ಬೆಂಗಳೂರು: ರೈಲ್ವೆ ಟ್ರ್ಯಾಕ್ ಹತ್ತಿರದ ಕಸದ ರಾಶಿ ಮಧ್ಯೆ ಯುವಕನ ಶವ ಪತ್ತೆಯಾಗಿದ್ದು ಕೊಲೆ ಮಾಡಿ ಆರೋಪಿಗಳು ತಲೆ ಮರೆಸಿಕೊಂಡಿರುವ ಪ್ರಸಂಗ ಬೆಳಕಿಗೆ ಬಂದಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ರಾಜ್ಯದಲ್ಲಿ ಮತ್ತೆ ಕೋವಿಡ್ ತಪಾಸಣೆ ಹೆಚ್ಚಳ: ಸಚಿವ ಸುಧಾಕರ್


ಕೆಜಿ ಹಳ್ಳಿಯ ಪಿಳ್ಳಣ್ಣ ಗಾರ್ಡನ್ ಏರಿಯಾದ ರೈಲ್ವೆ ಟ್ರ್ಯಾಕ್ ಬಳಿ ಕಸ ಬಿದ್ದಿದ್ದ ಜಾಗದಲ್ಲಿ ಮೃತದೇಹವೊಂದು ಬಿದ್ದಿತ್ತು.ಇದನ್ನ ನೋಡಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ಕೊಟ್ಟಿದ್ದಾರೆ.ಘಟನಾ ಸ್ಥಳಕ್ಕೆ ಬಂದ ಕೆ.ಜಿ.ಹಳ್ಳಿ ಪೊಲೀಸರು ಪರಿಶೀಲನೆ ನಡೆಸಿದ್ದರು. ಹೀಗೆ ಹೆಣವಾಗಿ ಬಿದ್ದಿದ್ದು 23 ವರ್ಷದ ಸತೀಶ್ ಎಂದು ಗೊತ್ತಾಗಿದೆ.


ಇದನ್ನೂ ಓದಿ: ಸೇವಾ ನ್ಯೂನ್ಯತೆ ಎಸಗಿದ ಇಫ್ಕೋ ಟೋಕಿಯೋ ವಿಮಾ ಕಂಪನಿಗೆ ದಂಡ 


ಅಲ್ಲಿನ ಚಿತ್ರಣ ನೋಡಿದ ಖಾಕಿ ಪಡೆಗೆ ಇದೊಂದು ಕೊಲೆ ಅನ್ನೋದು ಗೊತ್ತಾಗಿದೆ.ಯಾಕೆಂದ್ರೆ ತಲೆಗೆ ಬಲವಾದ ಪೆಟ್ಟುಬಿದ್ದು ರಕ್ತಸಿಕ್ತವಾಗಿತ್ತು. ಪಕ್ಕದಲ್ಲೇ ನೆತ್ತರು ಅಂಟಿದ ದೊಣ್ಣೆಗಳು ಬಿದ್ದಿದ್ದವು. ಹೀಗಾಗಿ ದೊಣ್ಣೆಯಿಂದ ಹಲ್ಲೆ ನಡೆಸಿರುವ ಕಿಡಿಗೇಡಿಗಳು ಕೊಲೆ ಮಾಡಿ ಪರಾರಿಯಾಗಿದ್ದಾರೆ ಅನ್ನೋ ಶಂಕೆ ಮೂಡಿದೆ‌. ಘಟನೆ ಸಂಬಂಧ ಕೆಜಿ ಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.