿಮ್ಮ ವಾಹನದ ಕೀ ತೆಗೆಯುವ ಅಧಿಕಾರ ಟ್ರಾಫಿಕ್ ಪೊಲೀಸರಿಗಿದೆಯೇ? ಅಂತಹ ಕೆಲವು ಪ್ರಮುಖ ನಿಯಮಗಳನ್ನು ತಿಳಿಯೋಣ...
High Court on Driving License: ಸಂಚಾರಿ ನಿಯಮಗಳನ್ನು ಉಲ್ಲಂಘಿಸಿ ಸಿಕ್ಕಿಬಿದ್ದರೆ ಸಂಚಾರ ಪೊಲೀಸರು ನಿಮ್ಮ ಚಾಲನಾ ಪರವಾನಗಿಯನ್ನು ಅಮಾನತು ಅಥವಾ ರದ್ದುಗೊಳಿಸಬಹುದೇ? ಈ ವಿಚಾರದ ಬಗ್ಗೆ ಕೋಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಪ್ರಕಟಿಸಿದೆ.
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ವ್ಹೀಲಿಂಗ್ ಪುಂಡರ ಹಾವಳಿ ಮತ್ತೆ ಹೆಚ್ಚಾಗಿದ್ದು ಸೋಶಿಯಲ್ ಮೀಡಿಯಾ ಸೆಲ್ ಇದ್ರೂ ಪ್ರಯೋಜನಕ್ಕೆ ಬಾರದಂತಾಗಿದೆ. ಪ್ರಾಣವನ್ನು ಲೆಕ್ಕಿಸದೆ ವ್ಹೀಲಿಂಗ್ ಮಾಡುವ ಪುಂಡರು ಒಂದೆಡಯಾದರೆ ಅವರ ಡೆಡ್ಲಿ ವ್ಹೀಲಿಂಗ್ ಮಾಡುವ ವಿಡಿಯೋಗಳನ್ನು ಸೆರೆ ಹಿಡಿಯುವವರೂ ಮತ್ತೊಂದೆಡೆ... ಹಾಡು ಹಗಲೇ ವ್ಹೀಲಿಂಗ್ ಮಾಡುವ ಪುಂಡರಿಗಿಲ್ಲವೇ ಭಯ... ಪೊಲೀಸ್ ಇಲಾಖೆಗೆ ಇವರನ್ನು ಮಟ್ಟ ಹಾಕಲು ಸಾಧ್ಯವಾಗುತ್ತಿಲ್ಲವೇ?
ಚಿಕ್ಕಜಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗೇಲ್ ಗ್ಯಾಸ್ ಕಂಪನಿ ವತಿಯಿಂದ ನೈಸರ್ಗಿಕ ಅನಿಲ ಪೈಪ್ ಅಳವಡಿಕೆಗೆ ರಸ್ತೆ ಬದಿ ನೆಲ ಅಗೆಯಲು ಮುಂದಾಗಿದ್ದರು. ಈ ಬಗ್ಗೆ ಅನುಮತಿ ಪಡೆಯಲು ಸಂಚಾರಿ ಪೊಲೀಸರಿಗೆ ಪತ್ರ ಬರೆದಿದ್ದರು.
Tamil Nadu: ಟ್ರಾಫಿಕ್ ಪೋಲೀಸ್ (Traffic Police) 10 ಸಾವಿರ ರೂ. ದಂಡ ವಿಧಿಸಿದ್ದಕ್ಕಾಗಿ ಲಾರಿ ಚಾಲಕನೊಬ್ಬ ತನಗೆ ತಾನೇ ಬೆಂಕಿ ಹಚ್ಚಿಕೊಂಡ ಘಟನೆ ತಮಿಳುನಾಡಿನಲ್ಲಿ (Tamil Nadu) ನಡೆದಿದೆ.
ತಪಾಸಣೆಯ ಸಮಯದಲ್ಲಿ ನಿಮ್ಮ ಕಾರಿನ ಕೀಯನ್ನು ಟ್ರಾಫಿಕ್ ಪೋಲಿಸ್ ತೆಗೆದುಕೊಳ್ಳುವಂತಿಲ್ಲ. ಅಲ್ಲದೆ, ನಿಮ್ಮ ಕಾರಿನ ಟೈರ್ನ ಗಾಳಿಯನ್ನು ತೆಗೆಯುವುದು, ಅಥವಾ ನಿಮ್ಮೊಂದಿಗೆ ಅನುಚಿತವಾಗಿ ವರ್ತನೆ ತೋರುವಂತಿಲ್ಲ.
ದೆಹಲಿ ಸರ್ಕಾರ ಇತ್ತೀಚೆಗೆ ತನ್ನ ನಾಗರಿಕರು ತಮ್ಮ ಚಾಲನಾ ಪರವಾನಗಿ, ನೋಂದಣಿ ಪ್ರಮಾಣಪತ್ರಗಳು ಇತ್ಯಾದಿಗಳನ್ನು ಕೊಂಡೊಯ್ಯುವ ಬಗ್ಗೆ ಯಾವತ್ತೂ ಚಿಂತಿಸಬಾರದು ಎಂದು ಘೋಷಿಸಿದೆ. ಬದಲಾಗಿ, ಅವರು ಈ ದಾಖಲೆಗಳನ್ನು ಡಿಜಿ-ಲಾಕರ್ ಅಥವಾ ಎಂ-ಪರಿವಾಹನ್ ಮೊಬೈಲ್ ಅಪ್ಲಿಕೇಶನ್ಗಳಲ್ಲಿ ಸುಲಭವಾಗಿ ಸಂಗ್ರಹಿಸಬಹುದು ಮತ್ತು ಅವುಗಳನ್ನು ಸಂಚಾರ ಪೊಲೀಸ್ ಅಧಿಕಾರಿಗಳು ಮತ್ತು ಸಾರಿಗೆ ಇಲಾಖೆಗೆ ಪರಿಶೀಲನೆಗಾಗಿ ತೋರಿಸಬಹುದು ಎಂದು ಹೇಳಿದೆ
ದೇಶದಲ್ಲಿ ಕಾರು ಅಥವಾ ಬೈಕು ಚಾಲನೆ ಮಾಡುವಾಗ, ಹೆಚ್ಚಿನ ಜನರು ನಕಲಿ ದಾಖಲೆಗಳನ್ನು ತೋರಿಸುವುದರ ಮೂಲಕ ಟ್ರಾಫಿಕ್ ಪೊಲೀಸರನ್ನು ತಪ್ಪಿಸಬಹುದು ಎಂದು ತಿಳಿದಿದ್ದಾರೆ. ಸ್ವಲ್ಪ ಮಟ್ಟಿಗೆ ಇದು ನಿಜ ಕೂಡ ಹೌದು. ಏಕೆಂದರೆ ಹೆಚ್ಚಿನ ರಾಜ್ಯಗಳಲ್ಲಿ ಟ್ರಾಫಿಕ್ ಪೊಲೀಸರಿಗೆ ದಾಖಲೆಗಳನ್ನು ತಕ್ಷಣ ಪರಿಶೀಲಿಸುವ ಸೌಲಭ್ಯವಿಲ್ಲ. ಆದರೆ ಇನ್ಮುಂದೆ ಹಾಗೆ ಆಗುವುದಿಲ್ಲ.
ಈಶಾನ್ಯ ದೆಹಲಿಯಲ್ಲಿನ ಗಲಭೆಗಳನ್ನು ನಿಯಂತ್ರಿಸಲು ದೆಹಲಿ ಪೊಲೀಸ್ ವಿಫಲವಾದ ಕಾರಣ, ಸರ್ಕಾರವು ತಕ್ಷಣವೇ 1985 ರ ಬ್ಯಾಚ್ ಐಪಿಎಸ್ ಅಧಿಕಾರಿ - ಎಸ್ ಎನ್ ಶ್ರೀವಾಸ್ತವನನ್ನು ಸಿಆರ್ಪಿಎಫ್ ನಿಂದ ದೆಹಲಿ ಪೊಲೀಸರಿಗೆ ವಾಪಸ್ ಕಳುಹಿಸಿತು ಮತ್ತು ಅವರನ್ನು ಕಾನೂನು ಮತ್ತು ಸುವ್ಯವಸ್ಥೆಯ ದೆಹಲಿ ವಿಶೇಷ ಪೊಲೀಸ್ ಆಯುಕ್ತರನ್ನಾಗಿ ನೇಮಿಸಿತು
ಗಾಯಕ ದಲೇರ್ ಮೆಹಂದಿ ಅವರೇ ಸ್ವತಃ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಈ ವೀಡಿಯೋವನ್ನು ಹಂಚಿಕೊಂಡಿದ್ದು, ಇದಕ್ಕೆ, "ಸಂತೋಷ ಎಂದರೆ ದಲೇರ್ ಮೆಹಂದಿ. ಆಚರಣೆಯ ಅರ್ಥ ಡೇಲರ್ ಮೆಹಂದಿ. ನಿಮ್ಮ ಪ್ರೀತಿ ಮತ್ತು ಬೆಂಬಲಕ್ಕೆ ಧನ್ಯವಾದಗಳು" ಎಂದು ಹೇಳಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.