ಟಾಲಿವುಡ್‌ನ ಕ್ಯೂಟ್‌ ಕಪಲ್ಸ್‌ ಅಂತಾ ಕರೆಸಿಕೊಂಡಿದ್ದ ನಟಿ ಸಮಂತಾ (Samantha) ಹಾಗೂ ನಾಗಚೈತನ್ಯರ (Nagachaitanya) ವೈವಾಹಿಕ ಜೀವನ ಮುರಿದುಬಿದ್ದಿದ್ದು ಹಳೇ ಸುದ್ದಿ. ಆದ್ರೆ ಇಬ್ಬರ ಡಿವೋರ್ಸ್‌ ನಂತರ ಒಂದೊಂದೇ ಗಾಸಿಪ್‌ ಸೃಷ್ಟಿಯಾಗುತ್ತಿದ್ದು, ಇದೀಗ ಇಂತಹದ್ದೇ ಮತ್ತೊಂದು ಸುದ್ದಿ ತಲ್ಲಣ ಮೂಡಿಸಿದೆ. ಹಾಗಾದ್ರೆ ಯಾವುದು ಆ ಸುದ್ದಿ..? ಸಮಂತಾ, ನಾಗಚೈತನ್ಯ ಫ್ಯಾನ್ಸ್‌ಗೆ ಎದುರಾಗಿರೋ ಶಾಕ್‌ ಆದರೂ ಏನು..? ಮುಂದೆ ಓದಿ...


COMMERCIAL BREAK
SCROLL TO CONTINUE READING

ಅದು ಇಡೀ ಭಾರತವೇ ತಿರುಗಿ ನೋಡುವಂತಿದ್ದ ಮದುವೆ. ಅಭಿಮಾನಿ ಬಳಗಕ್ಕೆ ಕನಸು ನನಸಾದ ಘಳಿಗೆ. ಟಾಲಿವುಡ್‌ ಮಂದಿಗೆ ಎಂದೂ ಮರೆಯಲಾಗದ ಸಂದರ್ಭ ಅದು. ಅಂದಹಾಗೆ ನಾವು ಹೇಳ್ತಿರೋದು ನಟಿ ಸಮಂತಾ ಹಾಗೂ ನಾಗಚೈತನ್ಯ ಮದುವೆಯ ಬಗ್ಗೆ. ಹೀಗೆ ದೇಶಾದ್ಯಂತ ಹೈಪ್‌ ಕ್ರಿಯೇಟ್‌ ಮಾಡಿದ್ದ ನಟಿ ಸಮಂತಾ ಹಾಗೂ ನಾಗಚೈತನ್ಯ ವೈವಾಹಿಕ ಜೀವನ ಮುರಿದು ಬಿದ್ದಿರೋದು ಹಳೇ ವಿಷಯ. ಆದ್ರೆ ಡಿವೋರ್ಸ್‌ ಬಳಿಕ ಇಬ್ಬರ ಬಾಳಲ್ಲಿ ಒಂದಲ್ಲಾ ಒಂದು ತಲ್ಲಣ ಏಳುತ್ತಲೇ ಇದೆ.


ಶಾಕಿಂಗ್‌ ಘಟನೆ:
ಹೌದು, ಅದು 2017ರ ಅಕ್ಟೋಬರ್‌ 7. ಅಂದು ನಟಿ ಸಮಂತಾ ಹಾಗೂ ನಾಗಚೈತನ್ಯ ಸಪ್ತಪದಿ ತುಳಿದಿದ್ದರು. ಇಬ್ಬರ ಜೀವನ ಸುಮಾರು 4 ವರ್ಷಗಳ ಕಾಲ ಹಾಯಾಗಿತ್ತು ಎನ್ನಬಹುದು. ಆದ್ರೆ  2021ರ ಅಕ್ಟೋಬರ್‌ ನಲ್ಲಿ ಒಂದು ಶಾಕಿಂಗ್‌ ಸುದ್ದಿ ಹೊರಬಿದ್ದಿತ್ತು. ಅದೇನಂದ್ರೆ ಸಮಂತಾ, ನಾಗಚೈತನ್ಯರ ವೈವಾಹಿಕ ಜೀವನ ಮುಗಿದ ಅಧ್ಯಾಯ ಅಂತಾ. ಇದಕ್ಕೂ ಮೊದಲೇ ಗಾಸಿಪ್‌ ಹರಿದಾಡಿದ್ದರೂ ಸುದ್ದಿ ಸ್ಪಷ್ಟವಾಗಿರಲಿಲ್ಲ. ಆದರೆ ಆ ಸುದ್ದಿ ನಿಜವಾಗಿದ್ದು 2021 ಅಕ್ಟೋಬರ್‌ 2ರಂದು. ಹೀಗೆ ಜನುಮ ಜನುಮದಲ್ಲೂ ಒಂದಾಗಿರ್ತೀವಿ ಅಂತಾ ಕನಸು ಕಂಡಿದ್ದ ಸಮಂತಾ ಹಾಗೂ ನಾಗಚೈತನ್ಯ ನಾನೊಂದು ತೀರ, ನೀನೊಂದು ತೀರ ಅಂತಾ ಹೊರಟುಬಿಟ್ಟರು.


ಇದನ್ನೂ ಓದಿ- Samantha: ತಮ್ಮ ಹೊಸ ಸಿನಿಮಾ ಬಗ್ಗೆ ಸಮಂತಾ ಹೇಳಿದ್ದೇನು ಗೊತ್ತಾ..?


ಫ್ಯಾನ್ಸ್‌ ಗೆ ಬೇಸರ: 
ಸಮಂತಾ, ನಾಗಚೈತನ್ಯ ವಿಚ್ಛೇದನ (Samantha Nagachaitanya Divorce) ಪಡೆದ ಬಳಿಕ ಹಲವು ಘಟನೆಗಳು ನಡೆದವು. ಅದರಲ್ಲೂ ಪ್ರಮುಖವಾಗಿ ಜೀವನಾಂಶದ ವಿಚಾರ ಕೂಡ ಹಲವು ಗಾಸಿಪ್‌ ಗಳಿಗೆ ಗುರಿಯಾಗಿತ್ತು. ಇದೆಲ್ಲವೂ ಸರಿ ಹೋಗುವ ವೇಳೆಗೆ ಮತ್ತಷ್ಟು ವದಂತಿಗಳು ಇಬ್ಬರ ಅಭಿಮಾನಿಗಳಿಗೆ ಬೇಸರ ತರಿಸಿತ್ತು. ಆದ್ರೆ ಇದೀಗ ಮತ್ತೆ ಅಂತಹದ್ದೇ ಶಾಕಿಂಗ್‌ ಸುದ್ದಿ ಹೊರಬಿದ್ದಿದೆ.


ಮದುವೆ ಸೀರೆ ವಾಪಸ್..?
ಅಂದಹಾಗೆ ವೈವಾಹಿಕ ಜೀವನ ಮುರಿದು ಬಿದ್ದ ಮೇಲೆ ಸ್ನೇಹಿತರಾಗಿ ಉಳಿಯುತ್ತೇವೆ ಎಂದು ಇಬ್ಬರೂ ಅಂದುಕೊಂಡಿದ್ದರು. ಆದರೆ ಅಂತಹ ಯಾವುದೇ ಲಕ್ಷಣ ಕಂಡುಬರುತ್ತಿಲ್ಲ. ಇದೀಗ ಸಮಂತಾ ಮತ್ತೊಂದು ಕಠಿಣ ನಿರ್ಧಾರ ಕೈಗೊಂಡಿದ್ದು, ತಮ್ಮ ಹಾಗೂ ನಾಗಚೈತನ್ಯ ಮದುವೆಯಲ್ಲಿ‌ ಅಕ್ಕಿನೇನಿ ಕುಟುಂಬಸ್ಥರು (Akkineni Family) ನೀಡಿದ್ದ ಸೀರೆಯನ್ನೇ ವಾಪಸ್‌ ನೀಡಿದ್ದಾರಂತೆ. ಹೀಗೆ ಸಮಂತಾ ತಮ್ಮ ಮದುವೆ ಸೀರೆಯನ್ನು ನಾಗಚೈತನ್ಯ ಮನೆಯವರಿಗೆ ಮರಳಿಸಿರುವುದು ಸಂಚಲನ ಸೃಷ್ಟಿಮಾಡಿದೆ. ಈ ವದಂತಿ ಅಭಿಮಾನಿಗಳ ಮನಸಿಗೆ ಮತ್ತಷ್ಟು ಘಾಸಿ ಮಾಡಿದೆ.


ಕುಟುಂಬಕ್ಕೆ ಬೇಸರ:
ಒಂದು ಕಡೆ ಡಿವೋರ್ಸ್‌ ಬಳಿಕ ಸಮಂತಾ (Samantha) ಹಾಗೂ ನಾಗಚೈತನ್ಯ ತಮ್ಮ ತಮ್ಮ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇದನ್ನ ಬಿಟ್ಟು ಬೇರೆ ಯಾವುದೇ ವಿಚಾರಕ್ಕೂ ಅವರು ತಲೆಕೆಡಿಸಿಕೊಳ್ಳುತ್ತಿಲ್ಲ. ಆದರೆ ಸಮಂತಾ ಮದುವೆಯ ಸೀರೆಯನ್ನೇ ವಾಪಸ್‌ ಕೊಟ್ಟಿರುವುದು ನಾಗಚೈತನ್ಯ ಕುಟುಂಬಕ್ಕೆ ಬೇಸರ ಮೂಡಿಸಿದೆ ಎನ್ನಲಾಗಿದೆ. ಏಕೆಂದರೆ ಮುಂದೆ ಎಂದಾದರೂ ಸಮಂತಾ ಹಾಗೂ ನಾಗಚೈತನ್ಯ ಮುನಿಸು ಮರೆತು ಒಂದಾಗಬಹುದು ಎಂಬ ನಿರೀಕ್ಷೆ ಇತ್ತು. ಇದೆಲ್ಲವೂ ಈಗ ಹುಸಿಯಾಗುತ್ತಿದ್ದು, ಬೇಸರ ಮೂಡಿಸುತ್ತಿದೆ.


ಇದನ್ನೂ ಓದಿ- #ArabicKuthuChallenge:ವಿಮಾನ ನಿಲ್ದಾಣದಲ್ಲಿ 'ಹಲಮಿಟಿ ಹಬಿಬೋ' ಹಾಡಿಗೆ ಸಮಂತಾ ಸ್ಟೆಪ್ಸ್.!


ಒಟ್ಟಾರೆ ಹೇಳೋದಾದ್ರೆ ದಿನದಿಂದ ದಿನಕ್ಕೆ ಸಮಂತಾ, ನಾಗಚೈತನ್ಯ ನಡುವಿನ ಬಿರುಕು ದೊಡ್ಡದಾಗುತ್ತಿರುವಂತೆ ಕಾಣುತ್ತಿದೆ. ಆದರೂ ಈ ಕುರಿತು ಯಾವುದೇ ಹೇಳಿಕೆ ನೀಡದ ಸಮಂತಾ, ನಾಗಚೈತನ್ಯ ಜೋಡಿ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಒಂದ್ಕಡೆ ನಾಗಚೈತನ್ಯ 'ಬಂಗಾರ್‌ ರಾಜು'‌ ಚಿತ್ರದ ಬಳಿಕ ಮತ್ತೊಂದು ಸಿನಿಮಾ ಒಪ್ಪಿಕೊಂಡಿದ್ದಾರೆ. ಇನ್ನೊಂದೆಡೆ ಸಮಂತಾ ಕೂಡ ಸಖತ್‌ ಬ್ಯುಸಿ. ಇತ್ತೀಚೆಗೆ ಸಮಂತಾ ಅಭಿನಯದ 'ಶಾಕುಂತಲಂ' ಚಿತ್ರದ ಪೋಸ್ಟರ್‌ ಸದ್ದು ಮಾಡಿತ್ತು. ಹಾಗೇ 'ಯಶೋಧ' ಸಿನಿಮಾದಲ್ಲೂ ಸಮಂತಾ ಬ್ಯುಸಿಯಾಗಿದ್ದು, ಯಾವ ವದಂತಿಗೂ ಉತ್ತರ ನೀಡುತ್ತಿಲ್ಲ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.