ತಂದೆಗೆ ಅನಾರೋಗ್ಯ: ಕೇರಳಕ್ಕೆ ತೆರಳುತ್ತಿದ್ದಾನೆ ಬೆಂಗಳೂರು ಸರಣಿ ಬಾಂಬ್ ಸ್ಟೋಟದ ರುವಾರಿ ಮದನಿ
ಸುಪ್ರೀಂ ಕೋರ್ಟ್ ಆದೇಶದ ಮೇಲೆ 12 ದಿನದ ಸೇವಾ ವೆಚ್ಚವನ್ನ ಪೊಲೀಸರಿಗೆ ಸರ್ವೀಸ್ ಚಾರ್ಜ್ ಕಟ್ಟಿದ್ದಾನೆ ಮದನಿ. ಒಟ್ಟು 12 ದಿನ ಕೇರಳದಲ್ಲೇ ವಾಸ್ತವ್ಯ ಹೂಡಲಿದ್ದು, ಜುಲೈ 7ರಂದು ಬೆಂಗಳೂರಿಗೆ ವಾಪಸ್ ಆಗಲಿದ್ದಾನೆ.
Bengaluru Serial Bomb Blast: ಬೆಂಗಳೂರು ಸರಣಿ ಬಾಂಬ್ ಸ್ಪೋಟದ ಪ್ರಮುಖ ರೂವಾರಿ ಅಬ್ದುಲ್ ನಾಸೀರ್ ಮದನಿ ಇಂದು ಸಂಜೆ 6.15 ಕ್ಕೆ ವಿಮಾನದಲ್ಲಿ ಕೊಚ್ಚಿನ್ ಗೆ ತೆರಳಲಿದ್ದಾನೆ. ರಾತ್ರಿ 7.20ಕ್ಕೆ ಕೊಚ್ಚಿನ್ ತಲುಪಲಿರುವ ಮದನಿ ಜೊತೆ ಹೆಂಡತಿ ಮತ್ತು ಇತರರು ಪ್ರಯಾಣ ಬೆಳಸಲಿದ್ದಾರೆ.
ಪೊಲೀಸ್ ಭದ್ರತೆಯಲ್ಲಿ ತವರಿಗೆ ತೆರಳಲಿರುವ ಮದನಿ ಭದ್ರತೆಗಾಗಿ ಓರ್ವ ಆರ್ ಎಸ್ಐ, ಮೂವರು ಪಿಸಿಗಳು, ಒಬ್ಬ ಚಾಲಕನನ್ನು ನಿಯೋಜಿಸಲಾಗಿದೆ. ಸಿಬ್ಬಂದಿ ಖರ್ಚು ವೆಚ್ಚ ಹಾಗೂ ಸರ್ವೀಸ್ ಚಾರ್ಜ್ ಹಣವನ್ನು ಅಂದರೆ 6,76,101 ರೂಪಾಯಿಗಳನ್ನು ಮದನಿ ಪಾವತಿ ಮಾಡಿದ್ದಾನೆ.
ಇದನ್ನೂ ಓದಿ- ಶೀಲ ಶಂಕಿಸಿ ಹೆಂಡತಿಯ ಗುಪ್ತಾಂಗಕ್ಕೆ ಇರಿದ ಪಾಪಿ ಗಂಡ..!
ಸುಪ್ರೀಂ ಕೋರ್ಟ್ ಆದೇಶದ ಮೇಲೆ 12 ದಿನದ ಸೇವಾ ವೆಚ್ಚವನ್ನ ಪೊಲೀಸರಿಗೆ ಸರ್ವೀಸ್ ಚಾರ್ಜ್ ಕಟ್ಟಿದ್ದಾನೆ ಮದನಿ. ಒಟ್ಟು 12 ದಿನ ಕೇರಳದಲ್ಲೇ ವಾಸ್ತವ್ಯ ಹೂಡಲಿದ್ದು, ಜುಲೈ 7ರಂದು ಬೆಂಗಳೂರಿಗೆ ವಾಪಸ್ ಆಗಲಿದ್ದಾನೆ.
ಇದನ್ನೂ ಓದಿ- Accident ಮಾಡಿ ಗಾಯಗೊಂಡವರ ಮೇಲೆಯೇ ದೂರು ದಾಖಲಿಸಿದ ಮಾಜಿ ತಹಶೀಲ್ದಾರ್
ತಂದೆಯ ಅನಾರೋಗ್ಯದ ನಿಮಿತ್ತ ಕೇರಳಕ್ಕೆ ತೆರಳುತ್ತಿರುವ ಮದನಿ ಸುಪ್ರೀಂ ಕೋರ್ಟ್ ನಲ್ಲಿ ಕೇರಳಕ್ಕೆ ತೆರಳಲು ಮನವಿ ಸಲ್ಲಿಸಿದ್ದ. ಸುಪ್ರೀಂ ಕೋರ್ಟ್ ಅನುಮತಿ ಮೇರೆಗೆ ಕೇರಳದ ಕೊಲ್ಲಂ ಜಿಲ್ಲೆಯ ಅನ್ವರ್ ಸಿರಿ ಸಸ್ತುಂಮಕುಟ ಎಂಬ ಊರಿಗೆ ಅಬ್ದುಲ್ ನಾಸೀರ್ ಮದನಿ ತೆರಳುತ್ತಿದ್ದು, ಈ ಹಿನ್ನೆಲೆ ಕೇರಳ ಪೊಲೀಸರಿಗೂ ನಗರ ಪೊಲೀಸರು ಮಾಹಿತಿ ನೀಡಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.