ಬೆಂಗಳೂರು: ನಟ ಪ್ರೇಮ್‌ ನೆನಪಿರಲಿ ಸಿನಿಮಾ ಮೂಲಕ ಚಿತ್ರರಂಗಗಕ್ಕೆ ಕಾಲಿಟ್ಟರು. ಬಳಿಕ ಸಿನಿಮಾ ರಂಗದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದಾರೆ. ನಟ ಪ್ರೇಮ್‌ ಎಂದರೆ ಇಂದಿಗೂ ಎಷ್ಟೋ ಹುಡುಗಿಯರ ಕ್ರಶ್‌ ಕೂಡ ಆಗಿದ್ದಾರೆ.


COMMERCIAL BREAK
SCROLL TO CONTINUE READING

ಇದೀಗ ಈ ವಾರದ ವಿಕೇಂಡ್‌ ವಿಥ್‌ ರಮೇಶ್‌ ಕಾರ್ಯಕ್ರಮಕ್ಕೆ ನಟ ಪ್ರೇಮ್‌ ಆಗಮಿಸಿ ಸಾಧಕರ ಸೀಟಿಗೆ ಕಳೆ ತಂದರು. ಅವರು ಕಾರ್ಯಕ್ರಮಕ್ಕೆ ಆಗಮಿಸಿ ಜೀವನದ ಏಳು ಬೀಳುಗಳನ್ನು ಹಂಚಿಕೊಂಡರು. 


ಕಾರ್ಯಕ್ರಮದಲ್ಲಿ ಆಗಮಿಸಿರುವ ಒಂದಿಷ್ಟು ಕ್ಷಣಗಳ ಪ್ರೊಮೊ ಹಂಚಿಕೊಂಡಿದ್ದಾರೆ. ಆ ಪ್ರೊಮೊದಲ್ಲಿ ಒಂದಿಷ್ಟು ಅಂಶ ಎಲ್ಲರನ್ನು ಮೂಕವಿಸ್ಮಯನಾಗಿಸಿದೆ. ಕಾರ್ಯಕ್ರಮದ ನಡುವೆ ರಮೇಶ್‌ ಅರವಿಂದ, ಪ್ರೇಮ್‌ ವೈವಾಹಿಕ ಜೀವನದ  ಬಗ್ಗೆ ಕೆಣಕಿದಾಗ ಪ್ರೀತಿ ಪ್ರಣಯದ ಪ್ರಸಂಗಗಳು ಹೊರ ಬಿದ್ದವು.


ಇದನ್ನೂ ಓದಿ: Alia Bhatt: ಕನ್ಪೂಸ್​ ಆಗ್ಬೇಡಿ ಇದು ಐಶ್ವರ್ಯಾ ರೈ ಅಲ್ಲ.. ಆಲಿಯಾ ಭಟ್ ! ಏನಿದು ಅಸಲಿ ಕಥೆ..


ಈಗಾಗಲೇ ತಿಳಿದೆ ಇದೆ ನಟ ಪ್ರೇಮ್‌ ಹಾಗೂ ಅವರ ಪತ್ನಿ ಜ್ಯೋತಿ ಅವರದ್ದು ಲವ್ ಮ್ಯಾರೇಜ್ ಎಂದು. ಈ ಕ್ಯೂಟ್‌ ದಂಪತಿಗಳು ಇಂದಿಗೂ ಎಷ್ಟೋ ಯುವಕರಿಗೆ ಮಾದರಿಯಾಗಿದ್ದಾರೆ. ಅದರ ನಡುವೆ ಈ ಮದ್ದು ಜೋಡಿಗಳ ಕಷ್ಟ ದಿನವು ಎಲ್ಲರ ಕಣ್ಣಂಚಲಿ ನೀರು ತುಂಬಿಸಿದೆ. 


ಕಾರಣ, ಮನುಷ್ಯನಿಗೆ ಕಷ್ಟ ಬರುವುದು ಸಹಜ . ಆದರೆ ಕಷ್ಟಕ್ಕಾಗಿ ತಾಳಿಯನ್ನೇ ಅಡ ಇಡುವುದು ಅಪರೂಪದ ವಿಷಯವಾಗಿದೆ. ಹೌದು, ನಟ ಪ್ರೇಮ್‌ ಒಂದು ಕಾಲದಲ್ಲಿ ಕಷ್ಟಕ್ಕೆ ಬಿದ್ದಾಗ ತನ್ನ ಪತಿಯ ಆರ್ಥಿಕ ನೆರವಿಗೆ ಪ್ರೇಮ್‌ ಪತ್ನಿ ಜ್ಯೋತಿಯವರು ತನ್ನ ತಾಳಿಯನ್ನೇ ಅಡ ಇಟ್ಟಿದ್ದಾರೆಂದು ನಟ ಈ ಕಾರ್ಯಕ್ರಮದಲ್ಲಿ ಹಂಚಿಕೊಂಡಿದ್ದಾರೆ.


ಇದನ್ನೂ ಓದಿ: The Kerala Movie: ದಿ ಕೇರಳ ಸಿನಿಮಾ ಇಷ್ಟವಾದರೇ ಅದುವೇ ನಮಗೆ ದೊಡ್ಡ ಬಹುಮಾನ - ನಿರ್ದೇಶಕ ಸುದೀಪ್ತೋ ಸೇನ್


ಆ ತರಹದ ಕೆಟ್ಟ ದಿನಗಳನ್ನು ಅವರೆಂದು ನೀರಿಕ್ಷಿಸಿರಿಲ್ಲ ಎಂದು ಕಷ್ಟ ದಿನಗಳನ್ನು ನೆನೆದು ದುಖಿಃತರಾದರು. ಆದರೆ ಇಂದು ಈ ಜೋಡಿ ದಾಂಪತ್ಯ ಜೀವನವು ಎಷ್ಟೋ ಜನರಿಗೆ ಮಾದರಿಯಾಗಿದೆ. ಕಾರಣ ಅಷ್ಟೊಂದು ಅನನ್ಯತೆಯಿಂದ ಬದುಕಿ ಬಾಳುತ್ತಿದ್ದಾರೆ. ಅದೇನೆ ಇರಲಿ  ವಿಕೇಂಡ್‌ ವಿಥ್‌ ಕಾರ್ಯಕ್ರಮದಲ್ಲಿ ಪ್ರೇಮ್‌ ಬಂದಿರುವ ಪ್ರೊಮೋ ಮಾತ್ರ ಸಖತ್‌ ಕ್ಯೂರಿಯಾಸಿಟಿ ಮೂಡಿಸಿದೆ. ಅವರ ಇನ್ನಷ್ಟು ವಿಷಯ ಕೇಳಲು ಪ್ರೇಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ. https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.