ನೆನಪಿದ್ದಾರಾ ರವಿಚಂದ್ರನ್‌ ಅಭಿನಯದ ನೀಲಕಂಠ ಸಿನಿಮಾ ನಟಿ?! ಈಗ ಹೇಗಿದ್ದಾರೆ? ಏನ್‌ ಮಾಡ್ತಿದ್ದಾರೆ?

Actress Namitha: ನಟಿ ನಮಿತಾ ಕನ್ನಡದ ರಸಿಕರ ರಾಜ ರವಿಚಂದ್ರನ್‌ ಅವರ ನೀಲಕಂಠ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದರು.. ಈ ಚಿತ್ರದಲ್ಲಿ ಬೋಲ್ಡ್‌ ಆಗೊ ನಟಿಸುವ ಮೂಲಕ ನಟಿ ಎಲ್ಲರ ಗಮನ ಸೆಳೆದಿದ್ದರು.. ಇದೀಗ ಇವರ ಕುರಿತಾದ ಕೆಲವು ಇಂಟ್ರೆಸ್ಟಿಂಗ್‌ ಮಾಹಿತಿಯನ್ನು ತಿಳಿಯೋಣ.. 
 

1 /7

 ನಟಿ ನಮಿತಾ ಕನ್ನಡ ಮಾತ್ರವಲ್ಲದೇ ತಮಿಳು, ತೆಲುಗು, ಮಲಯಾಳಂ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.. ಸಿನಿರಂಗದಿಂದ ದೂರ ಉಳಿದಿರುವ ಈ ಚೆಲುವೆಯ ವೈಯಕ್ತಿಕ ಜೀವನದ ಕೆಲವು ಮಾಹಿತಿಯನ್ನು ಇಲ್ಲಿ ತಿಳಿಯೋಣ..   

2 /7

ನಾಯಕಿ ನಮಿತಾ ಒಂದು ಕಾಲದಲ್ಲಿ ತಮ್ಮ ಸೌಂದರ್ಯದಿಂದ ಹುಡುಗರ ಹೃದಯವನ್ನೇ ಆಳಿದ್ದರು.. ನಟಿ ಕೆಲವೇ ಸಿನಿಮಾಗಳನ್ನು ಮಾಡಿದ್ದರೂ ಒಳ್ಳೆಯ ಮಣ್ಣನೆ ಗಳಿಸಿದ್ದಾರೆ.. ವಿಶೇಷವಾಗಿ ರವಿಚಂದ್ರನ್‌ ಅವರ ನೀಲಕಂಠ ಸಿನಿಮಾದ ಮೂಲಕ ಮೋಡಿದ್ದಾರೆ..   

3 /7

ನಟಿ ನಮಿತಾ ವೀರೇಂದ್ರ ಚೌಧರಿ ಅವರನ್ನು ಪ್ರೀತಿಸಿ 2017 ರಲ್ಲಿ ವಿವಾಹವಾದರು. 2022ರಲ್ಲಿ ಈ ದಂಪತಿಗೆ ಅವಳಿ ಮಕ್ಕಳು ಜನಿಸಿದರು.. ಮದುವೆ, ಮಕ್ಕಳ ನಂತರ ಚಿತ್ರರಂಗದಿಂದ ದೂರ ಉಳಿದಿದ್ದ ನಮಿತಾ ರಾಜಕೀಯಕ್ಕೂ ಎಂಟ್ರಿ ಕೊಟ್ಟಿದ್ದರು..   

4 /7

ಸದ್ಯ ಕುಟುಂಬದೊಂದಿಗೆ ಸುಖವಾಗಿರುವ ನಟಿ ನಮಿತಾ ಸಾಮಾಜಿಕ ಜಾಲತಾಣದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಆಗ್ಗಾಗೆ ಪೋಟೋಗಳನ್ನು ಹಂಚಿಕೊಳ್ಳುತ್ತಾ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿರುತ್ತಾರೆ..  

5 /7

ಇತ್ತೀಚೆಗೆ ನಟಿ ತಮಗೆ ದೇವಸ್ಥಾನದಲ್ಲಿ ಆದ ಅನುಭವವನ್ನು ಹಂಚಿಕೊಳ್ಳುವುದರ ಮೂಲಕ ಸುದ್ದಿಯಾಗಿದ್ದಾರೆ.. ಅವರೊಂದಿಗೆ ದೇವಸ್ಥಾನದ ಸಿಬ್ಬಂದಿ ಅಸಭ್ಯವಾಗಿ ವರ್ತಿಸಿದ್ದ ಎಂದು ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದರು..  

6 /7

 'ಕೃಷ್ಣಾಷ್ಟಮಿ ಇದ್ದಾಗ ನಾನು ನನ್ನ ಕುಟುಂಬ ಸಮೇತ ಮೀನಾಕ್ಷಿ ಅಮ್ಮನವರ ದೇವಸ್ಥಾನಕ್ಕೆ ಹೋಗಿದ್ದೆ.. ಅಲ್ಲಿ ಅನಿರೀಕ್ಷಿತ ಘಟನೆಯೊಂದು ನಡೆದು ನನ್ನನ್ನು ದೇವಸ್ಥಾನಕ್ಕೆ ಪ್ರವೇಶಿಸದಂತೆ ಸಿಬ್ಬಂದಿ ತಡೆದರು. ಅಲ್ಲದೆ ಕೆಲವು ಸರ್ಟಿಫಿಕೇಟ್‌ಗಳನ್ನು ತೋರಿಸಲು ಕೇಳಿದರು. ಅದಕ್ಕೆ ನಾನು ಶಾಕ್ ಆದೆ.. ಹಾಗೆ ತಡೆದು ಸರ್ಟಿಫಿಕೇಟ್ ತೋರಿಸಲು ಕೇಳಿದ್ದು ನನಗೆ ತುಂಬಾ ನೋವಾಯಿತು. ತಮಿಳುನಾಡಿನಲ್ಲಿ ಮಾತ್ರವಲ್ಲದೆ ದೇಶದಾದ್ಯಂತ ಇರುವ ಅನೇಕ ಪ್ರಸಿದ್ಧ ದೇವಾಲಯಗಳಿಗೆ ಹೋಗಿದ್ದೇನೆ ಈ ರೀತಿ ಆಗಿಲ್ಲ ಎಂದು ನಮಿತಾ ಹೇಳಿದ್ದಾರೆ.   

7 /7

"ತನ್ನೊಂದಿಗೆ ಅಸಭ್ಯವಾಗಿ ವರ್ತಿಸಿದ ಸಿಬ್ಬಂದಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಬಯಸುವುದಿಲ್ಲ ಎಂದು ನಮಿತಾ ಹೇಳಿದ್ದಾರೆ. ಆದರೆ, ನಮಿತಾ ಅವರ ಹೇಳಿಕೆಗೆ ದೇವಸ್ಥಾನದ ಅಧಿಕಾರಿಗಳು ಪ್ರತಿಕ್ರಿಯಿಸಿ ದೇವಸ್ಥಾನದ ನಿಯಮಾವಳಿಯಂತೆ ಮೇಲ್ಕಂಡ ಅಧಿಕಾರಿಗಳು ಆಕೆಯನ್ನು ಮಾತನಾಡಿಸುವಂತೆ ತಿಳಿಸಿದ್ದರಿಂದ ಆಕೆಯನ್ನು ಕೆಲಕಾಲ ತಡೆದು ನಂತರ ದೇವಸ್ಥಾನ ಪ್ರವೇಶಕ್ಕೆ ಅನುವು ಮಾಡಿಕೊಟ್ಟಿದ್ದಾರೆ ಎಂದು ಹೇಳಿದ್ದಾರೆ..