ಬೆಂಗಳೂರು: ಈ ಆಸಾಮಿಗೆ ಕುಡಿತದ ಚಟ. ಮದ್ಯವಿಲ್ಲದೇ ನಿದ್ದೆ ಬರಲ್ಲ ಅಂತಾರಲ್ಲ ಹಾಗೆ. ಈತನ ಚಟ ತೀರಿಸಿಕೊಳ್ಳಲು ಹಣ ಸಂಪಾದಿಸ ಬೇಕಲ್ಲ. ಅದಕ್ಕಾಗಿ ಈ ಖದೀಮ ಹಿಡಿದಿದ್ದು ಕಳ್ಳತನದ ಹಾದಿ. ಕದಿಯುವುದನ್ನೇ ವೃತ್ತಿಯಾಗಿಸಿಕೊಂಡಿದ್ದ ಈ ಕುಡುಕ ಕಳ್ಳನ ಕತೆ ನಿಮಗೆ ಅಚ್ಚರಿ ಮೂಡಿಸುತ್ತೆ. 


COMMERCIAL BREAK
SCROLL TO CONTINUE READING

ದಿನ ಮದ್ಯ ಸೇವಿಸಬೇಕೆಂದು‌ ಕಳ್ಳತನವನ್ನೇ ವೃತ್ತಿಯಾಗಿಸಿಕೊಂಡಿದ್ದ ಖತರ್ನಾಕ್ ಕಳ್ಳ ಲಕ್ಷ್ಮಣ್. ಒಂದು ಕ್ವಾರ್ಟರ್ ಎಣ್ಣೆಗಾಗಿ ಕಳ್ಳತನ ಮಾಡಿದ್ದ ಅಪಾಚಿ ಬೈಕ್ ಮಾರಿದ್ದನು. ಕುಡಿತದ ಚಟಕ್ಕೆ ಹಣ ಸಂಪಾದಿಸಲಾಗದೆ ಬೈಕ್‌ಗಳನ್ನು ಕದಿಯುತ್ತಿದ್ದ. ಕದ್ದ ಬೈಕ್‌ನಿಂದ ಬ್ಯಾಟರಿ ಮಾರಿ ಬಂದ ಹಣದಲ್ಲಿ ಎಣ್ಣೆ ಹೊಡೆಯುತ್ತಿದ್ದ. 


ಇದನ್ನೂ ಓದಿ : ಅನೈತಿಕ ಸಂಬಂಧದ ಕುಣಿಕೆಯೋ..? ಪೊಲೀಸ್ ಕಿರುಕುಳವೋ..?: ಸತ್ತೇ ಹೋಯಿತು ಬಡ ಜೀವ..! 


ಒಂದು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೈಕ್ ಕದ್ದು, ಅದರ ಬ್ಯಾಟರಿ ತೆಗೆದುಕೊಳ್ಳುತ್ತಿದ್ದ. ಬಳಿಕ ಮತ್ತೊಂದು ಠಾಣಾ ವ್ಯಾಪ್ತಿಯಲ್ಲಿ ಆ ಕದ್ದ ಬೈಕ್ ಬಿಟ್ಟು ಹೋಗುತ್ತಿದ್ದ. ಬೈಕ್ ನ ಬ್ಯಾಟರಿ, ಟೈರ್ ತೆಗೆದುಕೊಂಡು ಬೈಕ್ ಅಲ್ಲೇ ಬಿಟ್ಟು ಪರಾರಿಯಾಗುತ್ತಿದ್ದ. ಕೆಲ ತಿಂಗಳ ಹಿಂದೆ ಪೊಲೀಸರ ಕೈಗೆ ಸಿಕ್ಕಿಬಿದ್ದು, ಜೈಲು ಸೇರಿದ್ದ. ಜೈಲಿಂದ ರೀಲಿಸ್ ಆಗಿ ಮತ್ತೆ ಬೈಕ್ ಕಳ್ಳತನ ಮುಂದುವರೆಸಿದ್ದ.


ಆರೋಪಿ ಲಕ್ಷ್ಮಣ್‌ ಮೇಲೆ ಬೆಂಗಳೂರಿನ ವಿವಿಧ ಠಾಣೆಗಳಲ್ಲಿ ಒಟ್ಟು 15 ಪ್ರಕರಣಗಳು ದಾಖಲಾಗಿವೆ. ಸದ್ಯ ಕುಡುಕ‌ ಕಳ್ಳ ಲಕ್ಷ್ಮಣ್‌ನನ್ನು ಮಾಡಿರುವ ಗಿರಿನಗರ ಪೊಲೀಸರು ಸೆರೆ ಹಿಡಿದಿದ್ದಾರೆ. ಬಂಧಿತನಿಂದ 11.55 ಲಕ್ಷ ಬೆಲೆಬಾಳುವ 20 ದ್ವಿಚಕ್ರ ವಾಹನ ಸೀಜ್ ಮಾಡಿದ್ದಾರೆ.  


ಇದನ್ನೂ ಓದಿ : ಪಟಾಕಿ ದುರಂತದ ಬಳಿಕ ಎಚ್ಚೆತ್ತ ಸರ್ಕಾರ: ಗ್ರೌಂಡ್‌ನಲ್ಲಿ ಸೇಲ್ ಮಾಡೋದಕ್ಕೆ ಅವಕಾಶ ಡೌಟ್ 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.