Abhishek Ambareesh : ಜೂನ್‌ 7 ರಂದು ಬೆಂಗಳೂರಿನಲ್ಲಿ ಮದುವೆಯಾದ ಅಭಿಷೇಕ್‌ ಅವಿವಾ ಜೋಡಿ ಅದ್ದೂರಿ ಆರತಕ್ಷತೆತೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಸದ್ಯ ಇಂದು (ಜೂನ್ 16) ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಗೆಜ್ಜೆಗೆರೆಯಲ್ಲಿ ಬೃಹತ್‌ ಪ್ರಮಾಣದ ಬೀಗರ ಊಟ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ನೂರಾರು ಕೆಲಸಗಾರರು ಈ ಕಾರ್ಯದಲ್ಲಿ ತೊಡಗಿದ್ದಾರೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ-Adipurush review : ಪ್ರಭಾಸ್‌ ʼಆದಿಪುರುಷʼ ರಿಲೀಸ್‌ : ಹೇಗಿದೆ ಸೀತಾ-ರಾಮ ಪ್ರೇಮಕಥಾ ಸಿನಿಮಾ..!


ಇನ್ನು ಕೆಲಸಗಳು ಯಾವರೀತಿ ನಡೆಯುತ್ತಿವೆ ಎಂದು ವಿಚಾರಿಸಲು ಗುರುವಾರ ಅಭಿಷೇಕ್‌ ಅಂಬರೀಶ್‌ ಗೆಜ್ಜೆಗೆರೆಗೆ ಭೇಟಿ ನೀಡಿದ್ದರು. ಅವರು ಆಗಮಿಸುತ್ತಿದ್ದಂತೆ ಅಲ್ಲಿದ್ದ ಎಷ್ಟೋ ಮಂದಿ ಅವರ ಬಳಿ ಆಗಮಿಸಿ ಸೆಲ್ಫಿ ತೆಗೆದುಕೊಂಡರು. ಇನ್ನು ಇದೇ ವೇಳೆ ಅಡುಗೆ ಮನೆಯ ಕೆಲಸದಲ್ಲಿ ತೊಡಗಿಸಿಕೊಂಡಿದ್ದ ಸಹಾಯಕಿಯರ ಹತ್ತಿರ ಬಂದು ಅಭಿ ಎಲ್ಲರನ್ನು ಸಹಾನೂಭತಿಯಿಂದಲೇ ಮಾತನಾಡಿಸಿದ್ದಾರೆ. 


ಇದನ್ನೂ ಓದಿ-ಡ್ರಗ್ಸ್‌ ಮಾರಾಟದ ವೇಳೆ ʼಕಬಾಲಿʼ ಚಿತ್ರದ ನಿರ್ಮಾಪಕನ ಬಂಧನ


ಅಭಿಷೇಕ್‌ ಅಂಬರೀಶ್‌ ಬರುತ್ತಿದ್ದಂತೆ ಮಹಿಳೆಯರು ಎದ್ದು ನಿಂತು ಅವರ ಕೆನ್ನೆ ಹಿಂಡಿ ದೃಷ್ಟಿ ತೆಗೀರೆ ನಮ್ಮ ಅಪ್ಪಂಗೆ ಎಂದು ಹೇಳಿ ದೃಷ್ಟಿ ತೆಗೆದು ತುಂಬು ಹೃದಯದಿಂದ ಆಶೀರ್ವಾದಿಸಿದ್ದಾರೆ. ಮಹಿಳೆಯರ ಪ್ರೀತಿಗೆ ಕರಗಿದ ಅಭಿ ಎಲ್ಲರಿಗೂ ಕೈ ಮುಇದು ನಿಮ್ಮ ಪ್ರೀತಿ ಸದಾ ಹೀಗೆ ಇರಲೆಂದು ಕೇಳಿಕೊಂಡರು. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.