Shradha Murder Case: ಶ್ರದ್ಧಾ ಕೊಲೆಯ ಬಳಿಕ ಬೇರೆ ಹುಡುಗಿ ಜೊತೆ ಕಿರಾತಕ ಅಫ್ತಾಬ್ ಸಂಬಂಧ!?

Shradha Murder Case: ಶ್ರದ್ಧಾ ಹತ್ಯೆಯ ಆರೋಪಿ ಅಫ್ತಾಬ್‌ಗೆ ಸಂಬಂಧಿಸಿದ ಅನೇಕ ವಿಚಾರಗಳು ಬಯಲಾಗುತ್ತಿವೆ. ಈ ಪಾಪಿ ಮಾಡಿದ ಕೃತ್ಯಕ್ಕೆ ಇಡೀ ದೇಶವೇ ಬೆಚ್ಚಿ ಬಿದ್ದಿದೆ. ಪ್ರೇಯಸಿಯನ್ನೇ ಬರ್ಬರವಾಗಿ ಹತ್ಯೆಗೈದ ಬಳಿಕ ಈ ರಾಕ್ಷಸ ಆರಾಮವಾಗಿ ಜೀವನ ನಡೆಸುತ್ತಿದ್ದ. ಏನೂ ಆಗಿಲ್ಲ ಎಂಬಂತೆ ವರ್ತಿಸುತ್ತಿದ್ದ. 

Written by - Chetana Devarmani | Last Updated : Nov 15, 2022, 01:57 PM IST
  • ಶ್ರದ್ಧಾ ಹತ್ಯೆಯ ಆರೋಪಿ ಅಫ್ತಾಬ್‌
  • ಬೇರೆ ಹುಡುಗಿ ಜೊತೆ ಕಿರಾತಕ ಅಫ್ತಾಬ್ ಸಂಬಂಧ!?
  • ಈ ಪಾಪಿ ಮಾಡಿದ ಕೃತ್ಯಕ್ಕೆ ಇಡೀ ದೇಶವೇ ಬೆಚ್ಚಿ ಬಿದ್ದಿದೆ
Shradha Murder Case: ಶ್ರದ್ಧಾ ಕೊಲೆಯ ಬಳಿಕ ಬೇರೆ ಹುಡುಗಿ ಜೊತೆ ಕಿರಾತಕ ಅಫ್ತಾಬ್ ಸಂಬಂಧ!?  title=
ಅಫ್ತಾಬ್‌

Shradha Murder Case: ಶ್ರದ್ಧಾ ಹತ್ಯೆಯ ಆರೋಪಿ ಅಫ್ತಾಬ್‌ಗೆ ಸಂಬಂಧಿಸಿದ ಅನೇಕ ವಿಚಾರಗಳು ಬಯಲಾಗುತ್ತಿವೆ. ಈ ಪಾಪಿ ಮಾಡಿದ ಕೃತ್ಯಕ್ಕೆ ಇಡೀ ದೇಶವೇ ಬೆಚ್ಚಿ ಬಿದ್ದಿದೆ. ಪ್ರೇಯಸಿಯನ್ನೇ ಬರ್ಬರವಾಗಿ ಹತ್ಯೆಗೈದ ಬಳಿಕ ಈ ರಾಕ್ಷಸ ಆರಾಮವಾಗಿ ಜೀವನ ನಡೆಸುತ್ತಿದ್ದ. ಏನೂ ಆಗಿಲ್ಲ ಎಂಬಂತೆ ವರ್ತಿಸುತ್ತಿದ್ದ. ಪೊಲೀಸ್ ತನಿಖೆಯಲ್ಲಿ ಅಫ್ತಾಬ್ ತಾನು ಶ್ರದ್ಧಾಳನ್ನು ಕೊಂದಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಅಫ್ತಾಬ್ ಮೊದಲಿನಿಂದಲೂ ಪೊಲೀಸರೊಂದಿಗೆ ಇಂಗ್ಲಿಷ್ ನಲ್ಲಿಯೇ ಮಾತನಾಡುತ್ತಿದ್ದ. ಪೊಲೀಸರ ಕಟ್ಟುನಿಟ್ಟಿನ ಪ್ರಶ್ನೆಗಳಿಗೆ ಉತ್ತರವಾಗಿ, "Yes I Killed Her" ಎಂದು ಯಾವ ಪಶ್ಚಾತಾಪವೂ ಇಲ್ಲದಂತೆ ಹೇಳಿದ್ದಾನಂತೆ.

ಇದನ್ನೂ ಓದಿ : ಇದು ʼಲವ್‌ ಜಿಹಾದ್‌ʼ, ಕೊಲೆಗಡುಕ ಆಫ್ತಾಬ್‌ನನ್ನು ಗಲ್ಲಿಗೇರಿಸಿ : ಶ್ರದ್ಧಾ ತಂದೆ ಆಕ್ರೋಶ..!

ಶ್ರದ್ಧಾ ಕೊಲೆಯಾದ 20-25 ದಿನಗಳ ನಂತರ ತಾನು ಬೇರೊಬ್ಬ ಹುಡುಗಿಯೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದಾಗಿ ಪೊಲೀಸ್ ವಿಚಾರಣೆಯಲ್ಲಿ ಅಫ್ತಾಬ್ ಹೇಳಿದ್ದಾನೆ. ಡೇಟಿಂಗ್ ಆ್ಯಪ್ ಮೂಲಕ ಅವರು ಇನ್ನೊಬ್ಬ ಹುಡುಗಿಯನ್ನು ಭೇಟಿಯಾಗಿದ್ದನಂತೆ ಈ ಮಹಾಪಾಪಿ. ಮಾಹಿತಿ ಪ್ರಕಾರ, ಎರಡನೇ ಹುಡುಗಿ ಬರುವ ಮುನ್ನ ಅಫ್ತಾಬ್ ಶ್ರದ್ಧಾಗೆ ಸಂಬಂಧಿಸಿದ ಸಾಕ್ಷ್ಯವನ್ನು ಮರೆಮಾಡಿದ್ದನಂತೆ. ಮೃತದೇಹದ ಭಾಗಗಳನ್ನು ಬಚ್ಚಿಟ್ಟು ಕಬೋರ್ಡ್ ನಲ್ಲಿಟ್ಟಿದ್ದನಂತೆ.

ಅಫ್ತಾಬ್ ಇದೆಲ್ಲವನ್ನೂ ಒಂದು ಯೋಜನೆಯಡಿಯಲ್ಲಿ ಮಾಡಿದ್ದಾನೆ, ಜಗಳದ ಸಮಯದಲ್ಲಿ ತಾನು ಶ್ರದ್ಧಾಳ ಎದೆಯ ಮೇಲೆ ಕುಳಿತಿದ್ದಾಗಿ ಹೇಳಿದ್ದಾನಂತೆ. ಇದಾದ ಬಳಿಕ ಆಕೆಯನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾನಂತೆ. ದುಷ್ಕೃತ್ಯ ಎಸಗಿದ ಬಳಿಕ ಶ್ರದ್ಧಾಳ ಮೃತದೇಹವನ್ನು ಬಾತ್ ರೂಂನಲ್ಲಿ ಇಟ್ಟಿದ್ದ. ಇದಾದ ನಂತರ, ದೇಹವನ್ನು ಹೇಗೆ ಕತ್ತರಿಸಬಹುದು ಮತ್ತು ನೆಲದ ಮೇಲಿನ ರಕ್ತದ ಕಲೆಗಳನ್ನು ಹೇಗೆ ತೆಗೆದುಹಾಕಬಹುದು ಎಂದು ಇಂಟರ್ನೆಟ್ ಮೂಲಕ ತಿಳಿದುಕೊಂಡಿದ್ದಾನೆ. ನೆಲವನ್ನು ತೊಳೆಯಲು ಸಲ್ಫರಸ್ ಹೈಪೋಕ್ಲೋರಿಕ್ ಆಮ್ಲವನ್ನು ಬಳಸಿದ್ದಾನೆ. ಆದ್ದರಿಂದ ವಿಧಿವಿಜ್ಞಾನ ಪರೀಕ್ಷೆಯ ಸಮಯದಲ್ಲಿ DNA ಮಾದರಿಗಳು ಕಂಡುಬರುವುದಿಲ್ಲ. 

ಇದನ್ನೂ ಓದಿ : ಈ ವೆಬ್ ಸಿರೀಸ್‌ನಿಂದ ಸಿಕ್ಕಿತ್ತಂತೆ ಕೊಲೆ ಐಡಿಯಾ! ದೇಹವನ್ನು 35 ತುಂಡುಗಳಾಗಿ ಕತ್ತರಿಸಿದ್ಯಾಕೆ? ಇಲ್ಲಿದೆ ಬೆಚ್ಚಿ ಬೀಳಿಸುವ ಸತ್ಯ

ಅಷ್ಟೇ ಅಲ್ಲ, ಶ್ರದ್ಧಾ ಮತ್ತು ತನ್ನ ರಕ್ತಸಿಕ್ತ ಬಟ್ಟೆಗಳನ್ನು ಎಂಸಿಡಿಯ ಕಸದ ವ್ಯಾನ್‌ಗೆ ಹಾಕಿರುವುದಾಗಿ ಎಂದು ಆರೋಪಿ ಹೇಳಿದ್ದಾನೆ. ಛತ್ತರ್‌ಪುರ ಪ್ರದೇಶದ ಫ್ಲ್ಯಾಟ್‌ನಲ್ಲಿ ಈ ಘನಘೋರ ಘಟನೆ ನಡೆದಿದೆ. ಹಿಮಾಚಲದಲ್ಲಿ ಬದ್ರಿ ಎಂಬ ವ್ಯಕ್ತಿಯನ್ನು ಭೇಟಿಯಾಗಿದ್ದ ಈ ಜೋಡಿ, ಅದೇ ವ್ಯಕ್ತಿಯ ಸಹಾಯದಿಂದ ಫ್ಲ್ಯಾಟ್‌ ಪಡೆದಿದ್ದರು. ಅಫ್ತಾಬ್ ಮತ್ತು ಶ್ರದ್ಧಾ ಛತ್ತರ್‌ಪುರದಲ್ಲಿ ವಾಸಿಸಲು ಪ್ರಾರಂಭಿಸಿದರು. ಬದ್ರಿ ಸ್ವತಃ ಛತ್ತರ್‌ಪುರ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News