ಬೆಂಗಳೂರು: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ದಿನೇ ದಿನೇ  ಯಶಸ್ಸು ಕಾಣುತ್ತಿದೆ. 5ನೇ ವಾರಕ್ಕೆ ಕಾಲಿಟ್ಟಿರುವ ಈ ಕಾರ್ಯಕ್ರಮದಲ್ಲಿ ಸಾಧಕರ ಸೀಟ್ ಕುಳಿತು ಮೆರುಗುಗೊಳಿಸುವ ವ್ಯಕ್ತಿ ಯಾರು ಅಂಥ ನೋಡೊಣ..  


COMMERCIAL BREAK
SCROLL TO CONTINUE READING

ಕಾರ್ಯಕ್ರಮ ಪ್ರಾರಂಭವಾಗಿ ಈಗಾಗಲೇ 4 ವಾರಗಳು ಕಳಿದಿದ್ದು, 5ನೇ ವಾರಕ್ಕೆ ಕಾಲಿಟ್ಟಿದೆ. ಈ ಸೀಸನ್‌ ಮೊದಲಲ್ಲಿ ಸ್ಯಾಂಡಲ್ ವುಡ್ ಕ್ವೀನ್ ನಟಿ ರಮ್ಯಾ, ನೃತ್ಯಗಾರ ಪ್ರಭುದೇವ, ಹೃದ್ರೋಗ ತಜ್ಞ ಮಂಜುನಾಥ್, ಡಾಲಿ ಧನಂಜಯ್  ಆ ಸೀಟಿನಲ್ಲಿ ಕುಳಿತು ಮೆರುಗು ತಂದಿದ್ದಾರೆ. ಇದೀಗ ಈ ವಾರ ಯಾರು ಅಥಿತಿ ಯಾರೆಂಬುವುದು ಎಲ್ಲರಲ್ಲಿ ಕೂತುಹಲ ಮೂಡಿಸಿದೆ. 


ಇದನ್ನೂ ಓದಿ: Pragati Badiger : ಸ ರಿ ಗ ಮ ಪ ಕಿರೀಟ ಮುಡಿಗೇರಿಸಿಕೊಂಡ ಹಳ್ಳಿ ಪ್ರತಿಭೆ ಪ್ರಗತಿ ಬಡಿಗೇರ್ ಯಾರು ಗೊತ್ತಾ?


ಎಲ್ಲರ ಕೂತುಹಲಕ್ಕೆ ಉತ್ತರ ಸಿಕ್ಕಂತಾಗಿದೆ. ಐದನೇ ವಾರದ 6 ಮತ್ತು 7ನೇ ಅತಿಥಿಯಾಗಿ, ನಟ ಮಂಡ್ಯ ರಮೇಶ್ ಮತ್ತು ನಟ ಅವಿನಾಶ್ ಬರಲಿದ್ದಾರೆ. ಇಬ್ಬರು ಹಿರಿಯ ನಟರ ಸುಖ ದುಖಃ ಜೀವನದ ಸೋಲು ಗೆಲುವುಗಳನ್ನು ತಿಳಿಯಲು ಜನ ಕಾತುರದಿಂದ ಕಾಯ್ತ ಇದ್ದಾರೆ.


ಮಂಡ್ಯ ರಮೇಶ್ ಅವರು ಹಲವು ಸಿನಿಮಾಗಳಲ್ಲಿ ನಟಿಸಿರುವುದಲ್ಲದೇ ರಂಗಭೂಮಿಗೆ ಹಲವರನ್ನು ಪರಿಚಯಿಸಿದ್ದಾರೆ. ರಂಗಭೂಮಿ ಸಿನಿಮಾಗಳಲ್ಲಿ ವಿಭಿನ್ನವಾಗಿ ಗುರುತಿಸಿಕೊಂಡಿರುವ ಮಂಡ್ಯ ರಮೇಶ್, ಜೀವನದಲ್ಲಿ ಹಲವು ಸೋಲು-ಗೆಲವುಗಳನ್ನು ಕಂಡಿರುವ ನಟ ಆಗಿದ್ದಾರೆ. 


ಇದನ್ನೂ ಓದಿ: Aarti Mittal: ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಕಿರುತೆರೆ ನಟಿ ಅರೆಸ್ಟ್!


ಇನ್ನು ಹಿರಿಯ ನಟ ಅವಿನಾಶ್ ಪರಿಚಯ ಇಲ್ಲದಿರಲು ಸಾಧ್ಯವೇ ಇಲ್ಲ. ಕಾರಣ ಯಾವುದೇ ಸಿನಿಮಾವಾದರೂ ವಿಲನ್‌ ಎಂದೊಡನೆ ಮೊದಲು ನೆನಪಿಗೆ ಬರುವ ಮುಖ ಇವರದ್ದು. ಇವರ ಖಳ ನಾಯಕನ ಪಾತ್ರಕ್ಕೆ ಫಿದ ಆಗದ ಅಭಿಮಾನಿಗಳು ಇಲ್ಲ.  ಸಿನಿಮಾದಲ್ಲಿ ವಿಲನ್‌ ಆದರೂ ನಿಜ ಜೀವನದಲ್ಲಿ ಹೀರೊ ಇವರೇ.. ಹಾಗಯೇ ಇವರ ಜೀವನದ ಏಳು ಬೀಳುಗಳನ್ನು ತಿಳಿಯಲು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ಬರುವವರೆಗೂ ಕಾಯಬೇಕಿದೆ. https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.