BBK10: ಕಿಚ್ಚನ ಮಾತಿಗೂ ಒಪ್ಪದ ವರ್ತೂರ್.. ಹೊರಹೋಗುವ ಪಟ್ಟು ಹಿಡಿದಿರೋದು ಯಾಕೆ? ಇಲ್ಲಿದೆ ನೋಡಿ ಅಸಲಿ ಕಾರಣ!

Varthur Santhosh : ಕಿಚ್ಚ ಸುದೀಪ್‌ ಅವರು ವರ್ತೂರ್‌ ನೀವು ಸೇಫ್‌ ಎನ್ನುತ್ತಿದ್ದಂತೆ ಹೊತ್ತಿಕೊಂಡ ಕಿಡಿ ಇನ್ನೂ ಆರಿಲ್ಲ. ಸುದೀಪ್‌ ಎಷ್ಟೆಲ್ಲ ಪ್ರಯತ್ನ ಪಟ್ಟರೂ ವರ್ತೂರ್‌ ಮಾತ್ರ ಮನೆಯಿಂದ ಹೊರ ಹೋಗಲೇ ಬೇಕು ಎಂದು ಪಟ್ಟು ಹಿಡಿದರು. 

Written by - Chetana Devarmani | Last Updated : Nov 13, 2023, 08:30 AM IST
  • ಬಿಗ್‌ ಬಾಸ್‌ ನಿಂದ ಹೊರ ಹೋಗುವ ಪಟ್ಟು ಹಿಡಿದ ವರ್ತೂರ್‌
  • ಕಿಚ್ಚನ ಮಾತಿಗೂ ಒಪ್ಪದ ವರ್ತೂರ್ ಸಂತೋಷ್‌
  • ಹೊರಹೋಗುವ ಪಟ್ಟು ಹಿಡಿದಿರುವುದು ಇದೇ ಕಾರಣಕ್ಕೆ!
BBK10: ಕಿಚ್ಚನ ಮಾತಿಗೂ ಒಪ್ಪದ ವರ್ತೂರ್.. ಹೊರಹೋಗುವ ಪಟ್ಟು ಹಿಡಿದಿರೋದು ಯಾಕೆ? ಇಲ್ಲಿದೆ ನೋಡಿ ಅಸಲಿ ಕಾರಣ!   title=
Varthur Santhosh

Bigg Boss Kannada 10 : ಬಿಗ್‌ ಬಾಸ್‌ ಕನ್ನಡ ಸೀಸನ್‌ 10 ಐದು ವಾರಗಳನ್ನು ಮುಗಿಸಿ ಆರನೇ ವಾರಕ್ಕೆ ಕಾಲಿಟ್ಟಿದೆ. ನಿನ್ನೆಯ ವೀಕೆಂಡ್‌ ಎಪಿಸೋಡ್‌ನಲ್ಲಿ ಕಿಚ್ಚ ಸುದೀಪ್‌ ಜೊತೆ ಮನೆಯವರೆಲ್ಲ ಭರ್ಜರಿಯಾಗಿ ದೀಪಾವಳಿ ಆಚರಿಸಿದ್ದಾರೆ. ಪಟಾಕಿ ಕೊಟ್ಟು, ಸಿಹಿ ತಿನ್ನಿಸಿ, ಕುಣಿದು ಕುಪ್ಪಳಿಸಿ ಸಂಭ್ರಮಿಸಿದ್ದಾರೆ. ದೀಪಾವಳಿ ಹಬ್ಬದ ಸಡಗರದ ಬಳಿಕ ಪ್ರತಿ ವಾರದಂತೆಯೇ ಈ ವಾರವೂ ಒಬ್ಬರನ್ನ ಮನೆಯಿಂದ ಎಲಿಮಿನೇಟ್‌ ಮಾಡಬೇಕಿತ್ತು. ಆದರೆ ಅಸಲಿಗೆ ದೀಪಾವಳಿ ಬಾಂಬ್‌ ಅಲ್ಲಿಯೇ ಸಿಡಿದಿದ್ದು ನೋಡಿ..

ಕಿಚ್ಚ ಸುದೀಪ್‌ ಅವರು ವರ್ತೂರ್‌ ನೀವು ಸೇಫ್‌ ಎನ್ನುತ್ತಿದ್ದಂತೆ ಹೊತ್ತಿಕೊಂಡ ಕಿಡಿ ಇನ್ನೂ ಆರಿಲ್ಲ. ಸುದೀಪ್‌ ಅವರು ವರ್ತೂರ್‌ ಸಂತೋಷ್‌ ಅವರನ್ನು ಸೇಫ್‌ ಮಾಡಿದ ಬಳಿಕ ನಿಮಗೆ ನಿಜವಾಗಲೂ ಮನಸಾರೆ ಈ ಮನೆಯಲ್ಲಿ ಇರಲು ಇಷ್ಟವಿದೆಯೋ? ಇಲ್ಲವೋ? ಎಂದು ಕೇಳಿದ್ದಾರೆ. ಆಗ ಸಂತೋಷ್‌ ನನಗೆ ನಿಜವಾಗಲೂ ಈ ಮನೆಯಲ್ಲಿ ಇರಲು ಆಗ್ತಿಲ್ಲ. ಅದಕ್ಕೆ ಕಾರಣ ಹೊರಗೆ ನಡೆದ ಘಟನೆಗಳು ಎಂದು ಭಾವುಕರಾಗುತ್ತಾರೆ. 

ಅವರನ್ನು ಸಮಾಧಾನ ಪಡಿಸಲು ಕಿಚ್ಚ ಶತ ಪ್ರಯತ್ನ ಮಾಡಿದರು. ಇದಕ್ಕೆ ಕಾರಣ ಕೇವಲ 24 ಗಂಟೆಯಲ್ಲಿ ವರ್ತೂರ್‌ 34 ಲಕ್ಷಕ್ಕೂ ಹೆಚ್ಚು ವೋಟ್‌ ಪಡೆದಿದ್ದರು. ಆ ಜನರಿಗೆ ನಿರಾಸೆ ಮೂಡಿಸುವುದು ಕಿಚ್ಚ ಸುದೀಪ್‌ ಅವರಿಗೆ ಇಷ್ಡವಿರಲಿಲ್ಲ. ಸುದೀಪ್‌ ಎಷ್ಟೆಲ್ಲ ಪ್ರಯತ್ನ ಪಟ್ಟರೂ ವರ್ತೂರ್‌ ಮಾತ್ರ ಮನೆಯಿಂದ ಹೊರ ಹೋಗಲೇ ಬೇಕು ಎಂದು ಪಟ್ಟು ಹಿಡಿದರು. ಇದರಿಂದ ಬೇಜಾರಾದ ಕಿಚ್ಚ ನೀತು ಮತ್ತು ಈಶಾನಿ ಅವರನ್ನು ಹಾಗೇ ಬಿಟ್ಟು, ಯಾಋು ಎಲಿಮಿನೇಟ್‌ ಎಂಬದನ್ನು ಸಹ ಘೋಷಿಸದೇ ವೇದಿಕೆಯಿಂದ ತೆರಳಿದ್ದಾರೆ. 

ಇದನ್ನೂ ಓದಿ : ಬಿಗ್ ಬಾಸ್ ನಿಯಮ ಮೀರಿ ಅರ್ಧಕ್ಕೆ ಹೊರ ಬರುವವರಿಗೆ ಬೀಳುತ್ತೆ ಭಾರೀ ದಂಡ.! 

ಇದು ಬಿಗ್‌ ಬಾಸ್‌ ವೀಕ್ಷಕರಿಗೂ ಅಚ್ಚರಿ ಮೂಡಿಸಿದೆ. ಕೊನೆಗೆ ಬಿಗ್‌ ಬಾಸ್‌ ಮನೆಯಲ್ಲಿರುವ ಜನರೆಲ್ಲ ಸೇರಿ ವರ್ತೂರ್‌ ಅವರಿಗೆ ಕನ್ವೆನ್ಸ್‌ ಮಾಡಲು ಯತ್ನಿಸಿದ್ದಾರೆ. ಇದು ಕೂಡ ಸಾಧ್ಯವಾಗಲಿಲ್ಲ. ನೀವು ಯಾಕೆ ಹೊರಗೆ ಹೋಗಬೇಕು ಎಂದು ಒತ್ತಾಯ ಮಾಡಿ ಕೇಳಿದಾಗ ವರ್ತೂರ್‌ ಅಸಲಿ ವಿಚಾರ ಬಾಯಿಬಿಟ್ಟಿದ್ದಾರೆ. 

ಹೊರಗೆ ಕೆಲವು ಘಟನೆ ನಡೆದಿದ್ದು, ನಾನು ಅದರಿಂದ ತುಂಬಾ ಡಿಸ್ಟರ್ಬ್‌ ಆಗಿದ್ದೇನೆ. ಅದರಿಂದ ಹೊರ ಬರಲು ನನಗೆ ಆಗುತ್ತಿಲ್ಲ. ಆ ಸಮಯದಲ್ಲಿ ನನ್ನ ಜೊತೆಯಿದ್ದವರಿಗೆ ಬಿಟ್ಟು ನಾನು ಇಲ್ಲಿರುವುದು ಸರಿ ಎನಿಸುತ್ತಿಲ್ಲ. ನನ್ನ ಮನಸಲ್ಲಿ ಅದೇ ಕೊರೆಯುತ್ತಿದೆ. ಆಟದ ಮೇಲೆ ಏಕಾಗ್ರತೆ ವಹಿಸಲು ಆಗ್ತಿಲ್ಲ. ಕ್ಯಾಪ್ಟನ್ಸಿ ಟಾಸ್ಕ್‌ ಆಡಲು ಶಕ್ತಿ ಇರಲಿಲ್ಲ ಅಂತಲ್ಲ. ನನಗೆ ಆಡುವ ಮನಸಿರಲಿಲ್ಲ. ಹೀಗೆ ಮನಸಿಲ್ಲದೇ ಆಡುವುದು ಸರಿಯಲ್ಲ. ಇದು ನಾನು ಆಟಕ್ಕೆ ಅನ್ಯಾಯ ಮಾಡಿದಂತೆ. ಇಲ್ಲಿ ನಾನು ನ್ಯಾ ಒದಗಿಸುತ್ತಿಲ್ಲ. ಅದಕ್ಕೆ ನಾನು ಹೊರಹೋಗಬೇಕು ಎಂದರು. 

ಅಲ್ಲದೇ, ಈ ಮನೆಯ ವಾತಾವರಣ ನನಗೆ ಸರಿಯಾಗುತ್ತಿಲ್ಲ. ಬಂದ ದಿನದಿಂದ ಇಲ್ಲೇ ಇದ್ದಿದ್ದರೆ ನನಗೆ ಹೀಗೆ ಅನಿಸುತ್ತಿರಲಿಲ್ಲ. ಆದರೆ ಹೊರಹೋಗಿ ಬಂದಮೇಲೆ ಇಲ್ಲಿ ನನಗೆ ಇರಲು ಆಗ್ತಿಲ್ಲ. ಇಲ್ಲಿನ ಜನರ ನಡವಳಿಕೆ ನನಗೆ ಸರಿ ಹೊಂದುತ್ತಿಲ್ಲ. ಇಲ್ಲಿ ಹಲವರಿಗೆ ನಾನು ಹೊರ ಹೋಗುವುದೇ ಬೇಕಿದೆ ಎಂದು ವರ್ತೂರ್‌ ಸಂತೋಷ್‌ ಹೇಳಿದರು. 

ಇದನ್ನೂ ಓದಿ : Bigg Boss 10 : ಈ ವಾರ ವರ್ತೂರ್‌ ಸಂತೋಷ್‌ ಪಡೆದ ಮತಗಳು ಎಷ್ಟು ಲಕ್ಷ ಗೊತ್ತೇ! 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News