Darshan: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸಲ್ಲಿ A2 ಆರೋಪಿಯಾಗಿ ಅಂದರ್ ಆಗಿ ಜೈಲು‌ ಸೇರಿರುವ ನಟ‌ ದರ್ಶನ್ ಫುಲ್ ಬಿಂದಾಸ್ ಆಗಿ ಇದ್ದಾರೆ ಎಂಬುದಕ್ಕೆ ಸಾಕ್ಷಿಯಾಗಿ ನಿನ್ನೆ ಎರಡು ಸಾಕ್ಷಿಗಳು ಲಭ್ಯವಾಗಿದ್ದವು.‌ಆದರೆ ಇವತ್ತು ಸಹ ದರ್ಶನ್ ಜೈಲಲ್ಲಿರುವ ಮತ್ತೊಂದು ಫೋಟೋ ಲಭ್ಯವಾಗಿದೆ. ದಾಸ ಬೆಡ್ ಮೇಲೆ ವಿಗ್ ಇಲ್ಲದೇ ಕುಳಿತಿರುವ ಫೋಟೋದಲ್ಲಿ ದರ್ಶನ್ ಜೊತೆ ಮತ್ತೊಬ್ಬ ವ್ಯಕ್ತಿ‌ ಕುಳಿತುಕೊಂಡಿದ್ದಾನೆ. ಆ ವ್ಯಕ್ತಿ ದರ್ಶನ್ ಗೆ ಮೊಬೈಲ್ ನಲ್ಲಿ ಏನೋ ತೋರಿಸುತ್ತಿದ್ದಾನೆ. ಹಾಗಾದ್ರೆ ಸೆಂಟ್ರಲ್ ಜೈಲಲ್ಲಿ ಮೊಬೈಲ್ ಬಳಕೆಗೆ ಅವಕಾಶ ಕೊಟ್ಟವರ್ಯಾರು. ಜೈಲಲ್ಲಿ ಹಣವಂತರು, ಪ್ರಭಾವಿಗಳಿಗೆ ಎಲ್ಲಾ ಫೆಸಿಲಿಟಿ ಕೊಡ್ತಾರ.? ಮನಪರಿವರ್ತನೆಗೆ ಅಂತಾ ಜೈಲಿಗೆ ಹೋಗುವ ಆರೋಪಿಗಳು ಐಷಾರಾಮಿ ಜೀವನ ನಡೆಸಿದರೆ ಹೇಗೆ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ. 


COMMERCIAL BREAK
SCROLL TO CONTINUE READING

ಹೌದು ನಟ ದರ್ಶನ್ ಜೊತೆ ಫೋಟೋದಲ್ಲಿರುವ ವಿಲ್ಸನ್‌ ಗಾರ್ಡನ್ ನಾಗ ಹಾಗೂ ಈ ಕುಳ್ಳ ಸೀನನ ಕ್ರೈಂ ಹಿಸ್ಟರಿ ನೋಡಿದ್ರೆ ಒಂದು ಕ್ಷಣ ಶಾಕ್ ಆಗುತ್ತೆ. ಏಕೆಂದ್ರೆ 2004 ರಿಂದಲೂ ನಾಗನ ಮೇಲೆ ಅನೇಕ ಪ್ರಕರಣಗಳಿವೆ. ಕೊಲೆ, ಕೊಲೆ ಯತ್ನ, ರಾಬರಿ ಪ್ರಕರಣಗಳು ಸೇರಿ ಒಟ್ಟು 23 ಕೇಸ್ ಗಳು ನಾಗನ ಮೇಲಿವೆ. ಇದರಲ್ಲಿ 10 ಕೊಲೆ ಪ್ರಕರಣದಲ್ಲಿ ವಿಲ್ಸನ್ ಗಾರ್ಡನ್ ನಾಗ A1 ಆರೋಪಿಪಿಯಾಗಿದ್ದಾನೆ. ಕಳೆದ ವರ್ಷ ತಮ್ಮ ಸಹಚರರ ಮೂಲಕ ಆಗತಾನೇ ಜೈಲಿಂದ ಹೊರಬಂದ ಸಿದ್ದಾಪುರ ಮಹೇಶನನ್ನು ನಾಗ ಫಿನೀಶ್ ಮಾಡಿಸಿದ್ದ. ಈಗ ಮಹೇಶನ ಕೊಲೆ‌ ಕೇಸಲ್ಲಿ ವಿಲ್ಸನ್ ಗಾರ್ಡನ್ ನಾಗ ಜೈಲಿನಲ್ಲಿದ್ದಾನೆ. ಇನ್ನೂ ದರ್ಶನ್ ಜೊತೆ ಜೈಲಿನಲ್ಲಿರುವ  ಮತ್ತೊಬ್ಬ ರೌಡಿ ಶೀಟರ್ ಕುಳ್ಳ ಸೀನಾ ಸಜಾ ಕೈದಿ. ವಿಡಿಯೋ ಕಾಲ್ ನಲ್ಲಿ ಮಾತನಾಡೊಸಿದ ಧರ್ಮ ಕೂಡ ಸಜಾ ಕೈದಿಯಾಗಿದ್ದಾನೆ. ದರ್ಶನ್ ಗೆ ಜೈಲಲ್ಲಿ ಸಜಾ ಕೈದಿಗಳು ಸಾಕಷ್ಟು ಹತ್ತಿರವಾಗಿದ್ದಾರೆ. ಇದೇ ಕಾರಣಕ್ಕೆ ದರ್ಶನ್ ಗೆ ಬೆಡ್ಡು ಫುಡ್ಡು, ಸಿಗರೇಟ್ ಎಲ್ಲಾ ಸಪ್ಲೈ ಆಗುತ್ತಿದೆ.


"ನಾನು ಇಲ್ಲಿ ಯಾರೊಂದಿಗೂ ಜಗಳ ಮಾಡಲು ಬಂದಿಲ್ಲ.." ದೀಪಿಕಾ ಜೊತೆಗಿನ ಮುನಿಸಿನ ಕುರಿತು ಮೌನ ಮುರಿದ ಅನುಷ್ಕಾ ಶರ್ಮಾ!


ಜೈಲಿನಲ್ಲಿ ಕುಳ್ಳ ಸೀನಾ ಆತನ ಹವಾ ಹೇಗಿದೆ ಅಂತ ನೋಡೋದಾದ್ರೆ ಶಾಕ್ ಆಗೋದು ಪಕ್ಕಾ. ವಿಲ್ಸನ್ ಗಾರ್ಡನ್ ನಾಗ ಕ್ರೈಂ ಲೋಕದ ಪ್ರಾರಂಭದ ದಿನಗಳಲ್ಲಿ ನಾಗನಿಗೆ ಗುರುವಾಗಿದ್ನಂತೆ ಈ ಸೀನಾ. ಜೈಲಿನಲ್ಲೇ ಸೀನನ ಬರ್ತಡೇಗೆ ಜೈಲು ಅಧಿಕಾರಿಗಳು  ಗನ್ ಕೇಕ್ ಮಾಡಿಸಿಕೊಟ್ಟಿದ್ದಾರೆ. ಈ ಗನ್ ಕೇಕ್ ಕಟ್ ಮಾಡಿ ಸೀನಾ ವಿಲ್ಸನ್ ಗಾರ್ಡನ್ ನಾಗನ ಫೋಟೋಗೆ ಫೋಸ್ ನೀಡಿದ್ದಾನೆ. 2006 ರಲ್ಲಿ ಕೊಲೆ ಪ್ರಕರಣದಲ್ಲಿ ಶ್ರೀನಿವಾಸ್ ಗೆ ಸಜೆ ಕೂಡ ಆಗಿದೆ. ಸಜೆ ಆಗಿರೋ ಖೈದಿಗಳಿಗಳು ಸಾಧಾರಣವಾಗಿ ಬಿಳಿ ಬಟ್ಟೆ ಹಾಕಬೇಕು. ಆದ್ರೆ ಶ್ರೀನಿವಾಸ್ ಮತ್ತು ಧರ್ಮ ಸಜೆ ಆದ್ರೂ ಬಿಳಿ ಬಟ್ಟೆ ಧರಿಸೋದಿಲ್ಲ. ಅದರಲ್ಲೂ ಈ ಇಬ್ಬರು ಜೈಲಾಧಿಕಾರಿಗಲಿಗೆ ಶ್ರೀನಿವಾಸ್ ಕ್ಯಾರೆ ಅಂತಾನು ಅನ್ನಲ್ವಂತೆ.


ಇದನ್ನೂ ಓದಿ-ನೆನಪಿದ್ದಾರಾ ರವಿಚಂದ್ರನ್‌ ಅಭಿನಯದ ನೀಲಕಂಠ ಸಿನಿಮಾ ನಟಿ?! ಈಗ ಹೇಗಿದ್ದಾರೆ? ಏನ್‌ ಮಾಡ್ತಿದ್ದಾರೆ?


ಇನ್ನೂ A2 ಕೊಲೆ ಆರೋಪಿ ದರ್ಶನ್ ಜೊತೆಗೆ ವಿಡಿಯೋ ಕಾಲ್ ನಲ್ಲಿ ಮಾತನಾಡಿದ್ದ ಕೊಲೆಯತ್ನದ ಕೇಸ್ ನ ಆರೋಪಿಯಾಗಿದ್ದ ಸತ್ಯಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಮಾಜಿ ರೌಡಿಶೀಟರ್ ಜಾನಿ ಅಲಿಯಾಸ್ ಜನರ್ಧಾನ್ ಮನೆ ಬಳಿ ಬ್ಯಾಡರಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಸತ್ಯ ಮನೆಯಲ್ಲಿ ಇಲ್ಲ ಎಂದು ಹೇಳಲಾಗ್ತಿದೆ. ಸತ್ಯನನ್ನ ಹುಡುಕಿ ಆತನ ವಿಚಾರಣೆ ನಡೆಸಿ ಯಾವಗಾ ವಿಡಿಯೋ ಕಾಲ್ ಮಾಡಿದ್ದ. ಯಾವ ಉದ್ದೇಶಕ್ಕೆ ಮಾಡಿದ್ದ ಎಂದು ವಿಚಾರಣೆ ನಡೆಸಲಿದ್ದಾರೆ. 


ಮತ್ತೊಂದು ಅಪ್ಡೇಟ್ ಅಂದ್ರೆ ದರ್ಶನ್ ಜೊತೆ ವಿಲ್ಸನ್ ಗಾರ್ಡನ್ ನಾಗ, ಕುಳ್ಳ ಸೀನಾನ ಜೊತೆ ತೆಗೆದಿದ್ದು  ಮತ್ತೊರ್ವ ರೌಡಿಶೀಟರ್ ವೇಲು ಎಂಬ ಮಾಹಿತಿ ಲಭ್ಯವಾಗಿದೆ. ಈ ವೇಲು ಪೋಟೋ ತೆಗೆದು ಮೈಸೂರು ಸೇರಿದಂತೆ ಬೇರೆ ಬೇರೆ ಕಡೆ ಶೇರ್ ಮಾಡಿದ್ದ. ಮಾಧ್ಯಮಗಳಲ್ಲಿ ಸುದ್ದಿ ಬಿತ್ತರ ಬೆನ್ನಲ್ಲೆ ಜೈಲಿನಲ್ಲಿ ವೇಲು ಮೇಲೆ ವಿಲ್ಸನ್ ಗಾರ್ಡನ್ ನಾಗ ಮತ್ತು ಕುಳ್ಳ ಸೀನಾ ಕೆಂಡ ಕಾರಿದ್ದಾರೆ. ಫೋಟೋ ತೆಗೆದು ವೈರಲ್ ಮಾಡಿದ ರೌಡಿಶೀಟರ್ ವೇಲು ಮೇಲೆ ಕೆಲ ರೌಡಿಶೀಟರ್ ಗಳು ಹಲ್ಲೆ ನಡೆಸಿದ್ದಾರಂತೆ. ಒಟ್ಟಾರೆಯಾಗಿ  ಹಣವಂತರು, ಪ್ರಭಾವವಿಗಳಿಗೆ ಪರಪ್ಪನ ಅಗ್ರಹಾರ ಸೆರೆಮನೆಯಲ್ಲ ಅರಮನೆ ಅನ್ನೊಂದಂತು ಸುಳ್ಳಲ್ಲ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.