BBKS 9 : ಬಿಗ್‌ಬಾಸ್‌ ಮನೆಯಿಂದ ಹೊರಗೆ ಹೊಗಲು ಆರ್ಯವರ್ಧನ್‌ ಗುರೂಜಿ ನಿರ್ಧರಿಸಿದ್ದಾರೆ. ಅಲ್ಲದೆ, ದೊಡ್ಮನೆಯಿಂದ ಹೊರ ಹೊಗಲು ಆಪ್ಷನ್‌ ಇದ್ರೆ ಕಳುಹಿಸಿಕೊಡಿ ಎಂದು ಕೇಳಿಕೊಂಡಿದ್ದಾರೆ. ಇದಕ್ಕೆ ಕಾರಣ ಏನಿರಬಹುದು ಅಂತಾ ಅವರ ಅಭಿಮಾನಿಗಳು ತಲೆಕೆಡಿಸಿಕೊಂಡಿದ್ದಾರೆ.


COMMERCIAL BREAK
SCROLL TO CONTINUE READING

ಬಿಗ್‌ಹೌಸ್‌ ಕ್ಯಾಪ್ಟನ್ ಆರ್ಯವರ್ಧನ್‌ ಗುರೂಜಿ ಮನಸ್ಸಿಗೆ ನೋವಾದಂತೆ ಕಾಣುತ್ತಿದೆ. ಅದಕ್ಕಾಗಿ ಅವರು ಡೊಮ್ಮನೆಯಿಂದ ಹೊರ ಹೋಗುವ ಮಾತನಾಡಿದ್ದಾರೆ. ʼಬೆಸ್ಟ್ ಪರ್ಫಾಮೆನ್ಸ್ʼ ಮೆಡಲ್ ಪಡೆದರೂ ಗುರೂಜಿಗೆ ಮನೆಯಿಂದ ಹೊರ ಹೋಗುವ ಮನಸ್ಸಾದ್ರೂ ಹೇಗೆ ಬಂತು ಅಂತ ಅವರ ಅಭಿಮಾನಿಗಳು ಯೋಚನೆಯಲ್ಲಿ ಮುಳುಗಿದ್ದಾರೆ. ʼಆಪ್ಷನ್ ಇದ್ದರೆ ನನ್ನ ಮನೆಯಿಂದ ಹೊರಗೆ ಕಳುಹಿಸಿಕೊಡಿ.. ಇಲ್ಲಾಂದ್ರೆ ಬೇಕು ಅಂತ ಡಲ್ ಆಗಿ ಇರ್ತೀನಿʼ ಎಂದು ರೂಪೇಶ್ ಶೆಟ್ಟಿ ಬಳಿ ಆರ್ಯವರ್ಧನ್ ಗುರೂಜಿ ಮನದಾಳದ ಮಾತು ಹೇಳಿದ್ದಾರೆ.


ಇದನ್ನೂ ಓದಿ: ಲಿವಿಂಗ್ ಟು ಗೆದರ್ ಗೆಳತಿ ಜೊತೆ ಮತ್ತೊಬ್ಬನ ಸ್ನೇಹ.. ಕೊಲೆಯಲ್ಲಿ ಅಂತ್ಯ.!


ಆರ್ಯವರ್ಧನ್‌ ಗುರೂಜಿ ಇಂತಹ ಮಾತುಗಳನ್ನು ರೂಪೇಶ್‌ ಶೆಟ್ಟಿ ಮುಂದೆ ಹೇಳಿದ್ದಾರೆ. ಬಿಗ್‌ಬಾಸ್‌ಗೆ ಆಪ್ಷನ್ ಇದ್ದರೆ ನನ್ನನ್ನ ಕಳುಹಿಸಿಕೊಡಿ.. ಅಂತ ಕೇಳ್ತೀನಿ.. ಅಂತ ಗುರೂಜಿ ಹೇಳುತ್ತಾರೆ. ಅದಕ್ಕೆ ರೂಪೇಶ್‌ ಏಕೆ.. ಏನಾಗುತ್ತಿದೆ.. ಎಂದು ಕೇಳಿದ್ರು. ಆಗ ಗುರೂಜಿ ಈ ವಾರ ಬಿಗ್‌ಬಾಸ್‌ಗೆ ಕೇಳ್ತೀನಿ. ಆಪ್ಷನ್ ಇದ್ರೆ ಹೊರಗೆ ಕಳಿಸುವಂತೆ.. ಅವರು ಇಲ್ಲ ಅಂದ್ರೆ ಇಲ್ಲೆ ಇರ್ತೀನಿ ಎಂದ್ರು. ಇದಕ್ಕೆ ರೂಪೇಶ್‌ ಹೊರಗೆ ಹೋಗೋಕೆ ಅವಕಾಶ ಇಲ್ಲಾಂದ್ರೆ ಡಲ್ ಆಗಿ ಇರ್ತೀರಾ..? ಎಂದು ಪ್ರಶ್ನೆ ಮಾಡಿದ್ದಾರೆ. ಆಗ ಗುರೂಜಿ ಹೌದು.. ಬೇಕು ಅಂತಾನೆ ಡಲ್ ಆಗ್ತೀನಿ ಎಂದಿದ್ದಾರೆ. ರೂಪೇಶ್ ಶೆಟ್ಟಿ ಕಾರಣ ಬೇಕಲ್ವಾ? ಹೊರಗೆ ಹೋಗೋಕೆ, ನಿಮ್ಮ ಅಭಿಮಾನಿಗಳಿಗೆ ಬೇಜಾರಾಗಲ್ವಾ? ಎಂದಿದ್ದಾರೆ. ಆಗ ಗುರೂಜಿ ಇಷ್ಟು ದಿನ ಇದ್ದಿನಿ ಅಲ್ವಾ ಅವರಿಗೆ ಖುಷಿಯಾಗಿರುತ್ತೆ. ಯಾಕೆ ಇಲ್ಲಿ ಎಂಜಾಯ್ ಮಾಡೋಕೆ ಆಗ್ತಿಲ್ವಾ ಗುರೂಜಿ ಎಂದು ರೂಪೇಶ್‌ ಕೇಳಿದ್ದಾನೆ. ಇಲ್ಲಿ ನನಗೆ ವಾಲ್ಯೂ ಇಲ್ಲ ಎಂದು ಗುರೂಜಿ ಅಸಮಾಧಾನವಾಗಿ ಮಾತನಾಡಿದ್ದಾರೆ.


ಹೌದು ಆರ್ಯವರ್ಧನ್ ಗುರೂಜಿಗೆ ಬಹಳ ಬೇಸರವಾಗಿದೆ. ಅದಕ್ಕೆ ಕಾರಣ ಅವರ ಮೇಲೆ ಮಾಡಿದ್ದ ಪ್ರಾಂಕ್. ದೆವ್ವದ ಪ್ರಾಂಕ್‌ನಿಂದಾಗಿ ಗುರೂಜಿ ಬಾತ್‌ರೂಮ್‌ನಲ್ಲಿ ಬಿಳುವಂತಾಯಿತು. ಅಲ್ಲದೆ, ರಾಕೇಶ್‌ ಫಿಟ್ಸ್ ಪ್ರಾಂಕ್‌ ಅಂತೂ ಗುರೂಜಿಗೆ ಗಾಬರಿತರಿಸಿತ್ತು. ಇನ್ನೂ ಕ್ಯಾಪ್ಟನ್‌ ಆಯ್ಕೆ ವಿಚಾರದ ವೇಳೆ ಗುರೂಜಿ ಮೇಲೆ ನಡೆದ ಪ್ರಾಂಕ್‌ನಿಂದ ಬೇಸರಗೊಂಡಿದ್ದರು. ಸದ್ಯ ಇದೇ ಗುರೂಜಿ ಮನೆ ಬಿಟ್ಟು ಹೋಗಲು ಕಾರಣ ಇರಬೇಕು ಎನ್ನುವುದು ನೆಟ್ಟಿಗರ ಅಭಿಪ್ರಾಯ.https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.