ಬೆಂಗಳೂರು: ಕತ್ತರಿಯಿಂದ ಕುತ್ತಿಗೆಗೆ ಇರಿದು ವ್ಯಕ್ತಿಯನ್ನು ಕೊಲೆ ಮಾಡಿರುವ ಘಟನೆ ನಗರದ ಶಿವಾಜಿನಗರದಲ್ಲಿ ನಡೆದಿದೆ.


COMMERCIAL BREAK
SCROLL TO CONTINUE READING

25 ವರ್ಷದ ಜಾವದ್ ಕೊಲೆಯಾದ ಯುವಕ, ಪ್ರಾಥಮಿಕ ಮಾಹಿತಿ ಪ್ರಕಾರ ಯುವತಿಯ ವಿಚಾರಕ್ಕೆ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ.


ಇದನ್ನೂ ಓದಿ: ದೇಶದಲ್ಲಿ ವೇಗವಾಗಿ ಹರಡುತ್ತಿದೆ ಕೋವಿಡ್‌: ಒಂದೇ ದಿನದಲ್ಲಿ 20ಸಾವಿರಕ್ಕೂ ಹೆಚ್ಚು ಕೇಸ್‌ ದಾಖಲು!


ಜಾವದ್ ಪ್ರೀತಿಸಿದ ಹುಡುಗಿಗೆ ಬೇರೆಯವನೊಂದಿಗೆ ಮದುವೆಯಾಗಿತ್ತು. ಆದರೆ ಜಾವದ್ ಮಾತ್ರ ಮಾಜಿ ಪ್ರೇಯಸಿಯ ಮನೆ ಬಳಿ ಪದೇ ಪದೇ ಹೋಗ್ತಿದ್ದ. ಇದರಿಂದ ಕುಪಿತಗೊಂಡಿದ್ದ ಯುವತಿಯ ಅನೇಕ ಬಾರಿ ಜಾವದ್ ಗೆ ಎಚ್ಚರಿಕೆ‌‌ ನೀಡಿದ್ದ. ಸದ್ಯ ಅದೇ ಪ್ರವೃತ್ತಿ ಮುಂದುವರೆಸಿದ್ದ ಜಾವದನನ್ನ ಯುವತಿಯ ಪತಿಯೇ ಕೊಲೆಗೈದಿರುವ ಶಂಕೆ ವ್ಯಕ್ತವಾಗಿದೆ.


ಇದನ್ನೂ ಓದಿ: Singapore Open 2022: ಫೈನಲ್‌ಗೆ ಲಗ್ಗೆಯಿಟ್ಟ ಪಿ.ವಿ ಸಿಂಧು


ಸಿಸಿಟಿವಿ ಬ್ಯಸಿನೆಸ್ ಮಾಡ್ತಿದ್ದ ಜಾವದ್, ತಡರಾತ್ರಿ ಕೂಡ ಪ್ರೇಯಸಿ ಮನೆ ಬಳಿ ಹೋಗಿದ್ದ.ಆ ವೇಳೆ ಗಂಡ ಹೆಂಡ್ತಿ ಇಬ್ಬರು ಸೇರಿ ಹತ್ತೆಗೈದಿರೋ ಶಂಕೆ ಕೂಡ ವ್ಯಕ್ತವಾಗಿದೆ. ಇನ್ನೂ ಕತ್ತರಿ ಇರಿದಾಗ ಜಾವದ್ ರಕ್ತ ಸ್ರಾವವಾದ್ರೂ ಆಸ್ಪತ್ರೆಯವರೆಗೆ ಓಡಿ ನನ್ನ ಜೀವ ಉಳಿಸಿ ಅಂತಾ ವೈದ್ಯರ ಬಳಿ ಕೇಳಿಕೊಂಡಿದ್ದಾನೆ ಎನ್ನಲಾಗಿದೆ.


ಆದರೆ ವೈದ್ಯರು ಚಿಕಿತ್ಸೆ ನೀಡುವ ಮೊದಲೇ ಜಾವದ್ ಮೃತಪಟ್ಟಿದ್ದಾನೆ.ಸದ್ಯ ಘಟನೆ ಸಂಬಂಧ ಶಿವಾಜಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ದಂಪತಿಯನ್ನು ವಶಕ್ಕೆ ಪಡೆದು ಪೊಲೀಸ್ರು ವಿಚಾರಣೆ ನಡೆಸುತ್ತಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.