Physical Attack Between Contestants In BBK: ಬಿಗ್‌ಬಾಸ್‌ ಕನ್ನಡ ಸೀಸನ್‌ 10 ಕಾರ್ಯಕ್ರಮದಲ್ಲಿ ಒಂಬತ್ತನೇ ವಾರ ಸ್ಪರ್ಧಿಗಳನ್ನು ಎರಡು ತಂಡಗಳಾಗಿ ವಿಭಜಿಸಲಾಗಿದ್ದು, ಒಂದು ತಂಡ ಗಂಧರ್ವರಾಗಿದ್ದರೆ, ಇನ್ನೊಂದು ತಂಡ ರಾಕ್ಷಸರಾಗಿದ್ದಾರೆ. ಈ ಕಾಲ್ಪನಿಕ ಬಿಗ್‌ಬಾಸ್‌ ಲೋಕಕ್ಕೆ ಕ್ಯಾಪ್ಟನ್ ಸ್ನೇಹಿತ್ ಒಡೆಯನಾಗಿದ್ದು, ಸಂಗೀತಾ ನೇತೃತ್ವದ ತಂಡ ರಾಕ್ಷಸರಾಗಿದ್ದರೇ, ಇತ್ತ ವರ್ತೂರು ಸಂತೋಷ್‌ ನೇತೃತ್ವದ ತಂಡ ಗಂಧರ್ವರಾಗಿದ್ದಾರೆ. ಈ ಚಟುವಟಿಕೆ ವೇಳೆ ವಿನಯ್‌  ಹಾಗೂ ಕಾರ್ತಿಕ್‌ ಮಧ್ಯೆ ತಳ್ಳಾಟ, ನೂಕಾಟ ನಡೆದಿದ್ದರೇ, ಇನ್ನೊಂದು ಕಡೆ ನಮ್ರತಾ ಹಾಗೂ ಸಂಗೀತಾ ಮಧ್ಯೆಯೂ ಫಿಸಿಕಲ್ ಅಟ್ಯಾಕ್ ಆಯ್ತು. 


COMMERCIAL BREAK
SCROLL TO CONTINUE READING

ಫಿಸಿಕಲ್ ಅಟ್ಯಾಕ್ ಹೆಚ್ಚಾಗಿದ್ರಿಂದ ಆಟವನ್ನ ಸ್ವತಃ ಬಿಗ್‌ಬಾಸ್‌ ನಿಲ್ಲಿಸಿದ, ಬಳಿಕ ಯಾವುದೇ ನಿರ್ಧಾರ ತೆಗೆದುಕೊಳ್ಳದ ಸ್ನೇಹಿತ್‌ಗೆ ಸಂಗೀತಾ ಹಾಗೂ ತಂಡ ಕಟುವಾಗಿ ಟೀಕಿಸಿ, "ನೀವು ಯಾವ ಸೀಮೆ ಕ್ಯಾಪ್ಟನ್" ಅಂತ ಛೀಮಾರಿ ಹಾಕಿದ್ದಾರೆ. ರಾಕ್ಷಸರು ಹಾಗೂ ಗಂಧರ್ವರಿಗೆ ಬಾವುಟದ ಚಟುವಟಿಕೆಯನ್ನ ಬಿಗ್‌ಬಾಸ್‌ ನೀಡಿದ್ದು, ಟಾಸ್ಕ್ ಮುಗಿಯುವ ಹೊತ್ತಿಗೆ ಯಾರ ಬಾವುಟ ಹೆಚ್ಚು ಇರುತ್ತದೋ.. ಅವರು ಗೆದ್ದಂತೆ ಎಂದು ಘೋಷಿಸಿದರು. ಟಾಸ್ಕ್ ವೇಳೆ ತಮ್ಮ ಬಾವುಟಗಳನ್ನು ಕಾಪಾಡಿಕೊಳ್ಳುವಲ್ಲಿ, ಎದುರಾಳಿ ತಂಡದ ಬಾವುಟಗಳನ್ನು ಕದಿಯುವಲ್ಲಿ/ ನಾಶ ಪಡಿಸುವ ವೇಳೆ ಎರಡೂ ತಂಡಗಳ ಮಧ್ಯೆ ಮಾರಾಮಾರಿ ನಡೆದಿದ್ದು, ಆಗ ವಿನಯ್ "ಕಾಲುಗಳನ್ನ ಲಾಕ್‌ ಮಾಡಿಟ್ಟುಕೋ.. ಉಸಿರಾಡೋಕೆ ಆಗಬಾರದು. ಎಷ್ಟು ಗಟ್ಟಿಯಾಗುತ್ತೋ, ಅಷ್ಟು ಗಟ್ಟಿಯಾಗಿ ಹಿಡಿದಿಟ್ಟುಕೋ 30 ಸೆಕೆಂಡ್ಸ್‌" ಎಂದು ನಮ್ರತಾಗೆ ಹೇಳಿಕೊಟ್ಟರು.


ಇದನ್ನೂ ಓದಿ: BBK 10: "ಬಿಕ್ಷೆ ತಗೊಂಡ್‌ ಕ್ಯಾಪ್ಟನ್‌ ಆಗಿದ್ದೀಯಾ.." ಎಂದ ಸಂಗೀತಾ: ರೊಚ್ಚಿಗೆದ್ದು ಏಕವಚನದಲ್ಲಿ ಮಾತನಾಡಿದ ಸ್ನೇಹಿತ್!


ಮಾರಾಮಾರಿ ನಡೆಯುತ್ತಿದ್ದ ವೇಳೆ "ಉಸ್ತುವಾರಿಯಾಗಿ ನೀವು ಏನಾದರೂ ನಿರ್ಧಾರ ತಗೊಳ್ಳಿ.." ಎಂದು ತನಿಷಾ ಹೇಳುತ್ತಲೇ ಇದ್ದಾಗ, "ಕುಸ್ತಿ ಮಾಡಬೇಡಿ. ಬಾವುಟಗಳನ್ನ ಕಿತ್ತುಕೊಳ್ಳಿ"  ಸ್ನೇಹಿತ್ ಎಂದರು.  ಆ ವೇಳೆ ತನಿಷಾ ಸ್ವಲ್ಪ ಜೋರಾದಾಗ, ಸ್ನೇಹಿತ್‌ "ನಂಗೊತ್ತು ನಾನು ಏನು ಮಾಡಬೇಕಂತ" ಎಂದರು. ಇತ್ತ ಕಾರ್ತಿಕ್ - ವಿನಯ್‌ ನಡುವಿನ ಮಾರಾಮಾರಿ ತಾರಕಕ್ಕೇರಿದಾಗ, "ಇಬ್ಬರಿಗೂ ಹರ್ಟ್ ಆಗುತ್ತೆ. ಉಸ್ತುವಾರಿ ಏನ್ಮಾಡ್ತಿದ್ದೀರಾ?" ಎಂದು ತನಿಷಾ ಕಿರುಚಿದರು. ಆಗ, ಸ್ನೇಹಿತ್ "ಬಾವುಟ.. ಇದು ಕುಸ್ತಿ ಅಲ್ಲ" ಎಂದಷ್ಟೇ ಸ್ನೇಹಿತ್ ಹೇಳಿದರು. ಅದೇ ವೇಳೆ ತನಿಷಾ "ನಾದರೂ ನಿರ್ಧಾರ ಮಾಡಿ ಇಲ್ಲಾಂದರೆ ಇದು ದೊಡ್ಡದಾಗುತ್ತೆ" ಎಂದು ಹೇಳಿದಾಗ ಸ್ನೇಹಿತ್‌ ಸುಮ್ಮನೆಯೇ ಇದ್ದರು.


ಫಿಸಿಕಲ್ ಅಟ್ಯಾಕ್ ಜಾಸ್ತಿಯಾದಾಗ, ಮಧ್ಯಪ್ರವೇಶಿಸಿದ ಬಿಗ್‌ಬಾಸ್‌ "ಆಟವನ್ನ ನಿಲ್ಲಿಸಿ" ಎಂದು ಘೋಷಿಸಿದರೂ, ಕಾರ್ತಿಕ್, ಸಂಗೀತಾ ಅವರನ್ನ ವಿನಯ್ ಕೆಣಕುತ್ತಲೇ ಇದ್ದರು. ಆಗ ಕಾರ್ತಿಕ್ ನನ್ನ ಕುತ್ತಿಗೆ ಹಿಡಿದಿದ್ದ. ಉಸ್ತುವಾರಿಯಾಗಿ ಏನ್ಮಾಡ್ತಿದ್ದೀರಾ? ಯಾವ ಸೀಮೆ ಉಸ್ತುವಾರಿ ನೀವು? ಎಂದರು. ತನಿಷಾ  ಸಹ ಫಿಸಿಕಲ್ ಅಟ್ಯಾಕ್ ಆಗ್ತಿರೋವಾಗ ನಿಲ್ಲಿಸಬೇಕಿತ್ತು ಎಂದು ಸ್ನೇಹಿತ್‌ ಹೇಳಿದರು. ಅದಕ್ಕೆ ಸ್ನೇಹಿತ್ ಇಬ್ಬರೂ ಅಗ್ರೆಸ್ಸಿವ್ ಆಗಿ ಆಡಿದ್ರಿ. ಒಬ್ಬರು ಮಾತ್ರ ಅಲ್ಲ ಎಂದಿದಕ್ಕೆ ತನಿಷಾ ಒಬ್ಬರಿಗೆ ನೋವು ಆಗ್ತಿರೋವಾಗ ಹೇಗೆ ನೋಡಿಕೊಂಡು ಸುಮ್ಮನೆ ಇರ್ತೀರಾ? ತಗೊಳ್ಬೇಕಾದ ನಿರ್ಧಾರಗಳನ್ನ ತಗೊಳ್ಬೇಕಾದ ಸಮಯದಲ್ಲಿ ತಗೊಳ್ಲಿಲ್ಲ ಅಂದ್ರೆ? ಕ್ಯಾಪ್ಟನ್ ಆಗೋಕೆ ಲಾಯಕ್ಕಿಲ್ಲ.! ಸುಮ್ಮನೆ ನಿಂತುಕೊಂಡರೆ ಅರ್ಥ ಏನು? ಇಬ್ಬರಿಗೂ ಹರ್ಟ್‌ ಆಗುತ್ತಿದೆ. ಒಬ್ಬರಿಗೆ ಮಾತ್ರ ಅಲ್ಲ ಎಂದರು. ಆಗ ಸಂಗೀತಾ ಕೂಡ ರಕ್ತ ಸುರಿಸಬೇಕಾ? ಇದೇನಾ ನಿಮಗೆ ಬೇಕಾಗಿರೋದು? ಸೋಲುತ್ತಿದ್ದಾಗ ಮಾತ್ರ ಉಸ್ತುವಾರಿ ಮಾಡೋಕೆ ಬರ್ತಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ