Crime News: ಪ್ರೀತ್ಸೆ ಪ್ರೀತ್ಸೆ ಎಂದು ಪ್ರಾಣ ತಿಂದು ಯುವತಿಯ ಬಾಳು ಹಾಳು ಮಾಡಿದ ಪ್ರಕರಣಗಳು ಈ ಒಂದು ವಾರದಲ್ಲಿ ರಾಜ್ಯಾದ್ಯಂತ ಭಾರಿ ಸದ್ದು ಮಾಡಿದೆ. ಅದೇ ದೀತಿಯ ಒನ್ ಸೈಡ್ ಲವ್ ಗೆ ಬೇಸೆತ್ತು ಅಪ್ರಾಪ್ತೆ ಬಾಲಕಿಯೊಬ್ಬಳು ನೇಣಿಗೆ ಕೊರಳೊಡ್ಡಿದ ಘಟನೆ ಶಿವಮೊಗ್ಗ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬಾಲಕಿ ಸಾವಿಗೆ ಇಡೀ ಗ್ರಾಮವೇ ಕಂಬನಿ ಮಿಡಿದಿದೆ. ಸಹಪಾಠಿಗಳು ಕಣ್ಣೀರು ಹಾಕಿದ್ದಾರೆ. ಏನಿದು ಘಟನೆ ಅಂತಿರಾ ಈ ಸ್ಟೋರಿ ಓದಿ... 


COMMERCIAL BREAK
SCROLL TO CONTINUE READING

ಅದೊಂದು ಕಾಲ್ ಬಂದ ಅರ್ಧ ಗಂಟೆಯೊಳಗೆ ಇಹಲೋಕ ತ್ಯಜಿಸಿದ್ದಳು ಆ ಬಾಲೆ. ತಾನು ಫೋನ್ ಮಾಡಿದ ಕಾಲ್ ಲೀಸ್ಟ್ ಡಿಲೀಟ್ ಮಾಡಿದ್ಧಳು. ಆ ಅಪ್ರಾಪ್ತೆ ಭವಿಷ್ಯದ ಕನಸು ಹೊತ್ತು ಅದರ ಬೆನ್ನೇರಿ ಹೊರಟಿದ್ದವಳು. ತಾನು ಓದಿ ಮುಂದೆ ಮನೆ ಮಂದಿಯನ್ನೆಲ್ಲಾ ಸಾಕಬೇಕೆಂಬ ಹಂಬಲ ತೊಟ್ಟು ಶಾಲೆಗೆ ಹೋಗುತ್ತಿದ್ದ ಆಕೆಯ ಬದುಕಿನ ಮಾರ್ಗಕ್ಕೆ ಮುಳ್ಳಾಗಿ ಬಂದ  ಮನೆ ಸನಿಹದ ಯುವಕ. 


ಪದೇ ಪದೇ ಪ್ರೀತ್ಸೆ ಪ್ರೀತ್ಸೆ ಅನ್ನುತ್ತಿದ್ದ ಆತನ ಕಾಟಕ್ಕೆ ಹುಡುಗಿ ನಲುಗಿ ಹೋಗಿದ್ದಳು.  ವಿದ್ಯಾಭ್ಯಾಸದ ಕಡೆ ಗಮನ ಹರಿಸಲು ಆಕೆಗೆ ಸಾಧ್ಯವಾಗಲಿಲ್ಲ. ನೀನು ನನ್ನ ಪ್ರೀತಿಸುವುದಿಲ್ಲ ಅಂದ್ರೆ ನಾನೇ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಬೆದರಿಕೆ ಹಾಕುತ್ತಿದ್ದ. ಸೈಕೋ ಪ್ರೇಮಿಯ ಕಾಟದಿಂದ ಬಾಲಕಿ ಬೇಸೆತ್ತಿದ್ದಳು.. ಇತ್ತ ಬಾಲಕಿಯ ಪೋಷಕರು ಯುವಕನಿಗೆ ಕಳೆದ ಎರಡು ತಿಂಗಳ ಹಿಂದೆ ಖಡಕ್ ಆಗಿ ವಾರ್ನಿಂಗ್ ಮಾಡಿದ್ದರು. ಅಲ್ಲಿಂದ ಯುವಕನ ಕಾಟ ತಪ್ಪಿತ್ತು ಎನ್ನಲಾಗಿದೆ. ಆದರೆ ಶನಿವಾರ (ಫೆ. 24) ಸಂಜೆ ನಡೆದ ಘಟನೆ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.


ಇದನ್ನೂ ಓದಿ- OMG: ಡಿಜೆ ಸೌಂಡ್‌ಗೆ ಹೃದಯಾಘಾತ; ಕುಸಿದು ಬಿದ್ದು ವ್ಯಕ್ತಿ ಸಾವು!


ಶನಿವಾರ (ಫೆ. 24)  ಸಂಜೆ ಐದು ಗಂಟೆಯ ಸುಮಾರಿಗೆ ಅಪ್ರಾಪ್ತೆ  ಪಕ್ಕದ ಮನೆಯ ಬಾಲಕನ ಬಳಿಯಿದ್ದ ಪೋನ್ ಪಡೆದುಕೊಂಡಿದ್ದಾಳೆ. ಸೀದಾ ಮನೆಗೆ ಬಂದ ಆಕೆ ಯಾರೊಂದಿಗೋ ಸ್ವಲ್ಪ ಕಾಲ ಮಾತನಾಡಿದ್ದಾಳೆ. ನಂತರ ತಾನು ಮಾತನಾಡಿದ ಕಾಲ್ ಡಿಟೈಲ್ ಅನ್ನು ಖುದ್ದು ಡಿಲೀಟ್ ಮಾಡಿದ್ದಾಳೆ. ಅಜ್ಜಿ ಮನೆಯ ಮುಂದೆ ಇರುವಾಗಲೇ ಮನೆಯ ಕದ ಹಾಕಿ ನಂತರ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾಳೆ.


ಇಲ್ಲಿ ಬಾಲಕಿ ಯಾರೊಂದಿಗೆ ಮಾತನಾಡಿದ್ಲು.. ಯಾಕೆ ತಾನು ಫೋನಾಯಿಸದ ಫೋನ್ ಕಾಲ್ ಗಳನ್ನು ಖುದ್ದು ತಾನೇ ಡಿಲೀಟ್ ಮಾಡಿದಳು ಎಂಬ ಅನುಮಾನ ಪೊಲೀಸರನ್ನು ಕಾಡುತ್ತಿದೆ. ಇಲ್ಲಿ ಕುಟುಂಬಸ್ಥರು ತಮ್ಮ ಮನೆ ಮಗಳನ್ನು ಪೀಡಿಸುತ್ತಿದ್ದ ಯುವಕನ ವಿರುದ್ಧವೇ ದೂರು ನೀಡಿದ್ದಾರೆ. ಪೋಷಕರ ದೂರಿನಂತೆ ಎಪ್.ಐ.ಆರ್ ದಾಖಲಾಗಿದೆ.. ಆದರೆ ಈ ಪ್ರಕರಣದಲ್ಲಿ ಇನ್ನರ್ ಟ್ವಿಸ್ಟ್ ಏನಾದ್ರೂ ಇರಲೇಬೇಕೆಂಬ ಕಾರಣದಿಂದ ಪೊಲೀಸರು ತನಿಖೆಯ ಆಳಕ್ಕೆ ಇಳಿದಿದ್ದಾರೆ. 


ಇದನ್ನೂ ಓದಿ- ಯುಪಿಯಲ್ಲಿ ಘೋರ ದುರಂತ: ಕೆರೆಗೆ ಟ್ರ್ಯಾಕ್ಟರ್ ಪಲ್ಟಿಯಾಗಿ ಮಕ್ಕಳು ಸೇರಿ 22 ಮಂದಿ ದುರ್ಮರಣ..!


ಬಾಲಕಿ ಫೋನ್ ಕಾಲ್ ಡಿಲೀಟ್ ಮಾಡಿದ್ರೂ, ಅದನ್ನು ರಿಕವರಿ ಮಾಡಬಹುದಾಗಿರುವುದರಿಂದ ಇಂದಲ್ಲಾ ನಾಳೆ ಪ್ರಕರಣದಲ್ಲಿ ಸತ್ಯಾಸತ್ಯತೆ ಬಯಲಿಗೆ ಬರಲಿದೆ. ಬಾಲಕಿ ಸಾವಿಗೆ ಕಾರಣರಾದವರಿಗೆ ಕಠಿಣ ಶಿಕ್ಷೆಯಾಗಬೇಕೆಂದು ಕುಟುಂಬಸ್ಥರು ಒತ್ತಾಯಿಸಿದ್ದಾರೆ. ಶಿವಮೊಗ್ಗ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.