ಕಾರವಾರ: ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾರವಾರ ತಾಲೂಕಿನಲ್ಲಿ ಗುರುವಾರ ನಡೆದಿದೆ. ಪತ್ನಿ ಮತ್ತು ಮಗನನ್ನು ಸಮುದ್ರಕ್ಕೆ ತಳ್ಳಿ ಉದ್ಯಮಿ ಆತ್ಮಹತ್ಯೆಗೆ ಶರಣಾಗಿದ್ದಾರೆಂದು ಹೇಳಲಾಗಿದೆ.


COMMERCIAL BREAK
SCROLL TO CONTINUE READING

ಉದ್ಯಮಿ ಶ್ಯಾಮ ಪಾಟೀಲ್ (40), ಅವರ ಪತ್ನಿ ಜ್ಯೋತಿ(35) ಹಾಗೂ ಮಗ ಧಕ್ಷ (12) ಮೃತರು. ಗೋವಾದ ಕುಕಳ್ಳಿ ಪಾಡಿ ಎಂಬಲ್ಲಿ ಕಾಡಿನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶ್ಯಾಮ್ ಪಾಟೀಲ್ ಪತ್ತೆಯಾದ್ರೆ, ಮಗ ಹಾಗೂ ತಾಯಿಯ ಮೃತದೇಹಗಳು ಕಾರವಾರದ ದೇವಬಾಗ ಕಡಲ ತೀರದಲ್ಲಿ ಪತ್ತೆಯಾಗಿವೆ.


ಇದನ್ನೂ ಓದಿ: ರಾಜ್ಯದ ಜನತೆಗೆ ಮತ್ತೊಂದು ಶಾಕಿಂಗ್; ವಿದ್ಯುತ್, ತರಕಾರಿ, ಮೊಟ್ಟೆ ಬೆನ್ನಲ್ಲೇ ಇದೀಗ ಹಾಲಿನ ಸರದಿ!


ಪತ್ನಿ ಹಾಗೂ ಮಗನನ್ನು ಕಾರವಾರದ ಕೋಡಿಬಾಗ ಬ್ರಿಜ್ ಮೇಲಿಂದ ದೂಡಿದ ಶ್ಯಾಮ್ ಪಾಟೀಲ್ ಗೋವಾಕ್ಕೆ ತೆರಳಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಅಂದಾಜಿಸಲಾಗಿದೆ.


ಶ್ಯಾಮ್ ಪಾಟೀಲ್ ಗೋವಾದಲ್ಲಿ ಕಾರ್ಮಿಕರ ಪೂರೈಕೆ ಉದ್ಯಮ ನಡೆಸುತ್ತಿದ್ದರಂತೆ. ಇವರ ಆತ್ಮಹತ್ಯೆಗೆ ಖಚಿತ ಕಾರಣ ಇನ್ನೂ ತಿಳಿದು ಬಂದಿಲ್ಲ. ಗೋವಾ ರಾಜ್ಯದ ಕುಕ್ಕಳ್ಳಿ ಮತ್ತು ಕಾರವಾರದ ಚಿತ್ತಾಕುಲ ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


ಇದನ್ನೂ ಓದಿ: 40 ಸಾವಿರ ರೂ,ಗೆ ಬಾಲಕಿ ಮಾರಾಟ, ಐವರ ಬಂಧನ


ತಾಯಿ-ಮಗನ ಸಾವಿನ ಸಂಬಂಧ ಚಿತ್ತಾಕುಲಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ರೆ, ಶ್ಯಾನ್ ಪಾಟೀಲ್ ಸಾವಿನ ಸಂಬಂಧ ಗೋವಾದ ಕುಕ್ಕಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಈ ಬಗ್ಗೆ ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.