ಇಂದಿನಿಂದ ನಾಲ್ಕು ದಿನದ ರಾಜ್ಯ ಪ್ರವಾಸ ಅಮಿತ್ ಶಾ
ನಾಲ್ಕು ದಿನದ ಪ್ರವಾಸದಲ್ಲಿ ದೇವಸ್ಥಾನ, ಮಠ, ಕೂಡಲಸಂಗಮಕ್ಕೆ ಭೇಟಿ ನೀಡಲಿದ್ದಾರೆ.
ಬೆಂಗಳೂರು: ಇಂದಿನಿಂದ ಮಧ್ಯ ಕರ್ನಾಟಕ ಭಾಗದಿಂದ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ನಾಲ್ಕು ದಿನಗಳ ಚುನಾವಣಾ ಪ್ರಚಾರ ಕೈಗೊಳ್ಳಲಿದ್ದಾರೆ. ಈ ಪ್ರವಾಸದಲ್ಲಿ ಶಾ ದೇವಸ್ಥಾನ, ಮಠ, ಕೂಡಲಸಂಗಮಕ್ಕೆ ಭೇಟಿ ನೀಡಲಿದ್ದಾರೆ. ಲಿಂಗಾಯತ ಧರ್ಮದ ರಾಜಕಾರಣದ ಮಧ್ಯೆ ಅಮಿತ್ ಶಾ ಕೂಡಲಸಂಗಮ ಭೇಟಿ ಮಹತ್ವ ಪಡೆದುಕೊಂಡಿದೆ.
ಬಿಜೆಪಿ ಚಾಣಕ್ಯ ಅಮಿತ್ ಶಾ ರಾಜ್ಯ ಪ್ರವಾಸದ ಫುಲ್ ಡೀಟೇಲ್ಸ್
ಅಮಿತ್ ಶಾ ಇಂದಿನ ರಾಜ್ಯ ಪ್ರವಾಸದ ವಿವರ
ಬೆಳಿಗ್ಗೆ 09:30ಕ್ಕೆ ಕನಕ ದುರ್ಗಮ್ಮ ದೇವಸ್ಥಾನಕ್ಕೆ ಭೇಟಿ
ಬೆಳಿಗ್ಗೆ 10:50ಕ್ಕೆ ಕನಕ ದುರ್ಗಮ್ಮ ದೇವಸ್ಥಾನದಿಂದ ಬೆಂಗಳೂರು ರಸ್ತೆವರೆಗೆ ರೋಡ ಶೋ
ಮಧ್ಯಾಹ್ನ 12:00ಕ್ಕೆ ಹೋಟೆಲ್ ರಾಯಲ್ ಫೋರ್ಟ್ ನಲ್ಲಿ ಸಂಘಟನಾತ್ಮಕ ಸಭೆ
ಮಧ್ಯಾಹ್ನ 03:00ಕ್ಕೆ ಶಾರದಾ ಟಾಕೀಸ್ ನಲ್ಲಿ ಮತ್ತೊಂದು ಸಂಘಟನಾತ್ಮಕ ಸಭೆ
ಸಂಜೆ 04:00ಕ್ಕೆ ಗವಿ ಮಠಕ್ಕೆ ಭೇಟಿ
ಸಂಜೆ 05:20ಕ್ಕೆ ಕುಕನೂರಿನಲ್ಲಿ ಸಾರ್ವಜನಿಕ ಸಭೆ
ಸಂಜೆ 06:50ಕ್ಕೆ ಗಂಗಾವತಿಯಲ್ಲಿ ಸಾರ್ವಜನಿಕ ಸಭೆ