ಬೆಂಗಳೂರು : ಅದು ಒಂದು ಹುಡುಗಿ ವಿಚಾರಕ್ಕಾಗಿ ಶುರುವಾದ ವೈಷಮ್ಯ. ಒಬ್ಬನ ಪ್ರಿಯತಮೆ ಜೊತೆಗೆ ಮತ್ತೊಬ್ಬ ಸ್ನೇಹ ಬೆಳೆಸಿದ್ದ. ಇದು ಪ್ರಿಯತಮನನ್ನ ಕೊತ ಕೊತ ಅಂತಾ ಕುದಿಯುವಂತೆ ಮಾಡಿಬಿಟ್ಟಿತ್ತು. ಎಷ್ಟರ ಮಟ್ಟಿಗೆ ಅಂದ್ರೆ ಪ್ರಿಯತಮೆಯ ಸ್ನೇಹಿತನ್ನ ಮುಗಿಸಿಯೇ ಬಿಡಬೇಕು ಅನ್ನೋ ಮಟ್ಟಕ್ಕೆ ಆದ್ರೆ ಅದೃಷ್ಟ ಚನ್ನಾಗಿತ್ತು. ಪ್ರಾಣ ಉಳಿತಾದ್ರು ಎರಡು ಕೈಗಳನ್ನೇ ಕಳೆದುಕೊಂಡಿದ್ದಾನೆ.


COMMERCIAL BREAK
SCROLL TO CONTINUE READING

ಹೀಗೆ ಬೈಕ್ ನಿಂದ ಇಳಿದು ಲಾಂಗ್ ಹಿಡಿದು ಬರೊ ಪುಂಡರು ಒಂದೇ ಒಂದು ನಿಮಿಷದೊಳಗೆ ಕೆಲಸ ಮುಗಿಸಿ ಹೊರಟೇಬಿಡ್ತಾರೆ. ಕ್ರಿಮಿಗಳ ಅಟ್ಟಹಾಸಕ್ಕೆ ಒದ್ದಾಡಿದ ಯುವಕ ಅಂಗಡಿಯಿಂದ ಫುಟ್ ಮೇಲೆ ಬರುತ್ತಿದ್ದಂತೆಯೇ ರಕ್ತದ ಕೋಡಿಯೇ ಹರಿದು ಬಿಡುತ್ತೆ. ಇದೆಲ್ಲ ಒಂದು ಕಡೆ ಆದ್ರೆ ಮಗನ ಈ ಸ್ಥಿತಿ ಕಂಡು ಮರಗ್ತಿರೊ ಈ ಪೋಷಕರ ನೋಡಿ ನಿಜಕ್ಕೂ ಹೇಳತೀರದ್ದು..


ಇದನ್ನೂ ಓದಿ: ಯುವ ಪ್ರತಿಭೆಗಳ 'ರಂಗಸ್ಥಳ' ಚಿತ್ರದ ಟೈಟಲ್ ಲಾಂಚ್
 
ಹೌದು.. ಈ ಫೋಟೊದಲ್ಲಿ ಕಾಣ್ತಿರೊ ಆಸಾಮಿಗಳ ಹೆಸರು ಶಶಾಂಕ್ ಮತ್ತು ಚಂದನ್. ಇನ್ನೂ ಬದುಕು ಕಟ್ಟಿಕೊಳ್ಳದೆ ಅಲೆದಾಡ್ತಿರುವ ಈ ಪುಡಾಂಗು ಶಶಾಂಕ್ ಗೆ ಪ್ರೀತಿ ಪ್ರೇಮ ಬೇರೆ. ಎಷ್ಟರ ಮಟ್ಟಿಗೆ ಅಂದ್ರೆ ತನ್ನ ಏಂಜೆಲ್ ಬೇರೊಬ್ಬ ಯುವಕನ ಜೊತೆ ಮಾತಾಡಿದ್ರು ಸಹಿಸ್ಕೊತಾ ಇರ್ಲಿಲ್ಲ. ಆತನ ಇದೇ ಕೆಟ್ಟ ಮನಸ್ಥಿತಿ ಇವತ್ತು ಒಂದು ಕುಟುಂಬವೇ ನರಳಾಡುವಂತೆ ಮಾಡಿಬಿಟ್ಟಿದೆ.


ಹೌದು.. ಹರ್ಷಿತ್ ಎಂಬ 24 ವರ್ಷದ ಯುವಕ ಬಿಕಾಂ ಮುಗಿಸಿದ್ದ. ಆದ್ರೆ ಕೆಲಸಕ್ಕೆ ಹೋಗದೆ ಶಂಕರಪುರ ಬಳಿ ತಂದೆ ನಡೆಸುತ್ತಿದ್ದ ಹೂವಿನ ಅಂಗಡಿ ನೋಡ್ಕೊಂಡಿದ್ದ. ಅದೇ ಕಟ್ಟಡದಲ್ಲಿ ಒಂದು ಡಯೋಗ್ನಾಸ್ಟಿಕ್ ಸೆಂಟರ್ ಇದೇ ಅಲ್ಲಿ ಯುವತಿ ಕೆಲಸ ಮಾಡುತ್ತಿದ್ದಳು. ಈ ಮಧ್ಯೆ ಚಿಲ್ಲರೆ ಹಣ ಕೇಳಲು ಹೋಗಿ‌ ಬಂದಾಗ ಯುವತಿ ಮತ್ತು ಹರ್ಷಿತ್ ಮಧ್ಯೆ ಗೆಳೆತನ ಬೆಳೆದಿದೆ.


ಇದನ್ನೂ ಓದಿ:ಓಟಿಟಿಯಲ್ಲಿ ಮಂಜುಮ್ಮೆಲ್‌ ಬಾಯ್ಸ್‌ , ಹಿಂದಿ, ಕನ್ನಡದಲ್ಲೂ ರಿಲೀಸ್


ಅದೇ ಗೆಳೆತನ ಮೊಬೈಲ್ ನಂಬರ್ ವಿನಿಮಯದ ದಾರಿಯಾಗಿದೆ. ಕಾಲ ಕ್ರಮೆಣ ಪರಸ್ಪರರು ಚಾಟ್ ಮಾಡಿಕೊಂಡಿದ್ದರು. ಈ ವಿಷಯ ಯುವತಿಯನ್ನ ಪ್ರೀತಿ ಮಾಡುತ್ತಿದ್ದ ಪ್ರಿಯತಮ ಶಶಾಂಕ್ ಗಮನಕ್ಕೆ ಬಂದಿತ್ತು. ಇಬ್ಬರ ನಡುವಿನ ಸಂಬಂಧದ ಬಗ್ಗೆ ಅನುಮಾನ ಮೂಡಿಸಿಕೊಂಡಿದ್ದ ಆರೋಪಿಯು, ಯುವತಿ ಮೊಬೈಲ್ ಪರಿಶೀಲನೆ ವೇಳೆ ಚಾಟ್ ಮಾಡಿರುವುದನ್ನ ಕಂಡು ಹೌಹಾರಿದ್ದ.


ಮೊಬೈಲ್ ನಲ್ಲಿ ಚಾಟ್ ನಲ್ಲಿ ಕೇವಲ ಸ್ನೇಹಿತರ ರೀತಿ ಮೇಸೆಜ್ ಗಳಿದ್ದವು. ಅದನ್ನು‌ ಸಹಿಸಿಕೊಳ್ಳಲು ಶಶಾಂಕ್ ಸಿದ್ಧವಿರಲಿಲ್ಲ. ಹರ್ಷಿತ್ ಗೆ ಒಂದು ಗತಿ ಕಾಣಿಸಬೇಕೆಂದು ನಿರ್ಧರಿಸಿ ಕಳೆದ ಏಪ್ರಿಲ್ 28 ರಂದು ರಾತ್ರಿ 8.30 ಕ್ಕೆ ಸ್ನೇಹಿತ ಚಂದನ್ ನನ್ನ‌ ಕರೆಸಿಕೊಂಡು ಮದ್ಯ ಏರಿಸಿಕೊಂಡು ಲಾಂಗ್ ಜೊತೆಗೆ ಬೈಕ್ ನಲ್ಲಿ ಹರ್ಷಿತ್ ಅಂಗಡಿಗೆ ಬಂದು ಏಕಾಏಕಿ ಲಾಂಗ್ ನಿಂದ ಹಲ್ಲೆ ಮಾಡಿದ್ದಾರೆ.


ಇದನ್ನೂ ಓದಿ:ರಾಘವ್ ಚಡ್ಡಾ ನಟಿ ಪರಿಣಿತಿ ಚೋಪ್ರಾ ಎರಡನೇ ಪತ್ನಿ! ಮದುವೆಯಾಗಿ ಮಕ್ಕಳಿರೋ ವಿಚಾರ ಗೊತ್ತಿರಲಿಲ್ವಾ?


ಘಟನೆಯಲ್ಲಿ ಹರ್ಷಿತ್ ಎಡಗೈ ಹೆಬ್ಬೆರಳು ಕಟ್ ಆಗಿ ಬಿದ್ರೆ. ಬಲಗೈನ ಮುಂಗೈ ಹಾಗೂ ತೋಳಿನಲ್ಲಿ ಗಂಭೀರವಾಗಿ ಗಾಯಗೊಂಡಿದ್ದು ತಕ್ಷಣ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗ್ತಿದ್ದ ಆರೋಪಿಗಳಾದ ಶಶಾಂಕ್ ಹಾಗೂ ಚಂದನ್ ನನ್ನ ಬಂಧಿಸಿ ಜೈಲಿಗಟ್ಟಲಾಗಿದೆ.


ಅದೇನೇ ಇರಲಿ ಕುಟುಂಬಸ್ಥರ ಜೊತೆ ಕೂತು ಮಾತನಾಡಿದ್ದಿದ್ರೆ ಸಮಸ್ಯೆ ಬಗೆಹರಿದುಬಿಡ್ತಿತ್ತು..ಆದ್ರೆ ದುಡುಕಿನ ನಿರ್ಧಾರ ಹರ್ಷಿತ್ ನೋವಲ್ಲೇ ದಿನ ಕಳೆಯುವಂತೆ ಮಾಡಿದ್ರೆ...ಕೋಪದ ಕೈಗೆ ಬುದ್ಧಿ ಕೊಟ್ಟವರು ಜೈಲಿನಲ್ಲಿ ಮುದ್ದೆ ಮುರಿಯುತ್ತಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.