ಪುರಿ: ಒಡಿಶಾದ ಪುರಿ ಜಿಲ್ಲೆಯ ಗೋಪ್ ಪ್ರದೇಶದಲ್ಲಿ ಆಘಾತಕಾರಿ ಘಟನೆಯೊಂದು ಬಳಕಿಗೆ ಬಂದಿದೆ. ತಂದೆ ಮತ್ತು ಮಲತಾಯಿ ಸೇರಿಕೊಂಡು 17 ವರ್ಷದ ಮಗಳನ್ನು ಬರ್ಬರವಾಗಿ ಹತ್ಯೆ ಮಾಡಿದ್ದು, ಸಾಕ್ಷ್ಯನಾಶಕಕ್ಕಾಗಿ ರಾತ್ರೋರಾತ್ರಿಯೇ ಮೃತದೇಹವನ್ನು ಸುಟ್ಟುಹಾಕಿದ್ದಾರೆಂದು ವರದಿಯಾಗಿದೆ.


COMMERCIAL BREAK
SCROLL TO CONTINUE READING

ಮೃತಳನ್ನು ಸೊನಾಲಿ ಮೊಹರಾಣ ಎಂದು ಗುರುತಿಸಲಾಗಿದೆ. ಆಕೆಯ ಹಿರಿಯ ಸಹೋದರಿ ರಂಜಿತಾ ಮೊಹರಾಣ ನೀಡಿದ ದೂರಿನ ಆಧಾರದ ಮೇಲೆ ಗೋಪ್​ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿ ತಂದೆ ದುರ್ಗಾಚರಣ ಮೊಹರಾಣ ಎಂಬುವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.


ಇದನ್ನೂ ಓದಿ: Narendra Modi: ತಮ್ಮ ವೈದ್ಯಕೀಯ ವೆಚ್ಚವನ್ನು ತಾವೇ ಭರಿಸುತ್ತಿರುವ ಪ್ರಧಾನಿ ಮೋದಿ


ವರದಿಗಳ ಪ್ರಕಾರ ದುರ್ಗಾಚರಣ್ 2018ರಲ್ಲಿ ತನ್ನ ಮೊದಲ ಹೆಂಡತಿ ಮರಣದ ನಂತರ 2020ರಲ್ಲಿ ಮಮತಾ ಓಜಾಳನ್ನು ವಿವಾಹವಾಗಿದ್ದರು. 2ನೇ ಮದುವೆಯ ಬಳಿಕ ಆಕೆಯ ತಂದೆ, ಮಲತಾಯಿ ಮತ್ತು ಆಕೆಯ ಸಹೋದರ ಜೀವನ್ ಓಜಾ ಸೋನಾಲಿಗೆ ಆಗಾಗ್ಗೆ ಚಿತ್ರಹಿಂಸೆ ನೀಡುತ್ತಿದ್ದರು ಎಂದು ಸಹೋದರಿ ರಂಜಿತಾ ಆರೋಪಿಸಿದ್ದಾರೆ.


ಸೋನಾಲಿ ಸಾವಿನ ಸುದ್ದಿ ತಿಳಿದು ಗ್ರಾಮಕ್ಕೆ ಆಗಮಿಸಿದ ರಂಜಿತಾ, ನಂತರ ತನ್ನ ತಂಗಿ ಸಹೋದರಿಯನ್ನು ಕೊಂದ ದುರ್ಗಾಚರಣ್, ಮಮತಾ ಮತ್ತು ಜೀವನ್‍ರನ್ನು ಬಂಧಿಸುವಂತೆ ಗೋಪ್ ಪೊಲೀಸರಿಗೆ ದೂರು ನೀಡಿದ್ದಾರೆ. ಆರೋಪಿಗಳು ಸೋಮವಾರ ತಡರಾತ್ರಿಯೇ ಸೋನಾಲಿಯನ್ನು ಕೊಂದು ಸಾಕ್ಷ್ಯನಾಶಕ್ಕಾಗಿ ಗ್ರಾಮದ ಸ್ಮಶಾನದಲ್ಲಿ ಶವವನ್ನು ಸುಟ್ಟು ಚಿತಾಭಸ್ಮವನ್ನು ಬಚ್ಚಿಟ್ಟಿದ್ದಾರೆ ಎಂದು ಆಕೆ ಆರೋಪಿಸಿದ್ದಾಳೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.


ಇದನ್ನೂ ಓದಿ: ಪಡಿತರ ಚೀಟಿ ಇದ್ದರೆ ಸರ್ಕಾರದಿಂದ ಸಂಕ್ರಾಂತಿಗೆ ಒಂದು ಸಾವಿರ ರೂಪಾಯಿ ಮತ್ತು ಗಿಫ್ಟ್ ಹ್ಯಾಂಪರ್ !


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.