ದಾವಣಗೆರೆ: ಸಲಿಂಗಕಾಮಿ ಕಾಲೇಜು ವಿದ್ಯಾರ್ಥಿನಿಯರ ಮಧ್ಯೆ ದಾವಣಗೆರೆಯ ಶಾಂತಿನಗರದಲ್ಲಿ ಜಗಳ ನಡೆದಿದೆ. ಬೇರೋಬ್ಬಳೊಂದಿಗೆ ಕ್ಲೋಸ್​ ಆಗಿದ್ದಾಳೆಂದು ಗೆಳತಿ ಮೇಲೆಯೇ ಬ್ಲೇಡ್‍ನಿಂದ ಮತ್ತೊಬ್ಬ ಯುವತಿ ಹಲ್ಲೆ ನಡೆಸಿದ್ದಾಳೆ.


COMMERCIAL BREAK
SCROLL TO CONTINUE READING

ದಾವಣಗೆರೆಯ ಎವಿಕೆ ಕಾಲೇಜು ಹಾಸ್ಟೇಲ್‍ನಲ್ಲಿ ಘಟನೆ ನಡೆದಿದ್ದು, ಯುವತಿಯೊಬ್ಬಳು ಬ್ಲೇಡ್‍ನಿಂದ ತನ್ನ ಗೆಳತಿಯ ಕತ್ತು ಕೊಯ್ದದ್ದಾಳೆ. ಕಡೂರು ಮೂಲದ ಲಾವಣ್ಯ(ಹೆಸರು ಬದಲಾಯಿಸಲಾಗಿದೆ) ಹಾಗೂ ದಾವಣಗೆರೆಯ ರತ್ನಾ(ಹೆಸರು ಬದಲಾಯಿಸಲಾಗಿದೆ) ಮಧ್ಯೆ ಸಲಿಂಗಕಾಮವಿತ್ತು.


ಇದನ್ನೂ ಓದಿ: ಮಂಡ್ಯದ ಬೆಣ್ಣೆ ಇಡ್ಲಿ ಖ್ಯಾತಿಯ ದರಸಗುಪ್ಪೆ ಹೋಟೇಲ್ ಶಿವಪ್ಪ ನಿಧನ


ಆದರೆ ಇತ್ತಿಚೇಗೆ ತನ್ನನ್ನು ಕೇರ್ ಮಾಡುತ್ತಿಲ್ಲವೆಂದು ಸಿಟ್ಟಿಗೆದ್ದ ಲಾವಣ್ಯ ಮೇಲೆ ಬ್ಲೇಡ್‍ನಿಂದ ರತ್ನಾ ಹಲ್ಲೆ ಮಾಡಿದ್ದಾಳೆ. ಗಂಭೀರವಾಗಿ ಗಾಯಗೊಂಡ ಲಾವಣ್ಯಳನ್ನು ದಾವಣಗೆರೆಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಆಕೆಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ.


ದಾವಣಗೆರೆಯ ಶಾಂತಿನಗರದ ಹಾಸ್ಟೇಲ್‍ನಲ್ಲಿದ್ದ ಲಾವಣ್ಯ-ರತ್ನಾ ಇಬ್ಬರು ಸಲಿಂಗಕಾಮಿಗಳಾಗಿದ್ದರು. ಇಬ್ಬರು ಹಲವಾರು ದಿನಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಆದರೆ ಲಾವಣ್ಯ ಇತ್ತೀಚಿಗೆ ಬೇರೆ ಯುವತಿಯ ಜೊತೆ ಮಾತಾಡ್ತಿದ್ದಾಳೆ ಅಂತಾ ರತ್ನಾ ಸಿಟ್ಟು ಮಾಡಿಕೊಂಡಿದ್ದಳು. ಇದೇ ವಿಚಾರಕ್ಕೆ ಆಕೆಯ ಮೇಲೆ ಹಲ್ಲೆ ನಡೆಸಿದ್ದಾಳೆ.


ಇದನ್ನೂ ಓದಿ: ಪಂಚಮಸಾಲಿ ಮೀಸಲಾತಿಗೆ ಆಗ್ರಹಿಸಿ ಹುಕ್ಕೇರಿಯಲ್ಲಿ ಬೃಹತ್ ಸಮಾವೇಶ


ಇನ್ನು ಈ ಘಟನೆಯ ಬಗ್ಗೆ ದಾವಣಗೆರೆ ಎಸ್ಪಿ ಸಿ.ಬಿ.ರಿಷ್ಯಂತ್ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ನೇಹಾಳ ಮೇಲೆ ಬ್ರೇಡ್‍ನಿಂದ ಹಲ್ಲೆ ನಡೆಸಿದ ಲಾಸಿಯನ್ನು ಬಂಧಿಸಲಾಗಿದೆ.    


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ