ಕಾರು‌-ಜಮೀನಿನ ವಿಚಾರಕ್ಕೆ ಅಣ್ತಮ್ಮಂದಿರ ನಡುವೆ ಗಲಾಟೆ: ಕೊಲೆಯಲ್ಲಿ ಅಂತ್ಯ!

Bangalore Rural District Crime News: ಮದುವೆಯಾದ ನಂತರ ಅಣ್ಣ-ತಮ್ಮಂದಿರು ಬೇರೆ ಬೇರೆಯಾಗಿದ್ದರು. ಕಾರನ್ನು ಜಗದೀಶ್ ಓಡಿಸುತ್ತಿದ್ದ ಹಿನ್ನೆಲೆ ತನಗೆ ಕಾರು ಕೊಡುವಂತೆ ವೆಂಕಟೇಶ್ ಕೇಳಿದ್ದ. ಕಾರು ಕೊಡಲ್ಲ ಅಂದಿದಕ್ಕೆ ಅಣ್ಣ-ತಮ್ಮನ ನಡುವೆ ಕಿರಿಕ್ ಉಂಟಾಗಿತ್ತು.

Written by - Puttaraj K Alur | Last Updated : Feb 23, 2024, 04:29 PM IST
  • ಕಾರು‌-ಜಮೀನಿನ ವಿಚಾರಕ್ಕೆ ಅಣ್ತಮ್ಮಂದಿರ ನಡುವೆ ಗಲಾಟೆ ಕೊಲೆಯಲ್ಲಿ ಅಂತ್ಯ
  • ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಗೋಖರೆ ಗ್ರಾಮದಲ್ಲಿ ಘಟನೆ
  • ಗಲಾಟೆ ವೇಳೆ‌ ಪೆಟ್ರೋಲ್ ಸುರಿದು ತಮ್ಮನ ಕೊಲೆ ಮಾಡಿದ ಅಣ್ಣ
ಕಾರು‌-ಜಮೀನಿನ ವಿಚಾರಕ್ಕೆ ಅಣ್ತಮ್ಮಂದಿರ ನಡುವೆ ಗಲಾಟೆ: ಕೊಲೆಯಲ್ಲಿ ಅಂತ್ಯ!  title=
ತಮ್ಮನ ಕೊಲೆ ಮಾಡಿದ ಅಣ್ಣ 

ದೇವನಹಳ್ಳಿ: ಕಾರು‌-ಜಮೀನಿನ ವಿಚಾರಕ್ಕೆ ಅಣ್ತಮ್ಮಂದಿರ ನಡುವೆ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಗೋಖರೆ ಗ್ರಾಮದಲ್ಲಿ ನಡೆದಿದೆ.ಗಲಾಟೆ ವೇಳೆ‌ ಪೆಟ್ರೋಲ್ ಸುರಿದು ಅಣ್ಣನಿಂದ ತಮ್ಮನ ಕೊಲೆಯಾಗಿದೆ. ಜಗದೀಶ್ (36) ಕೊಲೆಯಾಗಿದ್ದು, ಈತನ ಅಣ್ಣ ವೆಂಕಟೇಶ್‌ ಪೆಟ್ರೋಲ್ ಸುರಿದು ಕೊಲೆ ಮಾಡಿದ್ದಾನೆ.

ಕಳೆದ ಶನಿವಾರ ಕಾರು-ಜಮೀನು ವಿಚಾರಕ್ಕೆ ಅಣ್ತಮ್ಮಂದಿರ ನಡುವೆ ಜಗಳ ನಡೆದಿತ್ತು. ಒಟ್ಟು ಕುಟುಂಬವಿದ್ದಾಗ ತಮ್ಮನ ಹೆಸರಲ್ಲಿ ಕಾರು ಖರೀದಿ ಮಾಡಲಾಗಿತ್ತು. ಆದರೆ ಮದುವೆಯಾದ ನಂತರ ಅಣ್ಣ-ತಮ್ಮಂದಿರು ಬೇರೆ ಬೇರೆಯಾಗಿದ್ದರು. ಕಾರನ್ನು ಜಗದೀಶ್ ಓಡಿಸುತ್ತಿದ್ದ ಹಿನ್ನೆಲೆ ತನಗೆ ಕಾರು ಕೊಡುವಂತೆ ವೆಂಕಟೇಶ್ ಕೇಳಿದ್ದ. ಕಾರು ಕೊಡಲ್ಲ ಅಂದಿದಕ್ಕೆ ಅಣ್ಣ-ತಮ್ಮನ ನಡುವೆ ಕಿರಿಕ್ ಉಂಟಾಗಿತ್ತು.

ಇದನ್ನೂ ಓದಿ: ಕೇರಳದ ವೈನಾಡಿನ ಆನೆ ದಾಳಿ ಪ್ರಕರಣ, ಕುಟುಂಬಸ್ತರ ಭೇಟಿ ಮಾಡಿದ ಸಚಿವರು

ಕಾರು ತೆಗೆಯಲು ಬಿಡಲ್ಲ ಅಂತಾ ವೆಂಕಟೇಶ್ ಪೆಟ್ರೋಲ್ ಕೈಲಿಡಿದು ನಿಂತಿದ್ದ. ಈ ವೇಳೆ ಕೈನಲ್ಲಿದ್ದ ಪೆಟ್ರೋಲ್ ಜಗದೀಶನ ಮೇಲೆ ಹಾಕಿದ ಪರಿಣಾಮ ಬೆಂಕಿ ಹೊತ್ತಿಕೊಂಡು ಆತ ಗಾಯಗೊಂಡಿದ್ದ.  ಕಳೆದ ಶನಿವಾರವೇ ಈ ಘಟನೆ ನಡೆದಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಜಗದೀಶ್‌ನನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕಳೆದ ಬುಧವಾರ ರಾತ್ರಿ ಆತ ಆಸ್ವತ್ರೆಯಲ್ಲಿ ಸಾವನ್ನಪ್ಪಿದ್ದಾನೆ. 

ಜಮೀನು ಭಾಗ ಆಗುವವರೆಗೂ ಅಂತ್ಯ ಸಂಸ್ಕಾರ ಮಾಡಲ್ಲ‌ವೆಂದು ಕುಟುಂಬಸ್ಥರ ಪಟ್ಟು ಹಿಡಿದಿದ್ದಾರೆ. ಕುಟುಂಬದ ಹೋರಾಟಕ್ಕೆ ಇಡೀ ಗ್ರಾಮಸ್ಥರು ಬೆಂಬಲ ವ್ಯಕ್ತಪಡಿಸಿದ್ದಾರೆ. ಯಾವುದೇ ಕಾರಣಕ್ಕೂ ಮಗನಿಗೆ ಆಸ್ತಿಯಲ್ಲಿ ಭಾಗ ಕೊಡಲ್ಲವೆಂದು ತಾಯಿ ಕೃಷ್ಣಮ್ಮ ಮತ್ತು ಮಕ್ಕಳು ಎನ್ನುತ್ತಿದ್ದಾರೆ. ದೇವನಹಳ್ಳಿ ಪೊಲೀಸರು ಆರೋಪಿ ವೆಂಕಟೇಶ್‌ನನ್ನು ಬಂಧಿಸಿದ್ದು, ಈ ಬಗ್ಗೆ ದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ‌ ದಾಖಲಾಗಿದೆ.

ಇದನ್ನೂ ಓದಿ: ಲೋಕಸಭೆ ಹೊತ್ತಿನಲ್ಲಿ ತುಮಕೂರಿನಲ್ಲಿ ಬಿಜೆಪಿಗೆ ಬಿಗ್‌ ಶಾಕ್‌

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News