ಸ್ಟಾರ್ ಹೀರೋ ಜೊತೆ ರಹಸ್ಯವಾಗಿ ನಿಶ್ಚಿತಾರ್ಥ ಮಾಡಿಕೊಂಡ ನಟಿ ತ್ರಿಷಾ..?

Actress Trisha: ಕಳೆದ ಕೆಲ ದಿನಗಳಿಂದ ತಮಿಳಿನ ಸ್ಟಾರ್ ಹೀರೋ ವಿಜಯ್ ಹಾಗೂ ನಾಯಕಿ ತ್ರಿಷಾ ಬಗ್ಗೆ ಹಲವು ಕಥೆಗಳು ಬೆಳಕಿಗೆ ಬರುತ್ತಿರುವುದು ಗೊತ್ತೇ ಇದೆ. ಇವರಿಬ್ಬರು ರಿಲೇಶನ್ ಶಿಪ್ ನಲ್ಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ ಇದಕ್ಕೆ ಯಾವುದೇ ಪುರಾವೆಗಳಿಲ್ಲ..   

Written by - Savita M B | Last Updated : Sep 20, 2024, 03:58 PM IST
  • ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕನಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ
  • ತ್ರಿಶಾ ವಿಜಯ್ ಅವರ ಡೇಟಿಂಗ್ ಸುದ್ದಿ ಚಿತ್ರರಂಗದಲ್ಲಿ ಸಂಚಲನ ಸೃಷ್ಟಿಸಿತ್ತು..
ಸ್ಟಾರ್ ಹೀರೋ ಜೊತೆ ರಹಸ್ಯವಾಗಿ ನಿಶ್ಚಿತಾರ್ಥ ಮಾಡಿಕೊಂಡ ನಟಿ ತ್ರಿಷಾ..? title=

Actress Trisha News: ಇತ್ತೀಚೆಗೆ ನಟ ವಿಜಯ್‌ ಅವರ ಹುಟ್ಟುಹಬ್ಬ ನಡೆಯಿತು. ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕನಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. ಇಂಡಸ್ಟ್ರಿಯ ಹಲವು ಗಣ್ಯರು ಕೂಡ ನಾಯಕ ವಿಜಯ್ ಹುಟ್ಟುಹಬ್ಬಕ್ಕೆ ಶುಭ ಕೋರಿದ್ದಾರೆ. ಇದರ ಅಂಗವಾಗಿ ನಾಯಕಿ ತ್ರಿಶಾ ಕೂಡ ವಿಜಯ್ ಹುಟ್ಟುಹಬ್ಬಕ್ಕೆ ಶುಭ ಕೋರಿದ್ದಾರೆ. 

ತ್ರಿಶಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಖಾಸಗಿ ಫೋಟೋವನ್ನು ಲೀಕ್ ಮಾಡಿದ್ದು ಗೊತ್ತೇ ಇದೆ. ಮೇಲಾಗಿ ವಿಜಯ್ ಬರ್ತ್ ಡೇ ಪಾರ್ಟಿಗೆ ತ್ರಿಷಾ ಕೂಡ ಬಂದಿದ್ದರು ಎಂಬ ಮಾತು ಕೇಳಿಬಂದಿತ್ತು. ಆ ವೇಳೆ ವಿಜಯ್ ಆಕೆಗೆ ದುಬಾರಿ ವಜ್ರದ ಉಂಗುರವನ್ನು ನೀಡಿದ್ದರು. ಕೋಟ್ಯಂತರ ರೂಪಾಯಿ ಮೌಲ್ಯದ ವಜ್ರದ ನೆಕ್ಲೇಸ್ ಕೂಡ ಉಡುಗೊರೆಯಾಗಿ ನೀಡಲಾಗಿದೆ. ಅದೇ ಸಮಯದಲ್ಲಿ ವಿಜಯ್ ಕೂಡ ಆ ವಜ್ರದ ಉಂಗುರವನ್ನು ತ್ರಿಷಾ ಬೆರಳಿಗೆ ಹಾಕಿದ್ದಾರೆ ಎನ್ನುವ ಸುದ್ದಿ ಮಾಧ್ಯಮಗಳಲ್ಲಿ ಪ್ರಚಾರವಾಗುತ್ತಿದ್ದಂತೆ, ತ್ರಿಶಾ ವಿಜಯ್ ಅವರ ಡೇಟಿಂಗ್ ಸುದ್ದಿ ಚಿತ್ರರಂಗದಲ್ಲಿ ಸಂಚಲನ ಸೃಷ್ಟಿಸಿತ್ತು.. 

ಇದನ್ನೂ ಓದಿ-ಶ್ರದ್ಧಾ ಅಂದಕ್ಕೆ ದಾಸರಾದ ಪಡ್ಡೆ ಹುಡುಗರು..! ಫೋಟೋಸ್‌ ನೋಡೋದೆ ಒಂದು ಭಾಗ್ಯ..

ಇದಲ್ಲದೇ ತ್ರಿಶಾ ವಿಜಯ್ ಅವರು ಸ್ಟಾರ್ ಹೋಟೆಲ್‌ನಲ್ಲಿ ರಹಸ್ಯವಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂದು ಹಲವು ವದಂತಿಗಳು ಸೃಷ್ಟಿಯಾದವು. ಅದೇ ಸಮಯದಲ್ಲಿ ನಟ ವಿಜಯ್ ಪತ್ನಿಗೆ ವಿಚ್ಛೇದನ ನೀಡಲು ಸಿದ್ಧರಾಗಿದ್ದಾರೆ ಎಂಬ ಸುದ್ದಿಯೂ ಮುನ್ನೆಲೆಗೆ ಬಂದಿದೆ. ವಿಜಯ್ ತನ್ನ ಪತ್ನಿಗೆ ವಿಚ್ಛೇದನ ನೀಡಿ ತ್ರಿಷಾಳನ್ನು ಮದುವೆಯಾಗಲಿದ್ದಾರೆ ಎಂಬ ಸುದ್ದಿಯೂ ಹರಿದಾಡುತ್ತಿದೆ.

 ಈ ಹಿಂದೆ ವಿಜಯ್ ತಮ್ಮ ಪತ್ನಿಯೊಂದಿಗೆ ಕಾರ್ಯಕ್ರಮಗಳಿಗೆ ಹಾಜರಾಗುತ್ತಿದ್ದರು. ಆದರೆ ಈಗ ಯಾವ ಎಲ್ಲಿಯಾದರೂ ಒಂಟಿಯಾಗಿ ಕಾಣುತ್ತಿದ್ದಾರೆ. ಸದ್ಯದಲ್ಲೇ ವಿಚ್ಛೇದನಕ್ಕೆ ಸಿದ್ಧರಾಗಿದ್ದಾರೆ ಎಂಬ ಸುದ್ದಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದಕ್ಕೆ ಪ್ರತಿಕ್ರಿಯಿಸಿದ ಗಾಯಕಿ ಸುಚಿತ್ರಾ, ಹೀರೋ ವಿಜಯ್ ಪತ್ನಿಗೆ ವಿಚ್ಛೇದನ ನೀಡಿದ್ದು, ಸದ್ಯದಲ್ಲೇ ನಾಯಕಿ ತ್ರಿಷಾ ಅವರನ್ನು ಮದುವೆಯಾಗಲು ರೆಡಿಯಾಗಿದ್ದಾರೆ ಎಂದು ಸೆನ್ಸೇಷನಲ್‌ ಹೇಳಿಕೆ ನೀಡಿದ್ದಾರೆ.. ತಮಿಳುನಾಡು ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಸಿದ್ಧರಾಗಿರುವ ವಿಜಯ್ ಅವರ ವೈಯಕ್ತಿಕ ಜೀವನ ವಿವಾದಗಳಲ್ಲಿ ಸಿಲುಕಿರುವ ಬಗ್ಗೆ ಅಭಿಮಾನಿಗಳು ಚಿಂತಿತರಾಗಿದ್ದಾರೆ.

ಇದನ್ನೂ ಓದಿ-ಕಲಾವಿದರ ಮಾಸಾಶನ 3000 ರೂ.ಗೆ ಏರಿಕೆ : ಸಿಎಂ ಸಿದ್ದರಾಮಯ್ಯ ಘೋಷಣೆ 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News