Vinay Rajkumar : ದೊಡ್ಮನೆ ಕುಡಿ ವೇಳೆ ವಿನಯ್‌ ರಾಜಕುಮಾರ್ ಸಾಲು ಸಾಲು ಚಿತ್ರಗಳಲ್ಲಿ ಬಣ್ಣ ಹಚ್ಚಿದ್ದಾರೆ‌‌. ತಮ್ಮ ನಟನೆಯಿಂದಲೇ ದೊಡ್ಮನೆ ಅಭಿಮಾನಿಗಳ ಮನಗೆದ್ದಿರುವ ವಿನಯ್‌ ಇದೀಗ ತಮ್ಮ ಗಟ್ಟಿ ನಿರ್ಧಾರದಿಂದ ಕನ್ನಡಿಗರ ಹೃದಯ ಕದ್ದಿದ್ದಾರೆ. ವಿನಯ್ ನಟನೆಗೆ ಮನಸೊತಿರೋ ಕಾಲಿವುಡ್ ಮಂದಿ ಬಿಗ್ ಆಫರ್ ಕೊಟ್ಟಿದ್ದು ಆ ಆಫರ್‌ನ ಅಣ್ಣಾವ್ರ ಮೊಮ್ಮಗ ನಯವಾಗಿ ತಿರಸ್ಕರಿಸಿದ್ದಾರೆ ಎನ್ನಲಾಗಿದೆ. ಅಷ್ಟಕ್ಕೂ ವಿನಯ್‌ಗೆ ಆಫರ್ ಕೊಟ್ಟಿದ್ಯಾರು..? ಅದ್ಯಾವ ಕಾರಣಕ್ಕೆ ಸ್ಟಾರ್ ನಟನ ಚಿತ್ರವನ್ನು ರಿಜೆಕ್ಟ್ ಮಾಡಿದ್ರು..? ಅಂತೀರಾ.. ಮುಂದೆ ಓದಿ 


COMMERCIAL BREAK
SCROLL TO CONTINUE READING

ದೊಡ್ಮನೆ.. ಕಲಾಸರಸ್ವತಿಯ ಸೇವೆಯಲ್ಲಿ ಸಂಪೂರ್ಣ ತಮ್ಮನ ತಾವು ತೊಡಗಿಸಿಕೊಂಡಿರೋ ಕುಟುಂಬ. ಕಳೆದ 50 ವರ್ಷಗಳಿಂದ ಅಣ್ಣಾವ್ರ ಕುಟುಂಬ ಕನ್ನಡ ಸಿನಿರಸಿಕರ ರಂಜಿಸುತ್ತ ಬಂದಿದೆ. ಅಣ್ಣಾವ್ರ ಕುಟುಂಬದ ಮೂರನೇ ತಲೆಮಾರು ಸದ್ಯ ಕನ್ನಡ ಸಿನಿ ರಂಗದಲ್ಲಿ ಬೇರೂರ್ತಿದ್ದು, ರಾಜ್‌ ಮೊಮ್ಮಕ್ಕಳ ಮೇಲೆ ದೊಡ್ಡ ನಿರೀಕ್ಷೆಯನ್ನೆ ಇಟ್ಟು ಕೊಂಡಿದ್ದಾರೆ ಅವರ ಅಭಿಮಾನಿ ದೇವರುಗಳು. ವಿನಯ್ ರಾಜಕುಮಾರ್, ಧನ್ಯಾ ರಾಮ್, ಧೀರೇನ್ ಈಗಾಗಲೇ ಬಣ್ಣ ಹಚ್ಚಿ ಸಿನಿಪ್ರೇಮಿಗಳ ರಂಜಿಸಿದ್ರೆ, ಯುವರಾಜ್ ಕುಮಾರ್ ಸ್ಯಾಂಡಲ್‌ವುಡ್‌ಗೆ ಬಲಗಾಲಿಡೋಕೆ ಕಾತರದಿಂದ ಕಾಯ್ತಿದ್ದಾರೆ.


ಇದನ್ನೂ ಓದಿ: ಸುಮ್ಸುಮ್ನೆ ಹೊಗಳಿಕೊಳ್ಳೋಕೆ ನಮಗೇನು ನಾಯಿ ಕಚ್ಚಿದೆಯಾ..? ಕ್ರಾಂತಿ ಸಕ್ಸಸ್‌ ಆಗಿದೆ..!


ಇನ್ನು ವಿನಯ್ ಈಗಾಗಲೇ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದು, ನಟನೆ ಅನ್ನೋದು ಅಣ್ಣಾವ್ರ ಕುಟುಂಬಕ್ಕೆ ರಕ್ತದಲ್ಲಿದೆ ಇದೆ ಅನ್ನೋದು ಫ್ರೂವ್ ಮಾಡಿದ್ದಾರೆ. ವಿನಯ್ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದು, ಅಂದು ಕೊಂಡಂತೆ ಗೆಲುವು ಸಿಗದಿದ್ರು, ತಮ್ಮ ನಟನೆ ಮೂಲಕ ಚಿತ್ರರಂಗಕ್ಕೆ ಒಳ್ಳೆ ನಟ ಅನ್ನೋ ಭರವಸೆಯಂತೂ ಮೂಡಿಸಿದ್ದಾರೆ. ಅಲ್ಲದೆ ಸಾಕಷ್ಟು ಯುವ ನಿರ್ದೇಶಕರು ಅಣ್ಣಾವ್ರ ಮೊಮ್ಮಗನಿಗಾಗಿ ಕತೆ ಬರೆದು ಸಿನಿಮಾ ಮಾಡುವ ಕನಸು ಕಾಣ್ತಿದ್ದಾರೆ. ಅದೇ ರೀತಿ ಅಣ್ಣಾವ್ರ ಮೊಮ್ಮಗನ ಮೇಲೆ ನಮ್ಮ ಮಣ್ಣಿನ ನಿರ್ದೇಶಕರು ಮಾತ್ರವಲ್ಲ ಕಾಲಿವುಡ್ ನಿರ್ದೇಶಕರು ವಿನಯ್ ಅನ್ನು ಮೈಂಡ್ ನಲ್ಲಿ ಇಟ್ಟುಕೊಂಡು ಕತೆ ರೆಡಿಮಾಡಿ ಕಾಲಿವುಡ್ ಗೆ ಬರುವಂತೆ ಆಫರ್ ಕೊಟ್ಟಿದ್ದಾರೆ. ವಿಶೇಷ ಅಂದ್ರೆ ವಿನಯ್ ತಮಿಳು ಚಿತ್ರಕ್ಕೆ ನಾಯಕನಾಗಿ ಆಫರ್ ಮಾಡಿಲ್ಲ ಬದಲಿಗೆ ಸೂಪರ್ ಸ್ಟಾರ್ ಚಿತ್ರದಲ್ಲಿ ಪ್ರಮುಖ ಪಾತ್ರವೊಂದಕ್ಕೆ ಅಣ್ಣಾವ್ರ ಮೊಮ್ಮಗನ ಹಿಂದೆ ಬಿದ್ದು, ಬರಿಗೈಲಿ ವಾಪಸ್ಸಾಗಿದ್ದಾರೆ.


ಅರೆರೆ.. ಇದ್ಯಾವ್ದಪ್ಪ ಹೊಸ ವಿಷ್ಯ..ಅಣ್ಣಾವ್ರ ಮೊಮ್ಮಗ ಅದ್ಯಾವ ಸೂಪರ್ ಸ್ಟಾರ್ ಸಿನಿಮಾ ರಿಜೆಕ್ಟ್ ಮಾಡಿದ್ರಪ್ಪ ಅಂದ್ರೆ ಅದಕ್ಕೆ ಉತ್ತರ ಇಂಡಿಯನ್ ಸೂಪರ್ ಸ್ಟಾರ್ ರಜನಿಕಾಂತ್. ಇದೇನಪ್ಪ ಅಂತ್ರ ಶಾಕ್ ಆದ್ರು ಈ ವಿಚಾರವನ್ನು ನಂಬಲೇ ಬೇಕು. ಯಾಕಂದ್ರೆ ಅಣ್ಣಾವ್ರ ಮೊಮ್ಮಗ ತಲೈವ ರಜನಿಕಾಂತ್ ಅವರ ಚಿತ್ರದಲ್ಲಿ ನಟಿಸುವಂತೆ ಬಂದ ಬಿಗ್ ಆಫರ್ ಆನ್ನು ತಿರಸ್ಕರಿಸಿದ್ದಾರೆ. ರಜನಿಕಾಂತ್ ಚಿತ್ರದಲ್ಲಿ ನಟಿಸೊಕೆ ಅವಕಾಶ ಸಿಕ್ರೆ ಸಾಕಪ್ಪ ಅಂತ ಸ್ಟಾರ್ ನಟರೆ ಕಾಯ್ತಾರೆ ಅದ್ರೂ ವಿನಯ್ ರಜನಿ ಚಿತ್ರದಲ್ಲಿ ನಟಿಸೋಲ್ಲ ಅಂತ ಹೇಳುವ ಮೂಲಕ ಚಿತ್ರದ ನಿರ್ದೇಶಕರಿಗೆ ನಿರಾಸೆ ಮೂಡಿಸಿದ್ದಾರೆ. 


ಇದನ್ನೂ ಓದಿ: ಬ್ಯಾಂಕಾಕ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ʼಪವರ್ ಸ್ಟಾರ್ ಪುನೀತ್ʼ ಅವರಿಗೆ ಗೌರವ...!


ಅಷ್ಟಕ್ಕೂ ರಾಘಣ್ಣನ ಮಗ ರಜನಿಯ ಯಾವಚಿತ್ರವನ್ನು ರಿಜೆಕ್ಟ್ ಮಾಡಿದ್ರು. ಚಿತ್ರದ ಟೈಟಲ್ ಏನು..? ಆ ಚಿತ್ರಕ್ಕೆ ನಿರ್ದೇಶಕರು ಯಾರು ಅಂತ ಗೊತ್ತಾದ್ರೆ  ವಿನಯ್ ಈ ಚಿತ್ರವನ್ನು ರಿಜೆಕ್ಟ್ ಮಾಡಿದಾದ್ರು ಯಾಕೆ ಅನ್ನೋ ಪ್ರಶ್ನೆ ಎಲ್ಲರಲ್ಲೂ ಮೂಡುತ್ತೆ. ರಜನಿ ಸದ್ಯ ʼಜೈಲರ್ʼ ಚಿತ್ರದಲ್ಲಿ ಬ್ಯಸಿಯಾಗಿದ್ದಾರೆ. ‌ವಿಶೇಷ ಅಂದ್ರೆ ಜೈಲರ್ ಚಿತ್ರದಲ್ಲಿ
ಶಿವಣ್ಣ ಕೂಡ ಬಣ್ಣ ಹಚ್ಚಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಈ ಚಿತ್ರವನ್ನು  ಕಂಪ್ಲೀಟ್ ಮಾಡಿ ರಜನಿ ತನ್ನ ಮಗಳು ಐಶ್ವರ್ಯ ನಿರ್ದೇಶನದಲ್ಲಿ ʼಲಾಲ್ ಸಲಾಮ್ʼ ಚಿತ್ರದಲ್ಲಿ ನಟಿಸಲಿದ್ದಾರೆ.


ರಜನಿಯ 170ನೇ ಚಿತ್ರ ಲಾಲ್ ಸಲಾಮ್ ಚಿತ್ರದಲ್ಲಿ ನಟಿಸುವಂತೆ ವಿನಯ್‌ಗೆ ರಜನಿ ಮಗಳು ಐಶ್ವರ್ಯ ಅವರೇ ಆಫರ್ ಕೊಟ್ಟಿದ್ರಂತೆ ಅದ್ರೆ ವಿನಯ್ ರಜನಿ ಚಿತ್ರದ ಆಫರ್ ಅನ್ನು ತಿರಸ್ಕರಿಸಿದ್ದಾರೆ ಅನ್ನೋ ಮಾಹಿತಿ ಸಿನಿಮಾ ಟೆಂಟ್ ತಂಡಕ್ಕೆ ಸಿಕ್ಕಿದೆ. ಅಣ್ಣಾವ್ರ ಫ್ಯಾಮಿಲಿಗೂ ಹಾಗೂ ರಜನಿಗೂ ಆತ್ಮೀಯ ಸಂಭದವಿದೆ. ಅಲ್ಲದೆ ತುಂಬಾ ವರ್ಷಗಳ ನಂತ್ರ ಶಿವಣ್ಣ ರಜನಿ ಚಿತ್ರದಲ್ಲಿ ಕಾಣಿಸ್ತಿದ್ದಾರೆ. ಇಷ್ಟಾದ್ರು ವಿನಯ್ ಅದ್ಯಾವ ಕಾರಣಕ್ಕೆ ರಜನಿಯ 170 ನೇ ಚಿತ್ರದ ಆಫರ್ ಕೈಬಿಟ್ರು ಅನ್ನೋ ಪ್ರಶ್ನೆ ದೊಡ್ಮನೆ ಅಭಿಮಾನಿಗಳಲ್ಲಿದೆ. ಅದರೆ ವಿನಯ್ ಚಿತ್ರದ ಕಥೆ ತನ್ನ ಈಮೇಜ್ ಗೆ ಹೊಂದದ ಕಾರಣ ಈ ಚಿತ್ರದ ಆಫರ್ ಅನ್ನು ಅಕ್ಸೆಪ್ಟ್ ಮಾಡಿಲ್ಲ ಅನ್ನೋ ಇನ್‌ ಸೈಡ್ ಸಮಾಚಾರ ವಿನಯ್ ಆಪ್ತ ಮೂಲಗಳಿಂದ ತಿಳಿದು ಬಂದಿದೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.