ಇಂಡಿ: ಮೇ 12 ರಂದು ನಡೆಯಲಿರುವ ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ನೀತಿ ಸಂಹಿತೆ ಜಾರಿಯಲ್ಲಿದೆ. ಯಾರಿಗೂ ಕೂಡ ಇದರಿಂದ ವಿನಾಯಿತಿ ಇಲ್ಲ. ಅದೇ ರೀತಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನೂ ಬಿಡದೇ ತಪಾಸಣೆ ನಡೆಸಲಾಗುತ್ತದೆ. ಭಾನುವಾರ ವಿಜಯಪುರ ಜಿಲ್ಲೆಯ ಇಂಡಿ ಮತಕ್ಷೇತ್ರಕ್ಕೆ ಕಾಂಗ್ರೆಸ್ ಪರ ಪ್ರಚಾರಕ್ಕೆ ಹೆಲಿಕಾಪ್ಟರ್ ಮೂಲಕ ಆಗಮಿಸಿದ್ದ ಸಿಎಂ ಸಿದ್ದರಾಮಯ್ಯ ಅವರ ಹೆಲಿಕಾಪ್ಟರ್ ಅನ್ನು ತಪಾಸಣೆ ನಡೆಸಲಾಯಿತು. ಹೆಲಿಕಾಪ್ಟರ್ ಜತೆಗೆ ಸಿಎಂ ಬ್ಯಾಗ್ ಸಹ ಬಿಡದೆ ತಪಾಸಣೆ ನಡೆಸಲಾಯಿತು. ತಪಾಸಣೆ ವೇಳೆ ಸಿಕ್ಕ ವಸ್ತುಗಳನ್ನು ಕಂಡು ಅಧಿಕಾರಿಗಳು ಬೆಚ್ಚಿಬಿದ್ದರು.


COMMERCIAL BREAK
SCROLL TO CONTINUE READING

ಅಷ್ಟಕ್ಕೂ ಸಿದ್ದರಾಮಯ್ಯನವರ ಬ್ಯಾಗ್ ನಲ್ಲಿ ದೊರೆತ ವಸ್ತುಗಳು ಏನು ಗೊತ್ತೇ..! ಬ್ಯಾಗಿನಲ್ಲಿ ದೊರೆತದ್ದು ಒಂದು ಶೇವಿಂಗ್ ಸೆಟ್, ಒಂದು ಪಂಚೆ ಹಾಗೂ ಡ್ರೈಫ್ರೂಟ್ಸ್.