ಬೆಂಗಳೂರು: ಸಿಲಿಕಾನ್  ಸಿಟಿಯಲ್ಲಿ ರಸ್ತೆಯಲ್ಲಿ ನಡೆದುಕೊಂಡು ಹೋಗುವ ಹೆಣ್ಣುಮಕ್ಕಳ ಮೈ ಮುಟ್ಟಿ ವಿಕೃತಿ ಮೆರೆಯುತ್ತಿದ್ದವ ಈಗ ಪೊಲೀಸರ ಅತಿಥಿಯಾಗಿದ್ದಾನೆ. ರಾಯಚೂರು ಮೂಲದ ಗಂಗಾಧರ್ ಬಂಧಿತ ಆರೋಪಿ.ಎರಡು ಪೊಲೀಸ್​ ಠಾಣೆಯಲ್ಲಿ ಈ ಕಾಮುಕನ ಮೇಲೆ ಎಫ್​ಐಆರ್​​ ದಾಖಲಾಗಿತ್ತು.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಮುಲಾಯಂ ಸಿಂಗ್ ಯಾದವ್ ಪತ್ನಿ ಆರೋಗ್ಯ ಸ್ಥಿತಿ ಚಿಂತಾಜನಕ!


ಸಿಸಿಟಿವಿಯಲ್ಲಿ ವಿಕೃತನ ಚಲನವಲನ ಪತ್ತೆಯಾಗಿತ್ತು. ಬೈಕಿನಲ್ಲಿ ಬರುತ್ತಿದ್ದ ಈತ ಹೆಣ್ಣುಮಕ್ಕಳ ಮೈ-ಕೈ ಮುಟ್ಟಿ ಎಸ್ಕೇಪ್ ಆಗುತ್ತಿದ್ದ. ನಗರದ ವೈಯಾಲಿಕಾವಲ್ ಸುತ್ತಮುತ್ತ ಈತ ಓಡಾಡ್ತಿದ್ದ.ಜುಲೈ 3ರಂದು ಸೈಕಲಿಂಗ್ ಜಾಥ ಮಾಡ್ತಿದ್ದ ಯುವತಿ ಜೊತೆ ಅಸಭ್ಯವಾಗಿ ವರ್ತಿಸಿದ್ದ. 


ಫುಡ್ ಡೆಲಿವರಿ ಮಾಡುವ ನೆಪದಲ್ಲಿ ಬೈಕ್​ ನಲ್ಲಿ ಬರುತ್ತಿದ್ದ ಕಾಮುಕ ಹೆಣ್ಣುಮಕ್ಕಳ ಜತೆ ಅನುಚಿತವಾಗಿ ನಡೆದುಕೊಂಡಿದ್ದ. ಸದ್ಯ ಸದಾಶಿವನಗರ ಪೊಲೀಸರು ಈತನನ್ನು ಬಂಧಿಸಿ ಕಂಬಿ ಹಿಂದೆ ತಳ್ಳಿದ್ದಾರೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.