ನವದೆಹಲಿ:  ಗುರುದೇವ್ ಎಂದೂ ಕರೆಯಲ್ಪಡುವ ರವೀಂದ್ರನಾಥ ಟ್ಯಾಗೋರ್ ಬಂಗಾಳಿ ಸಾಹಿತ್ಯ, ಕಲೆ ಮತ್ತು ಸಂಗೀತವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಇಂದು ಟ್ಯಾಗೋರ್ ರ 159 ನೇ ಜನ್ಮ ದಿನಾಚರಣೆಯ ಸಂದರ್ಭದಲ್ಲಿ ಅವರ ಕುರಿತ ಅಪರೂಪದ ಮಾಹಿತಿಯನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡೋಣ.


  • COMMERCIAL BREAK
    SCROLL TO CONTINUE READING

    ರವೀಂದ್ರನಾಥ ಟ್ಯಾಗೋರ್  ಹದಿಮೂರು ಮಕ್ಕಳಲ್ಲಿ ಕಿರಿಯ. ಅವರು ಕಲ್ಕತ್ತಾದ ಜೋರಸಂಕೊ ಭವನದಲ್ಲಿ ದೇಬೇಂದ್ರನಾಥ ಟ್ಯಾಗೋರ್ ಮತ್ತು ಶಾರದಾ ದೇವಿ ದಂಪತಿಗೆ ಜನಿಸಿದರು. ದುರದೃಷ್ಟವಶಾತ್, ಅವರ ತಾಯಿ ಚಿಕ್ಕ ವಯಸ್ಸಿನಲ್ಲಿಯೇ ನಿಧನರಾದರು 

  • ಟ್ಯಾಗೋರ್ ಕುಟುಂಬವು ಬಂಗಾಳ ನವೋದಯ ಕಾಲಾವದಿಯಲ್ಲಿ ಮುಂಚೂಣಿಯಲ್ಲಿತ್ತು. ಅವರ ಕುಟುಂಬ ಸಾಹಿತ್ಯ ನಿಯತಕಾಲಿಕೆಗಳನ್ನು ಪ್ರಕಟಿಸಿತು; ರಂಗಭೂಮಿ ಮತ್ತು ಬಂಗಾಳಿ ಮತ್ತು ಪಾಶ್ಚಾತ್ಯ ಶಾಸ್ತ್ರೀಯ ಸಂಗೀತದ ಧ್ವನಿಮುದ್ರಿಕೆಗಳು ನಿಯಮಿತವಾಗಿ ಕಾಣಿಸಿಕೊಂಡವು.

  • ರವೀಂದ್ರನಾಥ ಟ್ಯಾಗೋರ್ 1913 ರಲ್ಲಿ ಸಾಹಿತ್ಯಕ್ಕಾಗಿ ನೊಬೆಲ್ ಪ್ರಶಸ್ತಿ ಪಡೆದ ಮೊದಲ ಯುರೋಪಿಯನೇತರ ವ್ಯಕ್ತಿಯಾಗಿದ್ದಾರೆ. ಅವರ ಗೀತಾಂಜಲಿ ಕೃತಿಗಾಗಿ ಈ ಪ್ರಶಸ್ತಿ ಲಭಿಸಿದೆ.

  • ಬಾರ್ಡ್ ಆಫ್ ಬಂಗಾಳದ ಸಂಯೋಜನೆಗಳನ್ನು ಎರಡು ರಾಷ್ಟ್ರಗಳು ರಾಷ್ಟ್ರಗೀತೆಗಳಾಗಿ ಆಯ್ಕೆ ಮಾಡಿವೆ. ಅದರಲ್ಲಿ ಭಾರತದ ಜನ ಗಣ ಮನ ಮತ್ತು ಬಾಂಗ್ಲಾದೇಶದ ಅಮರ್ ಶೋನಾರ್ ಬಾಂಗ್ಲಾ ಸೇರಿವೆ. ಅಲ್ಲದೆ, ಶ್ರೀಲಂಕಾದ ರಾಷ್ಟ್ರಗೀತೆ ಅವರ ಕೃತಿಯಿಂದ ಪ್ರೇರಿತವಾಗಿತ್ತು.

  • ಟಾಗೋರ್ ಅವರು ಶಾಲಾ ತರಬೇತಿಗಾಗಿ ಒಂದು ವಿಶಿಷ್ಟ ದೃಷ್ಟಿಕೋನವನ್ನು ಹೊಂದಿದ್ದರು ನಂತರ ಅದನ್ನು ವಿಶ್ವಭಾರತಿ ಎಂದು ಹೆಸರಿಸಿದರು..ವಿದ್ಯಾರ್ಥಿಗಳಿಗೆ ವೈಯಕ್ತಿಕ ಮಾರ್ಗದರ್ಶನ ನೀಡಿದರು, ಭಾವನಾತ್ಮಕ, ಬೌದ್ಧಿಕ ಮತ್ತು ಆಧ್ಯಾತ್ಮಿಕ ಬೋಧನೆ ಹೆಚ್ಚಾಗಿ ಮರಗಳ ಕೆಳಗೆ ನಡೆಯುತ್ತಿತ್ತು, ಅವರ ನೊಬೆಲ್ ಪ್ರಶಸ್ತಿ ಹಣವನ್ನು ಇದಕ್ಕೆ ಮೀಸಲಿಟ್ಟರು. ಶಾಂತಿನಿಕೇತನದಲ್ಲಿ ಉಸ್ತುವಾರಿ-ಮಾರ್ಗದರ್ಶಕರಾಗಿ ಬೆಳಿಗ್ಗೆ ತರಗತಿಗಳನ್ನು ನಡೆಸುತ್ತಿದ್ದರು; ಮಧ್ಯಾಹ್ನ ಮತ್ತು ಸಂಜೆ ಅವರು ವಿದ್ಯಾರ್ಥಿಗಳ ಪಠ್ಯಪುಸ್ತಕಗಳನ್ನು ಬರೆಯುತ್ತಿದ್ದರು. ಅವರು 1919 ಮತ್ತು 1921 ರ ನಡುವೆ ಯುರೋಪ್ ಮತ್ತು ಅಮೆರಿಕಾದಲ್ಲಿ ಈ ಶಾಲೆಗಾಗಿ ವ್ಯಾಪಕವಾಗಿ ಹಣವನ್ನು ಸಂಗ್ರಹಿಸಿದರು.

  • ಮಾರ್ಚ್ 25, 2004 ರಂದು ಟಾಗೋರ್ ಅವರ ನೊಬೆಲ್ ಪ್ರಶಸ್ತಿಯನ್ನು ವಿಶ್ವ-ಭಾರತಿ ವಿಶ್ವವಿದ್ಯಾಲಯದ ಸುರಕ್ಷತಾ ವಾಲ್ಟ್‌ನಿಂದ ಕಳವು ಮಾಡಲಾಯಿತು. ಅವರ ಹಲವಾರು ಇತರ ವಸ್ತುಗಳನ್ನು ಮಾರ್ಚ್ 25,2004 ರಂದು ಕಳವು ಮಾಡಲಾಯಿತು. ಆದಾಗ್ಯೂ, ಡಿಸೆಂಬರ್ 7,2004 ರಂದು, ಸ್ವೀಡಿಷ್ ಅಕಾಡೆಮಿ ಟ್ಯಾಗೋರ್‌ನ ನೊಬೆಲ್‌ನ ಎರಡು ಪ್ರತಿಕೃತಿಗಳನ್ನು ಪ್ರಸ್ತುತಪಡಿಸಿತು.