Bangalore Crime : ಲವರ್ ಕೈಕೊಟ್ಟಳು ಅಂತಾ ಯುವಕ ಸೂಸೈಡ್ : ಆಡಿಯೋ ಮಾಡಿಟ್ಟು ಆತ್ಮಹತ್ಯೆ
ಲವರ್ ಸಿಗಲ್ಲ ಅಂತಾ ಎಂದು ಜಿಗುಪ್ಸೆಗೊಂಡ ಯುವಕ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಸಾಯುವ ಮುನ್ನ ಆಡಿಯೋ ಮಾಡಿ ಸೂಸೈಡ್ ಮಾಡಿಕೊಂಡಿದ್ದಾನೆ.
ಬೆಂಗಳೂರು : ಲವರ್ ಸಿಗಲ್ಲ ಅಂತಾ ಎಂದು ಜಿಗುಪ್ಸೆಗೊಂಡ ಯುವಕ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಸಾಯುವ ಮುನ್ನ ಆಡಿಯೋ ಮಾಡಿ ಸೂಸೈಡ್ ಮಾಡಿಕೊಂಡಿದ್ದಾನೆ.
ಮಡಿವಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಮಣಿಕಂಠ ಮೃತ ಯುವಕ. ಜುಲೈ 23ರಂದು ಈ ಘಟನೆ ನಡೆದಿದ್ದು, ಮಡಿವಾಳದ ಮಾರುತಿ ನಗರದಲ್ಲಿ ಮಣಿಕಂಠ ವಾಸವಾಗಿದ್ದ. ಕಳೆದ ಆರು ತಿಂಗಳಿಂದ ಯುವತಿಯನ್ನ ಪ್ರೀತಿಸುತ್ತಿದ್ದ. ಪ್ರೀತಿಗೆ ಯುವತಿಯಿಂದಲೂ ಒಪ್ಪಿಗೆ ಇತ್ತು ಎನ್ನಲಾಗಿದೆ. ಇತ್ತೀಚೆಗೆ ಇಬ್ಬರ ನಡುವೆ ವೈಮನಸ್ಸು ಬಂದು ಲವ್ ಬ್ರೇಕಪ್ ಆಗಿತ್ತು. ಲವರ್ ನೆನಪಲ್ಲಿ ಮಣಿಕಂಠ ಕಾಲ ಕಳೆಯುತ್ತಿದ್ದ.
ಇದನ್ನೂ ಓದಿ : ರಾಬರಿ ಮಾಡಿ ಮಹದೇಶ್ವರಕ್ಕೆ ಬೆಟ್ಟಕ್ಕೆ ಹೋಗಿ ಪ್ರಾಯಶ್ಚಿತ ಮಾಡಿಕೊಂಡಿದ್ದವರು ಅಂದರ್
ಜುಲೈ 23ರಂದು ಮನೆಗೆ ಬಂದ ಮಣಿಕಂಠ ನಿದ್ರಿಸುವುದಾಗಿ ರೂಮ್ ಗೆ ಹೋಗಿದ್ದ. ಎಷ್ಟೊತ್ತಾದರೂ ಬಾಗಿಲು ತಟ್ಟಿದ್ದರೂ ಕದ ತೆರೆದಿರುವುದನ್ನು ಕಂಡ ಮನೆಯವರು ಅನುಮಾನ ಬಂದು ಸ್ಥಳೀಯರ ನೆರವಿನಿಂದ ಬಾಗಿಲು ಮುರಿದು ಒಳಹೋಗಿ ನೋಡಿದಾಗ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ. ಈ ಸಂಬಂಧ ಮಡಿವಾಳ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.