ನವದೆಹಲಿ: ಸರ್ಕಾರದ ಭಾರತ್ ಬ್ರ್ಯಾಂಡ್‌ನ ಪಾರುಪತ್ಯ ಇಡೀ ಮಾರುಕಟ್ಟೆಯಲ್ಲಿ ನಿರಂತರವಾಗಿ ಮುಂದುವರೆದಿದೆ. ಇದೀಗ ದೇಶಾದ್ಯಂತ ಭಾರತ್ ಬ್ರಾಂಡ್‌ನ ಚಿಲ್ಲರೆ ಮಾರಾಟ ಮಳಿಗೆಗಳನ್ನು ತೆರೆಯುವ ಯೋಜನೆಯನ್ನು ರೂಪಿಸಲಾಗುತ್ತಿದೆ. ಈ ಔಟ್ಲೆಟ್ ಗಳ ಮೂಲಕ ನೀವು ಬೇಳೆಕಾಳುಗಳನ್ನು ಅಗ್ಗದ ದರದಲ್ಲಿ ಖರೀದಿಸಬಹುದು. ಈ ಮಳಿಗೆಗಳಲ್ಲಿ ನೀವು ಬೇಳೆಕಾಳುಗಳು, ಹಿಟ್ಟು, ಅಕ್ಕಿ ಮತ್ತು ಸಕ್ಕರೆ ಸೇರಿದಂತೆ ಮನೆಯ ಪಡಿತರಕ್ಕೆ ಸಂಬಂಧಿಸಿದ ಅನೇಕ ವಸ್ತುಗಳನ್ನು ಖರೀದಿಸಬಹುದು.


COMMERCIAL BREAK
SCROLL TO CONTINUE READING

ಇತ್ತೀಚೆಗೆ ಬಿಡುಗಡೆಯಾದ ಭಾರತ್ ಬ್ರ್ಯಾಂಡ್‌ನ ಯಶಸ್ಸನ್ನು ಸರಿಗಟ್ಟಲು ದೇಶದ ದೊಡ್ಡ ದೈತ್ಯರಿಗೂ ಸಾಧ್ಯವಾಗಿಲ್ಲ. ಭಾರತ್ ಬ್ರಾಂಡ್ ಮಾರುಕಟ್ಟೆಯಲ್ಲಿ ಟಾಟಾ, ರಿಲಯನ್ಸ್‌ನಂತಹ ಕಂಪನಿಗಳಿಗೆ ಭಾರಿ ಸೆಡ್ಡು ಹೊಡೆದಿದೆ ಮತ್ತು ಮಾರುಕಟ್ಟೆಯ ಶೇಕಡಾ 25 ರಷ್ಟು ಪಾಲನ್ನು ವಶಪಡಿಸಿಕೊಂಡಿದೆ.


ಭಾರತ್ ಬ್ರಾಂಡ್‌ನ ಯಶಸ್ಸಿನ ಬಗ್ಗೆ ಸರ್ಕಾರ ಉತ್ಸುಕವಾಗಿದೆ
ಭಾರತ್ ಬ್ರ್ಯಾಂಡ್‌ನ ಯಶಸ್ಸಿನಿಂದ ಸರ್ಕಾರವು ತುಂಬಾ ಉತ್ಸುಕವಾಗಿದೆ ಮತ್ತು ಇದೀಗ ಈ ಬ್ರಾಂಡ್‌ನ ಉತ್ಪನ್ನಗಳನ್ನು ದೇಶಾದ್ಯಂತ ಮಾರಾಟ ಮಾಡಲು ಸಿದ್ಧತೆಗಳು ನಡೆಯುತ್ತಿವೆ. ಇದಕ್ಕಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡಲಾಗುತ್ತಿದೆ. ಅಲ್ಲದೆ, ಭಾರತ್ ಬ್ರಾಂಡ್‌ನ ವ್ಯಾಪ್ತಿಯಲ್ಲಿ ಹೆಚ್ಚು ಹೆಚ್ಚು ಆಹಾರ ಪದಾರ್ಥಗಳನ್ನು ತರಲು ಸಿದ್ಧತೆಗಳು ನಡೆಯುತ್ತಿವೆ.


ಫ್ರಾಂಚೈಸಿ ವಿತರಿಸಲು ಯೋಜನೆ ರೂಪಿಸಲಾಗುತ್ತಿದೆ
ದೇಶಾದ್ಯಂತ ಹೆಚ್ಚುತ್ತಿರುವ ಹಣದುಬ್ಬರವನ್ನು ನಿಯಂತ್ರಿಸಲು ಭಾರತ್ ಬ್ರಾಂಡ್ ಅನ್ನು ಪ್ರಾರಂಭಿಸಲಾಗಿದೆ. ಸರ್ಕಾರ ಈ ಬ್ರಾಂಡ್‌ನಲ್ಲಿ ಹಿಟ್ಟು, ಬೇಳೆಕಾಳು ಮತ್ತು ಈರುಳ್ಳಿಯನ್ನು ಮಾರಾಟ ಮಾಡುತ್ತಿತ್ತು. ಪ್ರಸ್ತುತ, ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ದೊರೆತ ನಂತರ, ಅದರ ಫ್ರಾಂಚೈಸಿಯನ್ನು ವಿತರಿಸಲು ಸರ್ಕಾರ ಯೋಜಿಸುತ್ತಿದೆ.


ರಾಜೀವ್ ಚೌಕ್ ನಲ್ಲಿ ಮಳಿಗೆಗಳನ್ನು ತೆರೆಯಲಾಗಿದೆ
ಆಂಗ್ಲ ಮಾಧ್ಯಮದ ವೃತ್ತ ಪತ್ರಿಕೆಯಲ್ಲಿ ಪ್ರಕಟಗೊಂಡ ವರದಿಯ ಪ್ರಕಾರ, ಭಾರತ್ ಬ್ರಾಂಡ್‌ನ ಈ ಫ್ರಾಂಚೈಸಿ ಮೂಲಕ ಸರ್ಕಾರವು ಕಡಿಮೆ ದರದಲ್ಲಿ ಬೇಳೆಕಾಳುಗಳನ್ನು ಒದಗಿಸುತ್ತಿದೆ. ಸದ್ಯ ದೇಶದ ರಾಜಧಾನಿ ದೆಹಲಿಯಲ್ಲಿ ಮೊದಲು 50 ಮಳಿಗೆಗಳನ್ನು ತೆರೆಯಲು ಯೋಜಿಸಲಾಗಿದೆ. ಈ ಮಳಿಗೆಗಳನ್ನು ನಿರ್ವಹಿಸಲು ಸರ್ಕಾರ ಜನರನ್ನು ಹುಡುಕುತ್ತಿದೆ. ಕಳೆದ ತಿಂಗಳು ಸರ್ಕಾರವು ರಾಜೀವ್ ಚೌಕ್ ಮೆಟ್ರೋ ನಿಲ್ದಾಣದಲ್ಲಿ ಭಾರತ್ ಬ್ರಾಂಡ್‌ನ 2 ಮಳಿಗೆಗಳನ್ನು ತೆರೆದಿತ್ತು. 


ಇದನ್ನೂ ಓದಿ-Union Budget 2024: ಹತ್ತು ವರ್ಷಗಳ ಬಳಿಕ ದೇಶಾದ್ಯಂತದ 7 ಕೋಟಿ ತೆರಿಗೆ ಪಾವತಿದಾರರಿಗೆ ಸಿಗಲಿದೆಯಾ ಈ ಗುಡ್ ನ್ಯೂಸ್!


ಎನ್ಸಿಸಿಎಫ್ ಮೂಲಕ ಮಳಿಗೆಗಳನ್ನು ತೆರೆಯಲಾಗಿದೆ
ದೆಹಲಿಯಲ್ಲಿ ತೆರೆದಿರುವ ಮಳಿಗೆಗಳಿಗೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಭಾರತ್ ಬ್ರ್ಯಾಂಡ್‌ನ ಈ ಮಳಿಗೆಗಳನ್ನು ಭಾರತೀಯ ರಾಷ್ಟ್ರೀಯ ಸಹಕಾರಿ ಗ್ರಾಹಕರ ಒಕ್ಕೂಟ (ಎನ್‌ಸಿಸಿಎಫ್) ಅಡಿಯಲ್ಲಿ ತೆರೆಯಲಾಗಿದೆ. ಇದೇ ವೇಳೆ, NCCF ಸರ್ಕಾರದ ಪರವಾಗಿ ಬೇಳೆಕಾಳುಗಳು, ಮಸಾಲೆಗಳು, ಈರುಳ್ಳಿ ಸೇರಿದಂತೆ ಅನೇಕ ಆಹಾರ ಉತ್ಪನ್ನಗಳನ್ನು ಮಾರಾಟ ಮಾಡಲಿದೆ. ಈ ಎಲ್ಲಾ ಉತ್ಪನ್ನಗಳನ್ನು ಕಡಿಮೆ ದರದಲ್ಲಿ ಮಾರಾಟ ಮಾಡಲಾಗುವುದು ಎನ್ನಲಾಗಿದೆ.


ಇದನ್ನೂ ಓದಿ-Ram Mandir Ayodhya: ಶ್ರೀರಾಮನ ದರ್ಶನಕ್ಕೆ ಉಚಿತ ಬಸ್ ಟಿಕೆಟ್, ಇಂದಿನಿಂದ ಕೊಡುಗೆ ಆರಂಭ, ಈ ರೀತಿ ಬುಕ್ ಮಾಡಿ!


ಯಶಸ್ಸಿನ ನಂತರ, ಅನೇಕ ನಗರಗಳಲ್ಲಿ ಮಳಿಗೆಗಳನ್ನು ತೆರೆಯಲು ಯೋಜನೆ
ಈ ಮಳಿಗೆಗಳು ಉತ್ತಮ ಯಶಸ್ಸನ್ನು ಪಡೆದರೆ ಅಂತಹ ಮಳಿಗೆಗಳನ್ನು ಮುಂಬೈ, ಚೆನ್ನೈ ಮತ್ತು ಬೆಂಗಳೂರಿನಲ್ಲೂ ತೆರೆಯಲಾಗುತ್ತದೆ ಎನ್ನಲಾಗಿದೆ. ನಂತರ ಹಂತಹಂತವಾಗಿ ಎಲ್ಲಾ ಮೆಟ್ರೋ ನಗರಗಳಲ್ಲಿ ತೆರೆಯಲಾಗುವುದು ಎನ್ನಲಾಗಿದೆ.


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ