ಬಾಗಲಕೋಟೆ: ಟಾಟಾ‌ ಸಫಾರಿ ಮತ್ತು ಬೈಕ್ ಮುಖಾಮುಖಿ ಡಿಕ್ಕಿಯಾಗಿ ರೈತ ಸಾವನ್ನಪ್ಪಿದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಈ ಅಪಘಾತ ಸಾವಲ್ಲ ಕೊಲೆ ಎಂಬುದು ತಿಳಿದುಬಂದಿದೆ. ಕಾನೂನು ಕಾಯಬೇಕಾದವನಿಂದಲೇ ಕೊಲೆ ನಡೆದಿದೆ.


COMMERCIAL BREAK
SCROLL TO CONTINUE READING

ಹೌದು, ಆಸ್ತಿ ವಿವಾದ ಹಿನ್ನೆಲೆ ಪೊಲೀಸ್ ಕಾನ್ಸ್‌ಟೇಬಲ್‌ ರೈತರೊಬ್ಬರನ್ನು ಕೊಲೆ ಮಾಡಿದ್ದಾನೆ. ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಗೋಟೆಗದ್ಯಾಳ ಗ್ರಾಮದಲ್ಲಿ ಈ ಘಟನೆ ನಡೆದಿದೆ. ರೈತ ಮಡ್ಡೆಸಾಬ್ ಗಲಗಲಿ(55) ಎಂಬುರನ್ನು ವಿಜಯಪುರದ ಜಲನಗರ ಠಾಣೆಯ ಪೊಲೀಸ್ ಕಾನ್ಸ್‌ಟೇಬಲ್ ಮನ್ಸೂರ್ ಅಲಿ ಕೊಲೆ ಮಾಡಿದ್ದಾನೆ.  


ಇದನ್ನೂ ಓದಿ: ಹೊಸ ವರ್ಷಕ್ಕೆ ಗುಡ್‌ ನ್ಯೂಸ್‌ ನೀಡಿದ BMTC : ಎಲ್ಲಿಗಾದ್ರೂ ಉಚಿತವಾಗಿ ಪ್ರಯಾಣಿಸಿ


ಟಾಟಾ ಸಫಾರಿ ಕಾರಿನಿಂದ‌ ಬೈಕ್‍ಗೆ ಡಿಕ್ಕಿ‌ ಹೊಡೆಸಿ ರೈತನನ್ನು ಕೊಲೆಮಾಡಲಾಗಿದೆ. ಸಹೋದರ‌ ಮೆಹಮೂದ್ ಕಾನ್ಸ್ಟೇಬಲ್‍ ಮನ್ಸೂರ್ ಅಲಿಗೆ ಸಾತ್ ನೀಡಿದ್ದಾನೆ. ಡಿಸೆಂಬರ್ 8ರಂದು ಬೆಳಗ್ಗೆ 10.30ರ ವೇಳೆಗೆ ಈ ಘಟನೆ ನಡೆದಿದೆ. ಬೈಕ್‍ಗೆ ಟಾಟಾ ಸಫಾರಿ ಕಾರಿನಿಂದ‌ ಡಿಕ್ಕಿ ಹೊಡೆಸಿ ಅಪಘಾತವೆಂದು ಬಿಂಬಿಸಲು ಆರೋಪಿಗಳು ಪ್ರಯತ್ನಿಸಿದ್ದಾರೆ.  


ಸಾವಳಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ಮೊದಲು ಹಿಟ್ ಅಂಡ್ ರನ್ ಕೇಸ್ ಆಗಿತ್ತು.  ವಿಚಾರಣೆ ವೇಳೆ‌ ಕಾನ್ಸ್‌ಟೇಬಲ್ ಕರಾಮತ್ತು ಬಯಲಾಗಿದೆ. ಹೀಗಾಗಿ ಕಾನ್ಸ್‌ಟೇಬಲ್ ಮನ್ಸೂರ್ ಅಲಿ ಹಾಗೂ ಸಹೋದರ‌ ಮೆಹಮೂದ್‍ನನ್ನು ಸಾವಳಗಿ ಪೊಲೀಸರು ಬಂಧಿಸಿದ್ದಾರೆ. ಮುಧೋಳ ತಾಲೂಕಿನ ಶಿರೋಳ ಗ್ರಾಮದಲ್ಲಿರುವ ಮೂರುವರೆ ಎಕರೆ ಜಮೀನು ವಿವಾದ ಹಿನ್ನೆಲೆ ರೈತನನ್ನು ಪೊಲೀಸ್ ಕಾನ್ಸ್‌ಟೇಬಲ್ ಕೊಲೆ ಮಾಡಿರುವುದು ಗೊತ್ತಾಗಿದೆ.


ಇದನ್ನೂ ಓದಿ: JN-1ಗೆ ಬ್ರೇಕ್‌ ಹಾಕಲು ಕೇಂದ್ರ ಆರೋಗ್ಯ ಇಲಾಖೆ ಅಲರ್ಟ್‌


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.