Rishabh Pant Accident News : ಇಂದು ಮುಂಜಾನೆ ದೆಹಲಿ-ಡೆಹ್ರಾಡೂನ್ ಹೆದ್ದಾರಿಯಲ್ಲಿ ಕ್ರಿಕೆಟರ್ ರಿಷಬ್ ಪಂತ್ ಬಿಎಂಡಬ್ಲ್ಯು ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಭೀಕರ ಅಪಘಾತವಾಗಿದೆ, ಆದರೆ,  ಅವರು ರಿಷಬ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪಂತ್ ಸ್ವತಃ ಕಾರು ಚಾಹಲಾಯಿಸಿಕೊಂಡು ರೂರ್ಕಿಯಲ್ಲಿರುವ ತಮ್ಮ ಮನೆಗೆ ಹೋಗುತ್ತಿದ್ದರು. ಈ ವೇಳೆ ಅಪಘಾತ ಸಂಭವಿಸಿದೆ. ಅವರ ತಲೆ, ಬೆನ್ನು ಮತ್ತು ಕಾಲುಗಳಿಗೆ ಗಾಯಗಳಾಗಿದ್ದು, ಅವರ ಸ್ಥಿತಿ ಸ್ಥಿರವಾಗಿದೆ. ಪಂತ್ ಅವರನ್ನು ಮೊದಲು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತು, ನಂತರ ಅವರನ್ನು ಡೆಹ್ರಾಡೂನ್‌ನ ಮ್ಯಾಕ್ಸ್ ಆಸ್ಪತ್ರೆಗೆ ಅಸ್ತಾಂತರಿಸಲಾಗಿದೆ.


COMMERCIAL BREAK
SCROLL TO CONTINUE READING

ಈ ಬಗ್ಗೆ ಮಾಹಿತಿ ಹರಿದ್ವಾರದ ಎಸ್‌ಎಸ್‌ಪಿ ಅಜಯ್ ಸಿಂಗ್, 'ಬೆಳಿಗ್ಗೆ 5:22ಕ್ಕೆ ಈ ಅಪಘಾತ ಸಂಭವಿಸಿದೆ. ರಿಷಬ್ ಪಂತ್ ನ ನಿದ್ದೆ ಗಣ್ಣಲ್ಲಿ ಇದ್ದ ಕರಣ ಈ ಅವಘಡ ಸಂಭವಿಸಿದೆ ಎಂದು ಪೊಲೀಸರ ತನಿಖೆಯಲ್ಲಿ ಪತ್ತೆಯಾಗಿದೆ. ಘಟನೆಯ ಮಾಹಿತಿ ಪಡೆದ ನಂತರ 10:00 ನಿಮಿಷಗಳಲ್ಲಿ ಪೊಲೀಸರು ಸ್ಥಳಕ್ಕೆ ತಲುಪಿದರು. ಇದಕ್ಕೂ ಮೊದಲು ಹರಿಯಾಣದ ಬಸ್ ಡ್ರೈವರ್ ಒಬ್ಬರು ರಿಷಬ್ ಪಂತ್‌ಗೆ ಸಹಾಯ ಮಾಡಿದರು.


ಇದನ್ನೂ ಓದಿ : Rishabh Pant Accident Video : ಭಯಾನಕವಾಗಿದೆ ರಿಷಬ್‌ ಪಂತ್‌ ಕಾರ್‌ ಆಕ್ಸಿಡೆಂಟ್‌ CCTV ವಿಡಿಯೋ..!


ಬಸ್ ಚಾಲಕ​ ಸುಶೀಲ್ ಕುಮಾರ್ ಹೇಳಿದ್ದೇನು?


ಬಸ್ ಚಾಲಕ ಸುಶೀಲ್ ಕುಮಾರ್ ಎಂಬುವವರು ಸುದ್ದಿವಾಹಿನಿಯೊಂದಕ್ಕೆ ಈ ಬಗ್ಗೆ ಮಾಹಿತಿ ನೀಡಿದ್ದು, ನಾನು ನೋಡಿದಾಗ ಅವರು ರಕಾಟದ ಮೋಡವಿನಲ್ಲಿ ಮೇಲೆ ಮಲಗಿದ್ದರು. ಅವರನ್ನು ನೋಡಿದಾಗ ನಾನು ಬದುಕುವುದಿಲ್ಲ ಎಂದು ಭಾವಿಸಿದೆ. ಕಾರಿನಲ್ಲಿ ಬೆಂಕಿ ಹತ್ತಿ ಹೊರಬರುತ್ತಿದ್ದವು. ಅವನು (ಪಂತ್) ಬೆಂಕಿ ಪಕ್ಕದಲ್ಲಿ ಮಲಗಿದ್ದರು. ನಾವು ಅವರನ್ನು ಎತ್ತಿಕೊಂಡು ಕಾರಿನಿಂದ ಕರೆದುಕೊಂಡು ಹೋದೆವು. ನಾನು ಅವರನ್ನುಕೇಳಿದೆ - ಕಾರಿನೊಳಗೆ ಇನ್ನೊಬ್ಬರು ಯಾರಾದರೂ ಇದ್ದಾರೆ ಎಂದು. ಆಗ ಅವರು, ನಾನು ಒಬ್ಬನೇ ಇದ್ದಾನೆ ಎಂದು ಹೇಳಿದರು. 


ಸುಶೀಲ್ ಕುಮಾರ್ ಹೇಳಿರುವ ಪ್ರಕಾರ, ಗಾಯಾಳು ಪಂತ್ ಅವರೇ ಕ್ರಿಕೆಟಿಗ ರಿಷಬ್ ಪಂತ್ ಎಂದು ಹೇಳಿದ್ದಾರೆ. ಪಂತ್ ಅವರ ಮೈಯಲ್ಲಿ ಬಟ್ಟೆ ಇರಲಿಲ್ಲ, ಆದ್ದರಿಂದ ಅವರನ್ನು ತಮ್ಮ  ಬಳಿ ಇದ್ದ ತಡಪಾಲ್ ನಲ್ಲಿ ಸುತ್ತಿಕೊಂಡು ಹೋದೆವು ಎಂದು ತಿಳಿಸಿದ್ದಾರೆ.


ಸುಶೀಲ್ ಮತ್ತು ತನ್ನ ಬಸ್ ಕಂಡಕ್ಟರ್ 15-20 ನಿಮಿಷಗಳಲ್ಲಿ ಆಂಬ್ಯುಲೆನ್ಸ್‌ಗೆ ಕರೆ ಮಾಡಿ ಕೆರಸಿದ್ದಾರೆ. ಪಂತ್ ರಕ್ತದಲ್ಲಿ ಮುಳುಗಿದ್ದರು, ಕುಂಟುತ್ತಾ ನಡೆಯುತ್ತಿದ್ದರು ಎಂದು ಅವರು ಹೇಳಿದರು. ಅವರ ಪ್ರಕಾರ, ವೀಡಿಯೊ ಮಾಡುವ ಬದಲು, ವ್ಯಕ್ತಿಯ ಜೀವವನ್ನು ಉಳಿಸುವುದು ಹೆಚ್ಚು ಮುಖ್ಯ ಎಂದು ಈ ಕೆಲಸ ಮಾಡಿದ್ದೇನೆ ಎಂದು ಹೇಳಿದ್ದಾರೆ.


ಹರಿಯಾಣ ರೋಡ್‌ವೇಸ್ ಬಸ್ಸಿನ ಚಾಲಕ ಮತ್ತು ಕಂಡಕ್ಟರ್‌ನಿಂದಾಗಿ ಕ್ರಿಕೆಟಿಗ ರಿಷಬ್ ಪಂತ್ ಅವರ ಪ್ರಾಣ ಉಳಿದಿದೆ. ಅಪಘಾತ ಸಂಭವಿಸಿದ ಸಮಯದಲ್ಲಿ, ಚಾಲಕ ಸುಶೀಲ್ ಕುಮಾರ್ ಮತ್ತು ಹಿಂದೆ ಓಡುತ್ತಿದ್ದ ಹರಿಯಾಣ ರೋಡ್‌ವೇಸ್ ಬಸ್‌ನ ಕಂಡಕ್ಟರ್ ಕಾರು ಅಪಘಾತವನ್ನು ನೋಡಿದ ತಕ್ಷಣ 112 ಸಂಖ್ಯೆಗೆ ಕರೆ ಮಾಡಿದರು. ಇದು ಅವನಿಗೆ ತಕ್ಷಣವೇ ಸಹಾಯ ಮಾಡಿ, ಅವರ ಪ್ರಾಣ ರಕ್ಷೆಣೆ ಮಾಡಿದ್ದಾರೆ.


ಇದನ್ನೂ ಓದಿ : Rishabh Pant : ರಿಷಬ್‌ ಕಾರು ಅಪಘಾತಕ್ಕೆ ಕಾರಣ.. ಸುಟ್ಟು ಕರಕಲಾಗಬೇಕಿದ್ದ ಪಂತ್‌ ಉಳಿದಿದ್ದು ಹೇಗೆ..!?


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.