ಬೆಂಗಳೂರು: ಸಿಗರೇಟ್ ಕೊಟ್ಟಿಲ್ಲವೆಂಬ ಕಾರಣಕ್ಕೆ ಕಿಡಿಗೇಡಿಗಳು ವ್ಯಕ್ತಿಯೊಬ್ಬನ ಮೇಲೆ ರೌಡಿಗಳ ರೀತಿ ಹಲ್ಲೆ ನಡೆಸಿ ಆತನ ಮೂಗನ್ನೇ ಮುರಿದಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಸೂಲಿಬೆಲೆಯಲ್ಲಿ ನಡೆದಿದೆ.


COMMERCIAL BREAK
SCROLL TO CONTINUE READING

ಪ್ರದೀಪ್ ಹಲ್ಲೆಗೊಳಗಾಗಿ ಮುಗು ಮುರಿಸಿಕೊಂಡ ಯುವಕ. ಸೂಲಿಬೆಲೆಯ ಹಾಲಿನಂಗಡಿಯ ಮಾಲೀಕ ಪ್ರದೀಪ್ ಕಳೆದ ಅಕ್ಟೋಬರ್ 16ರಂದು ಹೊಸಕೋಟೆ ತಾಲೂಕು ಸೂಲಿಬೆಲೆ ಸರ್ಕಾರಿ ಆಸ್ಪತ್ರೆಯ ಅಂಗಡಿ ಬಳಿ ರಾತ್ರಿ 8 ಗಂಟೆಗೆ ಹಣ ಪಡೆಯಲು ಬಂದಿದ್ದ. ಈ ವೇಳೆ ಸಿಗರೇಟ್ ವಿಚಾರಕ್ಕೆ ಕಿಡಿಗೇಡಿಗಳು ಇವರ ಮೇಲೆ ಅಟ್ಯಾಕ್ ಮಾಡಿದ್ದಾರೆ.


ಇದನ್ನೂ ಓದಿ: Crime News: ಕೇರ್ ಟೇಕರ್ ಆಗಿ ಮನೆ ದೋಚಿದ್ದ ನಾಜೂಕು ನಾರಿ ಕೊನೆಗೂ ಅಂದರ್..!


ಸೂಲಿಬೆಲೆ ಪಕ್ಕದ ವಳಗೆರೆಪುರದ ಅಭಿಲಾಷ್ ಮತ್ತು ಮುರಳಿ ಇಬ್ಬರು ಸೇರಿಕೊಂಡು ಪ್ರದೀಪ್ ಮೇಲೆ ಹಲ್ಲೆ ಮಾಡಿದ್ದರು. ಮನಬಂದಂತೆ ಪ್ರದೀಪ್‍ಗೆ ಥಳಿಸಿ ಇಬ್ಬರೂ ಆತನ ಮೂಗು ಮುರಿದು ಕೊಲೆ ಬೆದರಿಕೆ ಹಾಕಿ ಎಸ್ಕೇಪ್ ಆಗಿದ್ದಾರೆ. ಇದೀಗ ಮೂಗು ಮುರಿಸಿಕೊಂಡ ಪ್ರದೀಪ್ ತನಗೆ ಆಗಿರುವ ಅನ್ಯಾಯದ ವಿರುದ್ಧ ಸೂಲಿಬೆಲೆ ಪೊಲೀಸ್ ಠಾಣೆಯಲ್ಲಿ FIR ದಾಖಲಿಸಿದ್ದಾನೆ.


ನನ್ನ ಮೇಲೆ ಹಲ್ಲೆ ನಡೆಸಿರುವ ಆರೋಪಿಗಳನ್ನು ಬಂಧಿಸಿ ಕಠಿಣ ಶಿಕ್ಷೆ ಕೊಡಿಸಬೇಕೆಂದು ಪ್ರದೀಪ್ ಪೊಲೀಸರ ಬಳಿ ಮನವಿ ಮಾಡಿಕೊಂಡಿದ್ದಾನೆ. ಈ ಬಗ್ಗೆ ತನಿಖೆ ಕೈಗೊಂಡಿರುವ ಪೊಲೀಸರು ಆರೋಪಿಗಳ ಬಂಧನಕ್ಕೆ ಬಲೆ ಬಿಸಿದ್ದಾರೆ. ಪರಾರಿಯಾಗಿರುವ ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.


ಇದನ್ನೂ ಓದಿ: ಕೋಮು ಸೌಹಾರ್ದತೆಗೆ ಧಕ್ಕೆ ತರುವ ಸಾಧ್ಯತೆ ಹಿನ್ನೆಲೆ ರಾಜ್ಯಾದ್ಯಂತ ದಾಳಿ: ಎಡಿಜಿಪಿ ಅಲೋಕ್ ಕುಮಾರ್


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.