Bigg Boss Kannada Season 10 : ಬಿಗ್​ ಬಾಸ್ ಕನ್ನಡ ಸೀಸನ್‌ 10 ರ ಈ ವಾರದ ವೀಕೆಂಡ್‌ ಗೊಂದಲದ ಗೂಡಾಯಿತು. ಸೂಪರ್ ಸಂಡೇ ವಿತ್ ಸುದೀಪ್​ ಸಂಚಿಕೆಯಲ್ಲಿ ಎಲಿಮಿನೇಷನ್‌ ಆಗಲೇ ಇಲ್ಲ. ಎಲಿಮಿನೇಟ್​ ಆಗಿರುವ ಸ್ಪರ್ಧಿಯ ಹೆಸರು ಹೇಳುವ ಮೊದಲೇ ಸೇಫ್ ಆಗಿದ್ದ ವರ್ತೂರ್‌ ಸಂತೋಷ್ ಮನೆಯಿಂದ ಹೊರ ಹೋಗುವ ಪಟ್ಟು ಹಿಡಿದರು. ಇದಾದ ಬಳಿಕ ಸುದೀಪ್‌ ಸಹ ವರ್ತೂರ್‌ ಅವರನ್ನು ಮನೆಯಲ್ಲಿರುವಂತೆ ಕನ್ವಿನ್ಸ್‌ ಮಾಡಿದರು. ಆದರೂ ವರ್ತೂರ್‌ ತಮ್ಮ ಪಟ್ಟು ಬಿಡಲಿಲ್ಲ. ಆಗ ಸುದೀಪ್‌ ಅರ್ಧಕ್ಕೆ ನಿಲ್ಲಿಸಿ, ವೇದಿಕೆಯಿಂದ ನಡೆದರು. 


COMMERCIAL BREAK
SCROLL TO CONTINUE READING

ಹಳ್ಳಿಕಾರ್ ಒಡೆಯ ವರ್ತೂರ್‌ ಸಂತೋಷ್ ಮನವೊಲಿಸಲು‌ ಬಿಗ್‌ ಬಾಸ್‌ ಸಹ ನಾನಾ ಪ್ಲಾನ್ ಮಾಡ್ತಿದ್ದಾರೆ. ಈ ನಡುವೆ ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗಲು ವರ್ತೂರ್​ ಸಂತೋಷ್ ಹೊಸ ದಾರಿ ಹುಡುಕಿದ್ದಾರೆ. ಈ ಬಗ್ಗೆ ತುಕಾಲಿ ಸಂತು ಹಾಗೂ ಡ್ರೋನ್ ಪ್ರತಾಪ್ ಜೊತೆ ವರ್ತೂರ್ ಚರ್ಚೆ ಮಾಡಿದ್ದಾರೆ. 


ಇದನ್ನೂ ಓದಿ : ಬಿಗ್ ಬಾಸ್ ನಿಯಮ ಮೀರಿ ಅರ್ಧಕ್ಕೆ ಹೊರ ಬರುವವರಿಗೆ ಬೀಳುತ್ತೆ ಭಾರೀ ದಂಡ.!


ಜಪ್ಪಯ್ಯ ಅಂದ್ರೂ ಮನೆಯಿಂದ ಹೊರಗೆ ಹೋಗೇ ತೀರುತ್ತೀನಿ ಎಂದು ಹಠ ಹಿಡಿದಿರುವ ವರ್ತೂರ್‌ ಅವರನ್ನು ಮನೆಯಿಂದ ಆಚೆ ಕಳುಹಿಸಲು ತುಕಾಲಿ ಸಂತು ಒಂದು ಐಡಿಯಾ ಮಾಡಿದ್ದಾರೆ. ಬಿಗ್​ ಬಾಸ್ ಮನೆಯ ಗೋಡೆ ಹಾರುವ ಬಗ್ಗೆ ವರ್ತೂರ್‌ ಅವರಿಗೆ ಪ್ಲ್ಯಾನ್‌ ನೀಡಿದ್ದಾರೆ. 


ಮನೆಯಲ್ಲಿರುವ ಮಹಿಳೆಯರ ಸೀರೆಯನ್ನು ಕಟ್ಟಿ ಗೋಡೆ ಹಾರಿ ಬಿಡಿ. ಆಮೇಲೆ ಅಲ್ಲಿಂದ ಹಾಗೇ ಮನೆಗೆ ಹೋಗಿ ಎಂದು ತುಕಾಲಿ ಅವರು ವರ್ತೂರ್‌ ಗೆ ಹೇಳಿದ್ದಾರೆ. ಅದಕ್ಕೆ ವರ್ತೂರ್‌, ನಿಮಗೆ ಹೊಡೆದ್ರೆ ಸಾಕು ಅವರೇ ನನ್ನನ್ನು ಹೊರಗೆ ಕಳುಹಿಸುತ್ತಾರೆ ಎಂದು ವರ್ತೂರ್ ಸಂತೋಷ್ ಹೇಳಿದ್ದಾರೆ. ಇದೀಗ ವರ್ತೂರ್‌ ತಾಯಿಯನ್ನು ಭೇಟಿಯಾಗುವ ಬಯಕೆ ಇಟ್ಟಿದ್ದರು. ಅಂತೆಯೇ ತಾಯಿ ಬಿಗ್‌ ಬಾಸ್‌ ಮನೆಗೆ ಬಂದಿದ್ದಾರೆ. ಆ ಬಳಿಕವಾದರೂ ಸಂತೋಷ್‌ ಮನೆಯಲ್ಲೇ ಇರುತ್ತಾರಾ ಕಾದು ನೋಡಬೇಕಿದೆ. 


ಇದನ್ನೂ ಓದಿ : BBK10: ಕಿಚ್ಚನ ಮಾತಿಗೂ ಒಪ್ಪದ ವರ್ತೂರ್.. ಹೊರಹೋಗುವ ಪಟ್ಟು ಹಿಡಿದಿರೋದು ಯಾಕೆ? ಇಲ್ಲಿದೆ ನೋಡಿ ಅಸಲಿ ಕಾರಣ!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.