ಬೆಂಗಳೂರು: ಖಾರದಪುಡಿ ಎರಚಿ ಸರ ಕಸಿಯಲು ಯತ್ನಿಸಿದ ಯುವತಿ ಮತ್ತು  ಆಕೆಯ ಬಾಯ್ ಫ್ರೆಂಡ್ ಇಬ್ಬರನ್ನು ಬಂಧಿಸಲಾಗಿದೆ. ಬ್ಯಾಂಕ್ ಲೋನ್ ತೀರಿಸೋದಕ್ಕಾಗಿ ಗೆಳೆಯನ ಜೊತೆ ಯುವತಿ ರಾಬರಿಗಿಳಿದಿದ್ದಳು. ಈ ಖತರ್ನಾಕ್‌ ಜೋಡಿಯನ್ನು ನಂದಿನಿ ಲೇಔಟ್ ಪೊಲೀಸರು ಅರೆಸ್ಟ್‌ ಮಾಡಿದ್ದಾರೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ: ತಲೆಗೆ ಹುಳ ಬಿಡ್ತಿದೆ ಉಪೇಂದ್ರ ನಿರ್ದೇಶನದ "UI" ಚಿತ್ರದ ಹೊಸ ಪೋಸ್ಟರ್


ನಗರದ ಖಾಸಗಿ ಕಾಲೇಜಿನಲ್ಲಿ ಈ ಯುವಕ, ಯುವತಿ ವ್ಯಾಸಂಗ ಮಾಡುತ್ತಿದ್ದರು.  ಆನ್‌ಲೈನ್‌ ಇನ್ಸ್‌ಟಂಟ್‌ ಲೋನ್ ಅಪ್ಲಿಕೇಷನ್‌ನಲ್ಲಿ ಈ ಯುವಕ ಸಾಲ ಪಡೆದಿದ್ದ. 15 ಸಾವಿರ ಲೋನ್ ಪಡೆದು ತನ್ನ ಗರ್ಲ್ ಫ್ರೆಂಡ್‌ಗೆ ಖರ್ಚು ಮಾಡಿದ್ದ. 


ಲೋನ್ ಕಟ್ಟಲಾಗದಿದ್ದಾಗ ರಾಬರಿ ಮಾಡೋ ಪ್ಲಾನ್ ಮಾಡಿದ್ದಾರೆ. ಅದರಂತೆ  ನಂದಿನಿ ಲೇಔಟ್ ನಲ್ಲಿ ಒಂಟಿ ವೃದ್ದೆಯ ಸರ ಕಸಿಯಲು ಪ್ಲಾನ್ ಮಾಡಿದ್ದರು. ಮೇ 28 ರ ಬೆಳಗ್ಗೆ ನಂದಿನಿ ಲೇಔಟ್ ಪಾರ್ಕ್ ಬಳಿ ವಾಕಿಂಗ್ ಮಾಡ್ತಿದ್ದ ಗಾಯತ್ರಿ ಎಂಬ ವೃದ್ಧೆಯ ಸರ ಕದಿಯಲು ಯತ್ನಿಸಿದ್ದಾರೆ.  


ಹಿಂಬದಿಯಿಂದ ಬಂದು ಗಾಯತ್ರಿಯವರ ಮುಖಕ್ಕೆ ಯುವತಿ ಖಾರದಪುಡಿ ಎರಚಿದ್ದರು. ಈ ವೃದ್ಧೆ ಕೆಳಗೆ ಬಿದ್ದು, ಅರಚಾಡಿದ ಪರಿಣಾಮ ಸ್ಥಳೀಯರು ಜಮಾಯಿಸಿದರು. ಈ ವೇಳೆ ಯುವತಿ ಗೆಳೆಯನ ಬೈಕ್ ಹತ್ತಿ, ಎಸ್ಕೇಪ್ ಆಗಿದ್ದರು.


ಇದನ್ನೂ ಓದಿ: Nature By Lips Shape: ವ್ಯಕ್ತಿಯ ತುಟಿ ನೋಡಿ ಸ್ವಭಾವ ಕಂಡುಹಿಡಿಯಬಹುದು!


ಘಟನೆ ನಂತರ ನಂದಿನಿ ಲೇಔಟ್ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ದೂರು ಆಧರಿಸಿ ಸರ ಕಸಿಯಲು ಯತ್ನಿಸಿದ್ದ ಯುವಕ-ಯುವತಿಯನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸ್‌ ವಿಚಾರಣೆ ವೇಳೆ ಇಬ್ಬರೂ ತಪ್ಪೊಪ್ಪಿಕೊಂಡಿದ್ದಾರೆ. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.