Shraddha Murder Case: ಹೃದಯ ವಿದ್ರಾವಕ ಶ್ರದ್ಧಾ ಹತ್ಯೆ ಪ್ರಕರಣದಲ್ಲಿ ದಿನೆ ದಿನೇ ಹೊಸ ಹೊಸ ಸಂಗತಿಗಳು ಬೆಳಕಿಗೆ ಬರುತ್ತಿವೆ. ಅಫ್ತಾಬ್‌ನ ಬಂಧನ ಅವಧಿ ಇಂದಿಗೆ ಮುಕ್ತಾಯವಾಗಿದ್ದು, ಪೊಲೀಸರು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ. ಆತನ ನಾರ್ಕೋ ಟೆಸ್ಟ್ ಮಾಡಲಾಗುವುದು, ನಂತರ ಕೊಲೆಯ ಬಗ್ಗೆ ಹಲವು ಬಹಿರಂಗವಾಗಬಹುದು. ಇದೀಗ ಹೊಸ ಮಾಹಿತಿಯ ಪ್ರಕಾರ, ಆರೋಪಿ ಅಫ್ತಾಬ್ ಅಮೀನ್ ಪೂನಾವಾಲಾ ಕೊಲೆಯಾದ ನಂತರವೂ ಗೆಳತಿಯ ಮುಖವನ್ನು ನೋಡುತ್ತಿದ್ದನಂತೆ. ಏಕೆಂದರೆ ಅವನು ಶ್ರದ್ಧಾಳ ಕತ್ತರಿಸಿದ ತಲೆಯನ್ನು ಫ್ರಿಡ್ಜ್‌ನಲ್ಲಿ ಇಟ್ಟಿದ್ದನು. ಮೂಲಗಳಿಂದ ಬಂದಿರುವ ಮಾಹಿತಿ ಪ್ರಕಾರ ಶ್ರದ್ಧಾಳ ದೇಹವನ್ನು ತುಂಡು ತುಂಡಾಗಿ ಕತ್ತರಿಸಿದ ಕೊಠಡಿಯಲ್ಲೇ ಅಫ್ತಾಬ್ ಮಲಗುತ್ತಿದ್ದನಂತೆ. 


COMMERCIAL BREAK
SCROLL TO CONTINUE READING

ಮೂಲಗಳಿಂದ ಬಂದಿರುವ ಮಾಹಿತಿ ಪ್ರಕಾರ ಅಫ್ತಾಬ್ ನ ಶ್ರದ್ಧಾ ಹೊರತಾಗಿ ಹಲವು ಮಹಿಳೆಯರ ಜೊತೆ ಸಂಬಂಧದಲ್ಲಿದ್ದ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದೆ. ಶ್ರದ್ಧಾ ಹತ್ಯೆಯ ನಂತರ ಅಫ್ತಾಬ್ ತನ್ನ ಹಳೆಯ ಮೊಬೈಲ್ ಫೋನ್ ಅನ್ನು ಆನ್‌ಲೈನ್ ಕಂಪನಿ ಒಎಲ್‌ಎಕ್ಸ್‌ನಲ್ಲಿ ಮಾರಾಟ ಕೂಡ ಮಾಡಿದ್ದ. ಈ ಪ್ರಕರಣದಲ್ಲಿ ಅಫ್ತಾಬ್‌ಗೆ ಶಿಕ್ಷೆಯಾಗುವಂತೆ ಪೊಲೀಸರು ಸಾಕ್ಷ್ಯ ಸಂಗ್ರಹಿಸುವಲ್ಲಿ ನಿರತರಾಗಿದ್ದಾರೆ. ಕೊಲೆಯ ಸಮಯದಲ್ಲಿ ಶ್ರದ್ಧಾ ಗರ್ಭಿಣಿಯಾಗಿದ್ದಳೇ ಎಂಬ ಪ್ರಶ್ನೆ ಕೂಡ ಪೊಲೀಸರಲ್ಲಿ ಮೂಡಿದೆಯಂತೆ. ಆದರೆ ಇದು ಪೊಲೀಸರಿಗೆ ಒಗಟಾಗಿ ಉಳಿದಿದೆ.


ಇದನ್ನೂ ಓದಿ : ಶ್ರದ್ಧಾ ಕೊಲೆಯ ಬಳಿಕ ಬೇರೆ ಹುಡುಗಿ ಜೊತೆ ಕಿರಾತಕ ಅಫ್ತಾಬ್ ಸಂಬಂಧ!?


ಶ್ರದ್ಧಾ ಮತ್ತು ಅಫ್ತಾಬ್ ನಡುವೆ ಯಾವ ಕಾರಣಗಳಿಂದ ಜಗಳವಾಗಿದೆ ಎಂಬುದು ಇನ್ನೂ ಬಹಿರಂಗವಾಗಿಲ್ಲ. ಕೊಲೆಗೆ ಮೊದಲೇ ಸಂಚು ರೂಪಿಸಿದ್ದ ಈ ರಾಕ್ಷಸ ಅಫ್ತಾಬ್ ಅಮೀನ್ ಪೂನಾವಾಲಾ, ಶ್ರದ್ಧಾ ಕತೆ ಮುಗಿಸಲೆಂದೇ ದೆಹಲಿಯ ಛತ್ತರ್‌ಪುರ ಪ್ರದೇಶದಲ್ಲಿ ಬಾಡಿಗೆಗೆ ಮನೆಯೊಂದನ್ನು ತೆಗೆದುಕೊಂಡಿದ್ದನಾ ಎಂಬ ಬಗ್ಗೆ ದೆಹಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.


ಶ್ರದ್ಧಾಳನ್ನು ಕೊಂದ ಬಳಿಕ ಆಕೆಯ ಮೃತದೇಹವನ್ನು ಬಾತ್ ರೂಂನಲ್ಲಿ ಇಟ್ಟಿದ್ದ. ನಂತರ ತಡರಾತ್ರಿ ಕಂಠಪೂರ್ತಿ ಕುಡಿದು ನಿದ್ದೆಗೆ ಜಾರಿದ. ಬೆಳಗ್ಗೆ ಎದ್ದ ನಂತರ ಮೊದಲು ಖರೀದಿಸಿದ್ದು ಗರಗಸ ಮತ್ತು ಸ್ನಾನಗೃಹದಲ್ಲಿದ್ದ ಮೃತದೇಹದಿಂದ ಮೊದಲು ಕತ್ತರಿಸಿದ್ದು, ಶ್ರದ್ಧಾಳ ತಲೆಯನ್ನು ನಂತರ ಶವವನ್ನು ಸರದಿಯಲ್ಲಿ 35 ತುಂಡುಗಳಾಗಿ ಕತ್ತರಿಸಿದ್ದಾನಂತೆ. ಹೀಗೆ ಕತ್ತರಿಸಿದ ಬಳಿಕ ಬಾತ್‌ರೂಂ ನಲ್ಲಿ ಆ ದೇಹದ ತುಂಡುಗಳನ್ನು ನೀರಿನಿಂದ ತೊಳೆದಿದ್ದಾನೆ. ಈ ವೇಳೆ ನೀರಿನ ತೊಟ್ಟಿಯಲ್ಲಿನ ಸಂಪೂರ್ಣ ನೀರು ಮುಗಿದಿತ್ತಂತೆ. ಆಗ ಬಟ್ಟೆ ಒಗೆಯುತ್ತಿದ್ದೆ ಅದಕ್ಕೆ ನೀರು ಖಾಲಿಯಾಗಿದೆ ಎಂದು ಅಕ್ಕಪಕ್ಕದವರಿಗೆ ಹೇಳಿದ್ದರಂತೆ.


10 ಗಂಟೆಗಳ ಕಾಲ ನಿರಂತರವಾಗಿ ಮೃತದೇಹವನ್ನು ಗರಗಸದಿಂದ ಕತ್ತರಿಸಿ ತುಂಡುಗಳನ್ನು ತೊಳೆದು ಪಾಲಿಥಿನ್‌ನಲ್ಲಿ ತುಂಬಿದ್ದಾನಂತೆ. ಆ ನಂತರ ಆನ್‌ಲೈನ್‌ನಲ್ಲಿ ಆಹಾರವನ್ನು ಆರ್ಡರ್ ಮಾಡಿ, ಬಿಯರ್ ಆರ್ಡರ್ ಮಾಡಿದ್ದನಂತೆ. ಊಟ ಮಾಡುವಾಗ ವೆಬ್ ಸೀರೀಸ್ ನೋಡಿದ್ದ ಆತ ಬಿಯರ್ ಕುಡಿದು ನಿದ್ದೆಗೆ ಜಾರಿದ.


ಮೇ 18ರಂದು ಮನೆಯ ಖರ್ಚು ಯಾರು ಮಾಡಬೇಕೆಂಬ ವಿಚಾರದಲ್ಲಿ ಇಬ್ಬರ ನಡುವೆ ಜಗಳವಾಗಿತ್ತಂತೆ. ಈ ವಿಚಾರವಾಗಿ ಅಫ್ತಾಬ್ ಶ್ರದ್ಧಾಳನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದ ಎಂದು ಹೇಳಲಾಗುತ್ತಿದೆ.


ಪೊಲೀಸ್ ಮೂಲಗಳ ಪ್ರಕಾರ, ಕೊಲೆಯಾದ ನಂತರ ಅಫ್ತಾಬ್ ಸಂಜೆ 6 - 7 ಗಂಟೆ ಸುಮಾರಿಗೆ ಮನೆಗೆ ಬರುತ್ತಿದ್ದನು ಮತ್ತು ತಡರಾತ್ರಿಯವರೆಗೆ ಕಾಯುತ್ತಿದ್ದನು. ರಾತ್ರಿ ಎರಡು ಗಂಟೆಯ ನಂತರ ಫ್ರಿಡ್ಜ್‌ನಲ್ಲಿ ಇಟ್ಟಿದ್ದ ಮೃತದೇಹದ ತುಂಡುಗಳನ್ನು ವಿಲೇವಾರಿ ಮಾಡಲು ಹೋಗುತ್ತಿದ್ದ. ಮೃತದೇಹದ ತುಂಡುಗಳನ್ನು ಕಪ್ಪು ಪಾಲಿಥೀನ್‌ ಕವರ್‌ನಲ್ಲಿ ಸುತ್ತಿ ಹಾಕುತ್ತಿದ್ದ ಎಂದು ಮೂಲಗಳು ತಿಳಿಸಿವೆ.  


ಇದನ್ನೂ ಓದಿ : Shradha Murder Case: ಈ ವೆಬ್ ಸಿರೀಸ್‌ನಿಂದ ಸಿಕ್ಕಿತ್ತಂತೆ ಕೊಲೆ ಐಡಿಯಾ! 


ಅಫ್ತಾಬ್ ಪ್ರತಿದಿನ ಅದೇ ಕೋಣೆಯಲ್ಲಿ ಮಲಗುತ್ತಿದ್ದನು ಎಂದು ಮೂಲಗಳು ತಿಳಿಸಿವೆ. ಶ್ರದ್ಧಾಳ ಕತ್ತರಿಸಿದ ತಲೆಯನ್ನು ಫ್ರಿಡ್ಜ್ ನಲ್ಲಿಟ್ಟಿದ್ದ ಕಾರಣ, ಕೊಲೆಯಾದ ನಂತರವೂ ಅಫ್ತಾಬ್ ಗೆಳತಿಯ ಮುಖವನ್ನೇ ನೋಡುತ್ತಿದ್ದ. ಮೃತದೇಹಗಳನ್ನು ವಿಲೇವಾರಿ ಮಾಡಿದ ಬಳಿಕ ಫ್ರಿಡ್ಜ್ ಕೂಡ ಸ್ವಚ್ಛಗೊಳಿಸಿದ್ದ.


ಈ ಬಗ್ಗೆ ಶ್ರದ್ಧಾ ತಂದೆ, "ನನಗೆ ಮೊದಲಿನಿಂದಲೂ ಹುಡುಗ ಇಷ್ಟವಿರಲಿಲ್ಲ. ಶ್ರದ್ಧಾ ಕೂಡ ಅವನಿಂದ ದೂರವಿರಬೇಕಿತ್ತು. ಆದರೆ ಮಗಳು ನಮ್ಮಿಂದ ದೂರ ಹೋದಳು. ಶ್ರದ್ಧಾ ಕುಟುಂಬದೊಂದಿಗೆ ಸಂಬಂಧವನ್ನು ಮುರಿದು ಅಫ್ತಾಬ್ ಜೊತೆ ವಾಸಿಸಲು ಬಂದಿದ್ದಳು"  ಹೇಳಿದ್ದಾರೆ.


ಮೇ ತಿಂಗಳಿನಲ್ಲಿ ನಡೆದ ಈ ಕೊಲೆಯು ಬಹಳ ದಿನಗಳ ನಂತರ ಬಹಿರಂಗಗೊಂಡಿದ್ದು, ಆರೋಪಿಯು ಕ್ರೂರವಾಗಿ ಕೊಲೆಯನ್ನು ನಡೆಸಿ ಸಾಕ್ಷ್ಯ ನಾಶಪಡಿಸಲು ಶತಪ್ರಯತ್ನ ನಡೆಸಿದ್ದಾನೆ. ಈ ಕಾರಣದಿಂದಲೇ ಕೊಲೆಯ ರಹಸ್ಯವನ್ನು ಭೇದಿಸುವುದು ಪೊಲೀಸರಿಗೆ ಒಂದು ರೀತಿಯ ಟಾಸ್ಕ್‌ ಆಗಿದ್ದು, ಬಗೆದಷ್ಟು ಈ ಪಾಪಿಯ ಕುಕೃತ್ಯಗಳು ಹೊರ ಬರುತ್ತಲೇ ಇವೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.