ಬೆಂಗಳೂರು: ಕಲಾತಪಸ್ವಿ ರಾಜೇಶ್‌ ಇಂದು ನಮ್ಮೊಡನಿಲ್ಲ.ರಾಜೇಶ್‌ ಅವರ ನಿಧನದ ಸುದ್ದಿಯನ್ನು ಕನ್ನಡಿಗರು ಅರಗಿಸಿಕೊಳ್ಳಲು ಆಗುತ್ತಿಲ್ಲ. ಅಷ್ಟಕ್ಕೂ ಮಹಾನ್‌ ನಟ ಮತ್ತೊಬ್ಬ ಮಹಾನ್‌ ನಟನ ಜೊತೆಗೆ ಅತ್ಯಂತ ಒಡನಾಟದಿಂದ ಇದ್ದರು. ಅಂದಹಾಗೆ ನಾವಿಲ್ಲಿ ಹೇಳ್ತಿರೋದು‌ ವರನಟ ರಾಜ್‌ಕುಮಾರ್‌ ಹಾಗೂ ಕಲಾತಪಸ್ವಿ ರಾಜೇಶ್ ಅವರ ಸ್ನೇಹದ ಬಗ್ಗೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ : ಕಲಾ ತಪಸ್ವಿ’ ರಾಜೇಶ್ ನಿಧನ: ಸಿಎಂ ಬೊಮ್ಮಾಯಿ ಸೇರಿ ಗಣ್ಯರ ಸಂತಾಪ


ಕೋಟಿ ಕೋಟಿ ಅಭಿಮಾನಿಗಳ ಪಾಲಿನ ಪ್ರೀತಿಯ ವರನಟ ರಾಜ್‌ಕುಮಾರ್‌ ಹಾಗೂ ಕನ್ನಡಿಗರ ಪಾಲಿನ ಕಲಾತಪಸ್ವಿ ರಾಜೇಶ್‌ ಅವರ ಒಡನಾಟ ಬಹುದೊಡ್ಡದು. ಹತ್ತಾರು ಸಿನಿಮಾಗಳಲ್ಲಿ ಒಟ್ಟಿಗೆ ಬಣ್ಣ ಹಚ್ಚಿದ್ದ ಈ ಇಬ್ಬರೂ ನಟರು ಸಾಕಷ್ಟು ಒಡನಾಟದಿಂದ ಇದ್ದವರು. ಹಿರಿಯ ನಟ ರಾಜೇಶ್‌ ಅವರೇ ರಾಜ್‌ಕುಮಾರ್‌ ಅವರ ಬಗ್ಗೆ ಸಂದರ್ಶನ ಒಂದರಲ್ಲಿ ಮನಸ್ಸು ಬಿಚ್ಚಿ ಮಾತನಾಡಿದ್ದರು.


ಇದನ್ನೂ ಓದಿ : Petrol Price Today : ಗರಿಷ್ಠ ಮಟ್ಟದಲ್ಲಿ ತೈಲ ಬೆಲೆ : ಇಲ್ಲಿದೆ ಇಂದಿನ ಪೆಟ್ರೋಲ್-ಡೀಸೆಲ್ ಬೆಲೆ!


ಕನ್ನಡಿಗರ ಪ್ರೀತಿ..!


ಕನ್ನಡಿಗರ ಮನದಲ್ಲಿ ನಟ ರಾಜೇಶ್‌ ಹೆಸರು ಎಂದಿಗೂ ಮರೆಯಾಗದು. ಏಕೆಂದರೆ ತಮ್ಮ ಸಿನಿಮಾಗಳ ಮೂಲಕ ಹಿರಿಯ ನಟ ರಾಜೇಶ್‌ ನೀಡುತ್ತಿದ್ದ ಸಾಮಾಜಿಕ ಸಂದೇಶ, ಅವರ ಅಭಿನಯ ಎಂದೆಂದಿಗೂ ಕನ್ನಡಿಗರ ಮನದಿಂದ ಮರೆಯಾಗಲು ಸಾಧ್ಯವೇ ಇಲ್ಲ. ಮತ್ತೊಂದ್ಕಡೆ ಡಾ. ರಾಜ್‌ಕುಮಾರ್‌ ಅವರ ಜೊತೆಗೂ ಅತ್ಯಂತ ಸ್ನೇಹದಿಂದ ಇದ್ದ ಕಲಾತಪಸ್ವಿ ರಾಜೇಶ್‌, ಹಲವು ವಿಚಾರಗಳನ್ನು ನಾನು ರಾಜ್‌ಕುಮಾರ್‌ ಅವರಿಂದಲೇ ಕಲಿತಿದ್ದು ಎಂದು ಹಿಂದೆ ಮನಃಪೂರ್ವಕವಾಗಿ ಹೇಳಿಕೊಂಡಿದ್ದರು. ಅಲ್ಲದೆ ವರನಟನನ್ನು ಹೊಗಳಿದ್ದರು ಕೂಡ.


ಇದನ್ನೂ ಓದಿ : LIC ಈ ಪ್ಲಾನ್ ನಲ್ಲಿ ₹150 ಠೇವಣಿ ಇಡಿ : ನಿಮ್ಮ ಮಗು ಮಿಲಿಯನೇರ್ ಆಗಿ ಮಾಡಿ


ದುರಾದೃಷ್ಟವಶಾತ್‌ ಇಬ್ಬರೂ ಮಹಾನ್‌ ನಟರು ನಮ್ಮೆಲ್ಲರಿಂದ ದೂರ ಹೋಗಿದ್ದಾರೆ. ವರನಟ ಡಾ.ರಾಜ್‌ಕುಮಾರ್‌ ಹಾಗೂ ಕಲಾತಪಸ್ವಿ ರಾಜೇಶ್‌ ಕನ್ನಡಿಗರನ್ನು ಬಿಟ್ಟು ಹೋಗಿದ್ದಾರೆ ನಿಜ. ಆದರೆ ಅವರು ಮಾಡಿದ ಪಾತ್ರಗಳು ಹಾಗೂ ಅವರ ಸಿನಿಮಾಗಳ ಮೂಲಕ ಕನ್ನಡಿಗರಿಗೆ ಕಲಿಸಿಕೊಟ್ಟ ಪಾಠಗಳು ಎಂದೆಂದಿಗೂ ಮರೆಯಾಗುವುದಿಲ್ಲ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.